ಸೆಪ್ಟೆಂ 27, 2014

ಜನಸಂಗ್ರಾಮ ಪರಿಷತ್ತಿನಿಂದ ಯುವಜನತೆಗಾಗಿ ಯುವಚೈತನ್ಯ ಮತ್ತು ನಾಯಕತ್ವ ತರಬೇತಿ ಕಾರ್ಯಕ್ರಮ

ಜನ ಸಂಗ್ರಾಮ ಪರಿಷತ್ - ಪತ್ರಿಕಾ ಟಿಪ್ಪಣಿ
ಬೆಂಗಳೂರು, 26-09-2014
ನಾಡಿನ ಸುಸ್ಥಿರ ಅಭಿವೃದ್ಧಿಗೆ ಪ್ರಜ್ಞಾವಂತ ನಾಗರಿಕರ ಅದರಲ್ಲೂ ಯುವಜನರ ಪಾತ್ರ ಮಹತ್ವದ್ದಾಗಿರುತ್ತದೆ. ನಾಡಿನ ನೆಲ ಜಲ ಮತ್ತು ಇತರೆ ನೈಸರ್ಗಿಕ ಸಂಪತ್ತಿನ ರಕ್ಷಣೆಯಲ್ಲಿ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಜ್ಞಾವಂತ ಯುವಜನರ ಪಾತ್ರ ನಿರ್ಣಾಯಕ ಪಾತ್ರವಹಿಸಲಿದೆ. ಇಂತಹ ಪ್ರಜ್ಞಾವಂತ ಯುವಜನರನ್ನು ಗಮನದಲ್ಲಿ ಇಟ್ಟುಕೊಂಡು ಜನಸಂಗ್ರಾಮ ಪರಿಷತ್ ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿದೆ. ತರಬೇತಿಯು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಪರಿವರ್ತನಾ ಸದನದಲ್ಲಿ ನಡೆಯಲಿದ್ದು, 18ರಿಂದ 35 ರವರೆಗಿನ ವಯೋಮಿತಿಯ ಆಸಕ್ತ ಯುವಜನರು ಭಾಗವಹಿಸಬಹುದಾಗಿದೆ. ತರಬೇತಿಯ ಸಮಯದಲ್ಲಿ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, 500 ರೂಪಾಯಿಗಳ ಶುಲ್ಕವನ್ನು ನೀಡಬೆಕಾಗಿರುತ್ತದೆ. ತರಬೇತಿಗೆ ನೊಂದಾಯಿಸಿಕೊಳ್ಳಲು 9916601969/ 8867186343 ದೂರವಾಣಿಗೆ ಕರೆ ಮಾಡಬೇಕು.
ತರಬೇತಿಯನ್ನು ಅಕ್ರಮ ಗಣಿಗಾರಿಕೆ, ಭೂಗಳ್ಳರ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕರು ಮತ್ತು ಜನ ಸಂಗ್ರಾಮ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್. ಆರ್. ಹಿರೇಮಠ, ಪಶ್ಚಿಮಘಟ್ಟಗಳ ಉಳುವಿಗಾಗಿ, ಸುಸ್ಥಿರ ಅಭಿವೃದ್ಧಿ ಮತ್ತು ಕೃಷಿ ಬಗೆಗಿನ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಸಿ. ಯತಿರಾಜು, ಸಾಮಾಜಿಕ ಹೋರಾಟಗಾರರಾದ ರವಿ ಕೃಷ್ಣಾರೆಡ್ಡಿ, ಶಾ0ತಲಾ ದಾಮ್ಲೆ, ದೀಪಕ್ ಸಿ. ಎನ್. ತುಮಕೂರಿನ ಸಿಜ್ಞಾ ಸಂಸ್ಥೆಯ ಜ್ಞಾನ ಸಿಂಧು ಸ್ವಾಮಿ ಮತ್ತು ಪ್ರತಿಮಾ ನಾಯಕ್ ಹಾಗೂ ಇನ್ನಿತರರು ನಡೆಸಿಕೊಡಲಿದ್ದಾರೆ. ತರಬೇತಿಯಲ್ಲಿ ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ಪ್ರಮುಖವಾಗಿ ಸಾಮಾಜಿಕ ಚಳುವಳಿಗಳು, ಸ್ವರಾಜ್ಯ, ಪ್ರಜಾಪ್ರಭುತ್ವದ ಪರಿಕಲ್ಪನೆ, ಸುಸ್ಥಿರ ಬದಲಾವಣೆ, ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದಂತೆ ಸಾಹಿತ್ಯ ಕೃತಿಗಳ ಪರಿಚಯ, ಮಾಹಿತಿ ಹಕ್ಕು ಕಾಯ್ದೆ ಮತ್ತು ಇನ್ನೂ ಇತರ ವಿಷಯಗಳನ್ನು ಒಳಗೊಂಡಿರುತ್ತದೆ. ತರಬೇತಿಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು, ತುಮಕೂರಿನ ಹಸಿರು ಬಳಗ ಮತ್ತು ಸಿಜ್ಞಾ ತಂಡಗಳು ನಡೆಸಿಕೊಡಲಿವೆ.
ತರಬೇತಿಗೆ ಕೇವಲ 30 ಜನರಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಮೊದಲೇ ಹೆಸರು ನೊಂದಾಯಿಸಲು ಮತ್ತು ಹೆಚ್ಚಿನ ವಿವರಗಳಿಗೆ 9916601969 / 8867186343 ದೂರವಾಣಿಯನ್ನು ಸಂಪರ್ಕಿಸಬಹುದು.
ದೀಪಕ್ ಸಿ. ಎನ್.
ಪ್ರಧಾನ ಕಾರ್ಯದರ್ಶಿ

“Flash” ಬ್ಯಾಕ್


payaswini
ಸುಳ್ಯದ ಸಮೀಪ

Dr Ashok K R
ಸಾವಿರ ಪದಗಳು ಹೇಳಲಾಗದ್ದನ್ನು ಒಂದು ಫೋಟೋ ಹೇಳುತ್ತದೆ ಎಂಬ ಮಾತಿದೆ. ಫೋಟೋಗ್ರಫಿಗಿರುವ ಈ ಶಕ್ತಿಯನ್ನು ಅರಿಯಲು ನಾನು ಸವೆಸಿದ ಒಂದು ಪುಟ್ಟ ಹಾದಿಯ ಅನುಭವಗಳನ್ನು ಈ ‘ಕ್ಯಾಮೆರಾ ಕಣ್ಣು’ ಅಂಕಣದ ಮೂಲಕ ಹಂಚಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡುತ್ತಿದ್ದೇನೆ. ಫೋಟೋಗ್ರಫಿಯ ಅ ಆ ಇ ಈ ತಿಳಿಸಿಕೊಡಲು ಸಾವಿರಾರು ಪುಸ್ತಕಗಳು ಲಭ್ಯವಿದೆ (ಬಹುತೇಕ ಪುಸ್ತಕಗಳನ್ನು ಮುಟ್ಟಿ ನೋಡಷ್ಟೇ ತೃಪ್ತಿ ಪಟ್ಟುಕೊಳ್ಳಬೇಕು, ಅಷ್ಟು ದುಬಾರಿ), ಅಂತರ್ಜಾಲದಲ್ಲೂ ನೂರಾರು ತಾಣಗಳು ಉಚಿತವಾಗಿ ಫೋಟೋಗ್ರಫಿಯ ಮೂಲ ಪಾಠಗಳನ್ನು ಹೇಳಿಕೊಡುತ್ತವೆ. Dp review, digital photography school ನಾನು ಪ್ರಾರಂಭದ ದಿನಗಳಲ್ಲಿ ಓದಿದ ತಾಣಗಳು. ಓದೋದ್ಯಾರು ಅನ್ನೋರಿಗೆ ಯೂಟ್ಯೂಬಿನಲ್ಲಿ ಫೋಟೋಗ್ರಫಿ ಟುಟೋರಿಯಲ್ಸಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳಿವೆ. ಕನ್ನಡದಲ್ಲಿ ಫೋಟೋಗ್ರಫಿಯ ಬಗ್ಗೆ ತಿಳಿಸುವ ತಾಣಗಳು ಒಂದಷ್ಟು ಕಡಿಮೆಯೇ.

ಸೆಪ್ಟೆಂ 25, 2014

ಚಿಕ್ಕ ಹಗರಣ

ಮೂಲ – ಹರ್ಷ Think Bangalore
ಅನುವಾದ – ಡಾ ಅಶೋಕ್ ಕೆ ಆರ್.
ರಾಮಸ್ವಾಮಿ ಪ್ರಖ್ಯಾತ ವ್ಯಕ್ತಿ. ಊರಿನ ಹೈಸ್ಕೂಲಿನಲ್ಲಿ ಹೆಡ್ ಮಾಸ್ಟರ್ ಆಗಿ ಕೆಲಸಮಾಡುತ್ತಿದ್ದರು. ಅವರ ಮಾತೆಂದರೆ ಊರವರಿಗೆಲ್ಲ ಬಹಳ ಗೌರವ. ಕಾರಣ, ಅವರ ಆದರ್ಶಯುತ ಜೀವನ. ಸುಳ್ಳಾಡದೆ, ಯಾರೊಬ್ಬರಿಗೂ ಮೋಸ ಮಾಡದೆ, ಕೆಟ್ಟದನ್ನು ಮಾಡದೆ ಎಲ್ಲರೊಡನೆ ಸೌಮ್ಯದಿಂದ ಸ್ನೇಹಮಯದಿಂದಿರುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಬುದ್ಧಿವಂತರು. ಚೆನ್ನಾಗಿ ಓದಿಕೊಂಡರು. ದೊಡ್ಡವ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದರೆ ಚಿಕ್ಕವ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.

ಸೆಪ್ಟೆಂ 20, 2014

‘ಡೆಲ್ಲಿ’ಯ ಗಲ್ಲಿಯೊಳಗೆ…….




khushwant singh
ಖುಷ್ವಂತ್ ಸಿಂಗರ 'ಡೆಲ್ಲಿ'
ಡಾ ಅಶೋಕ್ ಕೆ ಆರ್.

‘ಡೆಲ್ಲಿ’ – ಖುಷ್ವಂತ್ ಸಿಂಗರ ಅತ್ಯುತ್ತಮ ಪುಸ್ತಕವೆನ್ನಲಾಗುತ್ತದೆ. ಖುಷ್ವಂತ್ ಸಿಂಗರ ‘ದಿ ಕಂಪನಿ ಆಫ್ ವಿಮೆನ್’ ಮತ್ತು ‘ಟ್ರೈನ್ ಟು ಪಾಕಿಸ್ತಾನ್’ ಓದಿದ್ದೆನಷ್ಟೇ. ಕಂಪನಿ ಆಫ್ ವಿಮೆನ್ ಸಾಧಾರಣ ಎನ್ನಿಸಿದರೆ ಟ್ರೈನ್ ಟು ಪಾಕಿಸ್ತಾನ್ ಮೆಚ್ಚುಗೆಯಾಗಿತ್ತು. ಇತ್ತೀಚೆಗೆ ‘ಡೆಲ್ಲಿ’ ಖರೀದಿಸಿ ಓದಿ ಮುಗಿಸಿದೆ. ಒಂದಷ್ಟು ಆಕಳಿಕೆಯೊಂದಿಗೇ ಓದು ಮುಂದುವರೆಯಿತು ಎಂದರೆ ಸುಳ್ಳಲ್ಲ! ಆಕಳಿಸುತ್ತಲೇ ಓದು ಮುಗಿಸಿದ ನಂತರ ತನ್ನ ವಸ್ತುವಿನಿಂದ, ಅರ್ಥಗಳಿಂದ ‘ಡೆಲ್ಲಿ’ ನನ್ನ ಮೆಚ್ಚಿನ ಕಾದಂಬರಿಗಳಲ್ಲೊಂದು ಸ್ಥಾನ ಪಡೆದುಕೊಂಡಿತು ಎಂಬುದೂ ಸತ್ಯ!

ಸೆಪ್ಟೆಂ 18, 2014

ಹನುಮಂತ ಹಾಲಿಗೇರಿಯವರ "ಕೆಂಗುಲಾಬಿ" ಇ ಆವೃತ್ತಿಯಲ್ಲಿ.

Hanumant haaligeri
ಕೆಂಗುಲಾಬಿ
ಕೆಲವು ದಿನಗಳ ಹಿಂದೆ ಕನ್ನಡ ಪುಸ್ತಕಗಳ ಇ-ಆವೃತ್ತಿಯ ಬಗ್ಗೆ ಲೇಖನ ಬರೆದಾಗ ತುಂಬಾ ಹೆಚ್ಚೇನೂ ಪ್ರತಿಕ್ರಿಯೆಗಳು ಸಿಕ್ಕಿರಲಿಲ್ಲ. ಕೆಲವರು ಇ-ಆವೃತ್ತಿಗಳು ಮುದ್ರಿತ ಪ್ರತಿಗಳ ಮಾರಾಟ ಕಸಿಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಒಂದಂತೂ ಸತ್ಯ, ಕನ್ನಡ ಪುಸ್ತಕಕ್ಕೆ ಸದ್ಯಕ್ಕೆ ಇ-ಆವೃತ್ತಿಯ ಮಾರುಕಟ್ಟೆ ಅಷ್ಟಾಗಿ ಇಲ್ಲ. ನಾನು ಹಿಂದೊಮ್ಮೆ ಬರೆದಂತೆ ಇ-ಆವೃತ್ತಿಯನ್ನು ಓದುವವರ ಸಂಖೈ ಹೆಚ್ಚಾದ ದಿನ ಕನ್ನಡ ಪುಸ್ತಕ ಇಲ್ಲದಂತಾಗಬಾರದು. ನನ್ನವೆರಡು ಪುಸ್ತಕಗಳು ಇ-ಆವೃತ್ತಿಯಲ್ಲಿ ಗೂಗಲ್ ಪ್ಲೇ ಮತ್ತು ಸ್ಮಾಶ್ ವರ್ಡ್ಸಿನಲ್ಲಿ ಲಭ್ಯವಿದೆ (ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ). ಪತ್ರಕರ್ತ ಹನುಮಂತ ಹಾಲಿಗೇರಿಯವರು ತಮ್ಮ ಕಾದಂಬರಿ "ಕೆಂಗುಲಾಬಿ - ವೇಶ್ಯಾಜಗತ್ತಿನ ಅನಾವರಣ" ಕಾದಂಬರಿಯನ್ನು ಇ - ಆವೃತ್ತಿಗೆ ಪರಿವರ್ತಿಸುವ ಸಲುವಾಗಿ ಕಳುಹಿಸಿದ್ದರು. ಕೆಂಗುಲಾಬಿ ನಿಜಕ್ಕೂ ಬೆಚ್ಚಿ ಬೀಳಿಸುವ ಕೃತಿ. ತನ್ನ ಸಹಜತೆಯಿಂದ, ಯಾವುದೊಂದನ್ನೂ ಅತಿರೇಕಕ್ಕೆ ಕೊಂಡೊಯ್ಯದ ನಿರೂಪಣೆಯಿಂದಾಗಿ ಗಮನ ಸೆಳೆಯುತ್ತದೆ. ಕಾದಂಬರಿಗೆ ಶಿವಮೊಗ್ಗದ ಕರ್ನಾಟಕ ಸಂಘದಿಂದ ನೀಡಲಾಗುವ ಕುವೆಂಪು ಕಾದಂಬರಿ ಪುರಸ್ಕಾರ ಮತ್ತು ಕಸಾಪದ ಸಮೀರವಾಡಿ ದತ್ತಿ ಪ್ರಶಸ್ತಿಗಳು ದಕ್ಕಿವೆ. ನಾಡಿನ ವಿವಿದೆಡೆ ಈ ಕಾದಂಬರಿಯ ಕುರಿತಾಗಿ ಸಂವಾದಗಳು ನಡೆದಿವೆ.
ಗೂಗಲ್ ಪ್ಲೇನಲ್ಲಿ ಈ ಕಾದಂಬರಿ ಇಂದಿನಿಂದ ಲಭ್ಯವಿದೆ. 
ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ಕಿಸಿ.

ಸೆಪ್ಟೆಂ 16, 2014

“ಚಿದಂಬರ ರಹಸ್ಯ”ವನ್ನೇಕೆ ನಿಷೇಧಿಸಬಾರದು?!



poornachandra tejaswi
ಡಾ ಅಶೋಕ್ ಕೆ ಆರ್.
ಯಾಕೋ ಇತ್ತೀಚೆಗೆ ಕೆಲವು ದಿನಗಳಿಂದ ಪೂರ್ಣಚಂದ್ರ ತೇಜಸ್ವಿಯವರ ‘ಚಿದಂಬರ ರಹಸ್ಯ’ ಬಹಳವಾಗಿ ಕಾಡುತ್ತಿದೆ. ಅಕಸ್ಮಾತ್ ‘ಚಿದಂಬರ ರಹಸ್ಯ’ವೇನಾದರೂ ಈಗ ಬಿಡುಗಡೆಯ ಭಾಗ್ಯ ಕಂಡಿದ್ದರೆ ಅದು ಯಾವ್ಯಾವ ದಿಕ್ಕಿನಿಂದ ವಿರೋಧವೆದುರಿಸಬೇಕಾಗುತ್ತಿತ್ತು ಎಂಬ ಯೋಚನೆ ಬಂತು!

North Karnataka Chronicle Part - 2

Dr Manjunath Chalawadi
To read Part 1 of the chronicle click here
In Gokak, we noticed another strange thing. Let the pictures talk for themselves.


The next day we started early as we wanted to cover all the Bijapur tourist spots, so for first time everybody was ready by five thirty. We reached my uncles home for breakfast and hot aaloo paranthas were waiting (very unusual if you think about it in the context of North Karnataka!). After a superb breakfast we first went to Jamma Masjid. Of course, it was built by Adilshahi, but which one I forgot and we were surprised to learn that among the old mosques, it was second largest in the country.  It was designed by some Persian architect and the central place is engraved.