ಆಗ 24, 2016

ಪ್ರಶ್ನೆಗಳಾಗೇ ಉಳಿದವನು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
24/08/2016
ರೈತ ಹಸಿದಿದ್ದಾನೆ!
ಹಾಗಾದವರನ ಅನ್ನ
ಕಸಿದುಕೊಂಡವರ್ಯಾರು?
ರೈತ ಬೆತ್ತಲಾಗಿದ್ದಾನೆ!
ಹಾಗಾದವರನ ಬಟ್ಟೆ
ಬಿಚ್ಚಿಕೊಂಡಿದ್ಯಾರು?
ರೈತ ಸಾಲಗಾರನಾಗಿದ್ದಾನೆ

ಹಾಗಾದವರನ ದುಡಿಮೆ
ಕಿತ್ತುಕೊಂಡಿದ್ಯಾರು?
ರೈತ ನೇಣು ಹಾಕಿಕೊಂಡಿದ್ದಾನೆ!
ಹಾಗಾದವರಿನಿಗೆ ಹಗ್ಗ
ಹೊಸೆದು ಕೊಟ್ಟವರ್ಯಾರು?
ರೈತನಿಗೆ ಸಂಬಂದಿಸಿದ್ದವೆಲ್ಲವೂ
ಪ್ರಶ್ನೆಗಳಾಗೇ ಉಳಿದೆವೆ, 
ಉತ್ತರ ಕೊಡಬೇಕಾದವರು

ಉಣ್ಣುತ್ತ ಕೂತಿದ್ದಾರೆ! 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ