ಫೆಬ್ರ 27, 2012

“ಮರೀನಾ” ಎಂಬ ದೃಶ್ಯಕಾವ್ಯ

ಡಾ. ಅಶೋಕ್. ಕೆ. ಆರ್.
 ಅದು ಕಡಲಕಿನಾರೆಯ ಕಥೆ. ಮನೆಬಿಟ್ಟು ಓಡಿಬಂದವರ, ಮನೆಯಿಲ್ಲದೆ ಬಂದವರ, ಮನೆಯಿಂದ ಓಡಿಸಿಕೊಂಡವರ ಮನಮುಟ್ಟುವ ಕಥೆ. ಪಾಂಡಿರಾಜ್ ಎಂಬ ನಿರ್ದೇಶಕನ ಮನದ ಪಟದಲ್ಲಿ ಮೂಡಿದ ಕಥೆಯ ಯಶಸ್ಸು ಚಿತ್ರ ನೋಡುವಾಗ ನಮ್ಮ ಕಣ್ಣಂಚಿನಲ್ಲಿ ಮೂಡುವ ಹನಿಗಳಲ್ಲಿದೆ. ಧಾರಾಕಾರವಾಗಿ ಗೊಳೋ ಎಂದಳುತ್ತಾ ಕುಳಿತರೆ ನಿರ್ದೇಶಕ ಜವಾಬ್ದಾರನಲ್ಲ!

ಫೆಬ್ರ 16, 2012

ಪಾಕಿಸ್ತಾನ್ ಜಿಂದಾಬಾದ್!!


ವಿಧಾನಸಭಮ್ಮ ಶ್ಯಾನೆ ಬೇಸರದಲ್ಲಿ ಕುಂತಿದ್ದಳು. ‘ಇದ್ಯಾಕಕ್ಕ ಹಿಂಗ್ ಆಕಾಶ್ವೇ ತಲೆ ಮೇಲ್ ಬಿದ್ದೋಳ್ತರ ಮುಖ ಮಾಡ್ಕಂಡಿದ್ದೀಯೆ? ಅದರಲ್ಲೂ ಕಲಾಪ ನಡೆಯೋ ಟೇಮ್ನಾಗೆ?’ ಎಂದು ಕುಶಲೋಪರಿ ವಿಚಾರಿಸಿದ ಹೈಕೋರ್ಟ್. ‘ಹಲ್ಕಾ ನನ್ ಮಕ್ಳು’ ಗೊಣಗಿ ತಲೆತಗ್ಗಿಸಿದಳು. ಕಡತದಿಂದ ತೆಗೆಯುವಂಥ ಮಾತುಗಳನ್ನು ವಿಧಾನಸಭಮ್ಮನೇ ಆಡಿದ್ದು ಕೇಳಿ ಅಚ್ಚರಿಯಾಯ್ತು. ‘ಯಾರಕ್ಕ ಹಲ್ಕ ನನ್ ಮಕ್ಳು?’