Nov 12, 2015

ಕುಂವಿ ಮತ್ತು ಬಂಜಗೆರೆಯವರ ಪ್ರತಿಕ್ರಿಯೆ.

ನವೀನ್ ನಿಮ್ಮಂಥ ಪ್ರಗತಿಪರ ಯುವಮನಸ್ಸುಗಳ ಆತಂಕ ಅರ್ಥಾಗುತ್ತೆ, ನಾನು ಅಕಸ್ಮಾತ್ ಆ ದಿವಸ ಉಪನ್ಯಾಸ ನೀಡಿದರೆ ಅದು ನಾಡಿನ ಸಹಸ್ರ ವಿವಿಧ ಜಾಯಮಾನದ ಹಾಗೂ ಅಭಿರುಚಿಯ ಜನರನ್ನುದ್ದೇಶಿಸಿ, ಆದರೆ ಮೋಹನ್ ಆಳ್ವಾ ಕುಟುಂಬ ಸದಸ್ಯರನ್ನುದ್ದೇಶಿಸಿ ಖಂಡಿತ ಅಲ್ಲ, ಅದು ಮಾತಾಡಲು.ತಿದ್ದಲು. ಪ್ರತಿಭಟಿಸಲು ಸೂಕ್ತ ಜಾಗ, ನನ್ನಂಥೋರು ಭಾಗವಹಿಸದಿದ್ದಲ್ಲಿ ಮೂಲಭೂತವಾದಿಗಳಾದ ಬೇರೆಯವರು ಮಾತಾಡ್ತಾರೆ. ಆತ್ಮಸಾಕ್ಷಿ ಕಳೆದುಕೊಳ್ಳುವುದಿಲ್ಲ, ರಾಜಿಯಾಗೋದಿಲ್ಲ, ನೇರ ದಿಟ್ಟ ನಿರಂತರ, ಆತಂಕ ಬೇಡ.
- ಕುಂವೀ

ಇದನ್ನೂ ಓದಿ: ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ


ಸಾಕಷ್ಟು ಪರ್ಯಾಲೋಚಿಸದೆ, ಸಾಮಾಜಿಕ ನ್ಯಾಯದ ಹೊಸ ಹುಡುಕಾಟಗಳು ಎಂಬ ವಿಷಯವನ್ನಷ್ಟೆ ನೋಡಿಕೊಂಡು ಒಪ್ಪಿಕೊಂಡಿದ್ದೆ. ಈಗ ನಮ್ಮ ಬಂಧು-ಬಳಗಕ್ಕೆ ನಾನು ಹಾಗೇ ಹೋಗುವುದು ಸರಿಯಲ್ಲ ಅನಿಸಿದರೆ ನಾನು 'ನುಡಿಸಿರಿ'ಗೆ ಹೋಗುವುದಿಲ್ಲ. ಸಂಗಾತಿಗಳ ಮನಸ್ಸಿಗೆ ಕಸಿವಿಸಿ ಉಂಟು ಮಾಡಿದ್ದಕ್ಕೆ ನಾನು ನಿಮ್ಮೆಲ್ಲರ ಕ್ಷಮೆ ಕೇಳುತ್ತಿದ್ದೆನೆ. ನಾವೆಲ್ಲರೂ ಒಂದೇ. ನಾವೆಲ್ಲರೂ ಕೈಗೆ ಕೈಜೋಡಿಸಿ ಸಾಂಸ್ಕೃತಿಕ ಯುದ್ಧವನ್ನು ಗೆಲ್ಲಬೇಕಾದ ಸಂಗಾತಿಗಳು. ನಾನು ನಿಮ್ಮೊಡನೆ ಇರುತ್ತೇನೆ, ಎಲ್ಲರಿಗೂ ವಂದನೆಗಳು.
-ಬಂಜಗೆರೆ ಜಯಪ್ರಕಾಶ.

No comments:

Post a Comment