ಆಗ 18, 2014

ಕನ್ನಡ ಇ-ಪುಸ್ತಕಗಳ ಸಂಖೈ ಹೆಚ್ಚಿಸುವಲ್ಲಿ ನಿಮ್ಮದೂ ಪಾತ್ರವಿರಲಿ.



hingyake
ಡಾ ಅಶೋಕ್ ಕೆ ಆರ್
ನಮಗಿಷ್ಟವಿದೆಯೋ ಇಲ್ಲವೋ, ನಮಗೆ ಬೇಕೋ ಬೇಡವೋ ತಂತ್ರಜ್ಞಾನವೆಂಬುದು ಇವತ್ತು ಎಲ್ಲ ಕ್ಷೇತ್ರಗಳನ್ನೂ ಹಾಸು ಹೊಕ್ಕಾಗಿದೆ. ಪುಸ್ತಕಗಳನ್ನು ಮುದ್ರಣ ರೂಪದಲ್ಲಿಯೇ ಖರೀದಿಸಿ ಹೊಚ್ಚ ಹೊಸ ಪುಟಗಳ ಸ್ವಾದವನ್ನಾಸ್ವಾದಿಸಿ ಒಳಪುಟದಲ್ಲಿ ಹೆಸರು ಬರೆದು ಪುಟ ತಿರುವುತ್ತಾ ಓದುವ ಸಂತಸವನ್ನು ಯಾವ ಫೋನುಗಳಾಗಲೀ ಟ್ಯಾಬ್ಲೆಟ್ಟುಗಳಾಗಲೀ ಮತ್ತಿತರ ಗ್ಯಾಡ್ಜೆಟ್ಟುಗಳಾಗಲೀ ಕೊಡಲು ಸಾಧ್ಯವೇ ಇಲ್ಲ. ಗ್ಯಾಡ್ಜೆಟ್ಟುಗಳಲ್ಲಿ ಓದುವುದು ಕಣ್ಣಿಗೆ ಅಷ್ಟು ಹಿತಕರವೆಲ್ಲವೆಂಬುದು ಸತ್ಯವಾದರೂ ಗ್ಯಾಡ್ಜೆಟ್ಟುಗಳ ಮೇಲಿನ ನಮ್ಮ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೆಂಬುದು ವಾಸ್ತವ. ದಿನಪತ್ರಿಕೆಗಳನ್ನು ಓದುವುದಕ್ಕೆ ಫ್ಯಾಬ್ಲೆಟ್ಟುಗಳ ಉಪಯೋಗ ಹೆಚ್ಚುತ್ತಿದೆ. ಕಷ್ಟವಾದರೂ, ಸಮಾಧಾನವಾಗದಿದ್ದರೂ ಮುದ್ರಣ ಆವೃತ್ತಿಯನ್ನು ಮರೆತು ಇ-ಆವೃತ್ತಿಯ ಪುಸ್ತಕಗಳನ್ನು ಓದುವವರ ಸಂಖೈ ಕ್ರಮೇಣ ಹೆಚ್ಚಾಗುವುದರಲ್ಲಿ ಸಂಶಯವಿರಲಾರದು. ಮೇಲಾಗಿ ಈ ಇ-ಆವೃತ್ತಿಗಳು ವಿಶ್ವಾದ್ಯಂತ ಕ್ಷಣಮಾತ್ರದಲ್ಲಿ ದೊರಕುವ ಸಾಧ್ಯತೆಗಳು ಕೂಡ ಕನ್ನಡ ಪುಸ್ತಕಗಳ ಇ-ಆವೃತ್ತಿ ಹೆಚ್ಚಬೇಕೆಂಬ ಆಶಯಕ್ಕೆ ಪೂರಕವಾಗುತ್ತದೆ.

R K Narayan


ಆಗ 14, 2014

ಅವರೆಲ್ಲರೂ ಪ್ರತಿಭಾವಂತರೇ ಆದರೆ…..



ಡಾ ಅಶೋಕ್ ಕೆ ಆರ್
ಭಾರತದಲ್ಲಿ ಹಗರಣಗಳು ಹೊಸದಲ್ಲ, ಹಗರಣಗಳ ಕುರಿತ ರಾಜಕೀಯ ಮತ್ತು ರಾಜಕೀಯೇತರ ಗದ್ದಲ, ಪ್ರತಿಭಟನೆಗಳು ಹೆಚ್ಚಾಗಿ ಚಳುವಳಿಗಳಾಗಿ ಮಾರ್ಪಟ್ಟ ನಂತರ ಅಧಿಕಾರದಲ್ಲಿರುವ ಪಕ್ಷಗಳು ಆ ಹಗರಣದ ತನಿಖೆಗೆ ವಿವಿಧ ಹಂತದ ತನಿಖಾ ಆಯೋಗಗಳನ್ನು ರಚಿಸುವುದೂ ಹೊಸದಲ್ಲ. ಸಿ.ಐ.ಡಿ ಪೋಲೀಸರಿಂದ ಹಿಡಿದು ನ್ಯಾಯಂಗ, ಸದನ ಸಮಿತಿ, ಸಿ.ಬಿ.ಐ ಸಂಸ್ಥೆಗಳೆಲ್ಲವನ್ನೂ ತನಿಖೆ ಮಾಡಲು ನಿಯೋಜಿಸುವುದು ಸಾಮಾನ್ಯ. ವಿಪರ್ಯಾಸದ ಸಂಗತಿಯೆಂದರೆ ಇಂತಹ ಎಷ್ಟೋ ತನಿಖಾ ಸಂಸ್ಥೆಗಳು ನೀಡಿದ ಅನೇಕಾನೇಕ ವರದಿಗಳು ಅನುಷ್ಠಾನಗೊಳ್ಳದೆ ಸರಕಾರದ ಯಾವುದೋ ಒಂದು ಕಛೇರಿಯಲ್ಲಿ ಧೂಳು ಹಿಡಿದು ಹಾಳಾಗುತ್ತವೆಯೇ ಹೊರತು ತನಿಖಾ ಆಯೋಗ ನೀಡಿದ ಸಲಹೆ ಸೂಚನೆಗಳನ್ನು ಯಥಾವತ್ತಾಗಿ ಜಾರಿಗೆ ತರುವುದು ಅಪರೂಪದ ಸಂಗತಿಯೇ ಆಗಿಹೋಗಿದೆ.

ಆಗ 13, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 36

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ .... ಭಾಗ 35 ಓದಲು ಇಲ್ಲಿ ಕ್ಲಿಕ್ಕಿಸಿ


“ಏನ್ರೀ ಕೀರ್ತನ, ನೀವೂ ನನ್ನ ಜಾತೀನೇ” ಮನೆಯ ಹೊರಗಡೆ ಮುಖ ತೊಳೆಯುತ್ತ ನಿಂತ ಕೀರ್ತನಾಳ ಬಳಿ ಬಂದು ಕೇಳಿದ ಅರುಣ್.

“ನನ್ನ ಜಾತಿ ಯಾವುದು ಅಂತ ನಿಮಗ್ಯಾವಾಗ ತಿಳಿಸಿದೆ”

“ಅಯ್ಯಯ್ಯೋ ಜಾತಿ ಅಂದ್ರೆ ಹುಟ್ಟಿನಿಂದ ಬಂದಿದ್ದಲ್ಲ. ನಾವು ಸೇರಿದ ವೃತ್ತಿಯಿಂದ ಬಂದಿದ್ದು”

ಆಗ 7, 2014

ಓದುವಭ್ಯಾಸ ಹಚ್ಚಿಸಿದ 'ಪ್ರಾಣ್' ಇನ್ನಿಲ್ಲ.

ಒಂದು ಹಂತದ ಓದುವ ಮಟ್ಟ ಮುಟ್ಟಿದ ಮೇಲೆ ನಾವು ಲಿಯೋ ಟಾಲ್ಸ್ಟಾಯ್, ಕುವೆಂಪು, ತೇಜಸ್ವಿ, ಕಾರಂತ, ಕಂಬಾರ, ಭೈರಪ್ಪ, ಶೇಕ್ಸ್ಪಿಯರ್ ಅಂತೆಲ್ಲ ಗಂಭೀರ ಚರ್ಚೆಯನ್ನು ಮಾಡುವವರಂತೆ ನಟಿಸುತ್ತೀವಿ. ನಿಜಕ್ಕೂ ಈ ಮೇಲಿನ ಮತ್ತು ಇನ್ನೂ ಅನೇಕ ಮೇರು ಲೇಖಕರ ಪುಸ್ತಕಗಳನ್ನು ಮೊದಲು ಓದಲಾರಂಭಿಸಿಬಿಟ್ಟಿದ್ದರೆ ಖಂಡಿತವಾಗಿ ಮತ್ತೆ ಜೀವನದಲ್ಲಿ ಪುಸ್ತಕವನ್ನು ಮುಟ್ಟುತ್ತಿರಲಿಲ್ಲ! ಏನ್ ತಲೆ ತಿಂತಾರಪ್ಪ ಇವರೆಲ್ಲ ಎಂಬ ಭಾವದಿಂದ!

ಆಗ 6, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 35

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 34 ಓದಲು ಇಲ್ಲಿ ಕ್ಲಿಕ್ಕಿಸಿ


“ನಿಮ್ಮ ಹೆಸರು ಏನಾದ್ರೆ ನನಗೇನು? ನನ್ನಿಂದ ನಿಮಗೇನಾಗಬೇಕು?”
“ನಮ್ಮಿಬ್ಬರನ್ನೂ ನಕ್ಸಲ್ ಸಂಘಟನೆಗೆ ಸೇರಿಸಲು ನೀವು ಸಹಾಯ ಮಾಡಬೇಕು” ಕೀರ್ತನಾ ಕೂಡ ಮೇಲೆದ್ದು ಕೇಳಿದಳು.
“ನನಗೂ ನಕ್ಸಲ್ ಸಂಘಟನೆಗೂ ಏನು ಸಂಬಂಧ? ನಿಮಗ್ಯಾರು ಹೇಳಿದ್ದು ನನಗೆ ನಕ್ಸಲರ ಜೊತೆಗೆ ನಂಟುಂಟೆಂದು. ನಕ್ಸಲರ ಬಗ್ಗೆ ಮಾತನಾಡ್ತ ಇದ್ದೀವೆಂದೇ ಪೋಲೀಸರು ಬಂಧಿಸೋ ಸಾಧ್ಯತೆಗಳಿವೆ. ಮೊದಲು ಇಲ್ಲಿಂದ ಹೊರಡಿ” ‘ನಾನು ನಕ್ಸಲರ ಬೆಂಬಲಿಗ, ಅವರಿಗೆ ದಿನಸಿ ಕಳುಹಿಸ್ತೀನಿ ಅನ್ನೋದು ನನ್ನ ಮನೆಯವರಿಗೇ ಗೊತ್ತಿಲ್ಲ. ದೂರದ ಮೈಸೂರಿನವರಿಗೆ ಹೇಗೆ ತಿಳಿಯಿತು’ ಎಂದು ಮತ್ತಷ್ಟು ಗಾಬರಿಗೊಳ್ಳುತ್ತಾ ಹೇಳಿದ.