ಡಾ. ಅಶೋಕ್. ಕೆ. ಅರ್.
ಅವತ್ತು ಏಪ್ರಿಲ್ ಹದಿನಾಲ್ಕು. ನನ್ನ ಹುಟ್ಟಿದ ದಿನ. ಗಂಡ ಬೆಳಿಗ್ಗೆ ಬೆಳಿಗ್ಗೆ ಕೇಕ್ ತಂದಿದ್ದ, ಜೊತೆಗೆ ಹನುಮಂತು ಹೋಟೆಲ್ಲಿನಿಂದ ನಾಟಿ ಕೋಳಿ ಪಲಾವ್. ಒಂದು ಚಿಕ್ಕ ತುಂಡು ಕೇಕ್ ತಿಂದು ಒಂದೂವರೆ ಪ್ಲೇಟ್ ನಾಟಿ ಕೋಳಿ ಪಲಾವ್ ಮುಗಿಸಿ ಉಳಿದ ಕೇಕನ್ನು ಫ್ರಿಜ್ಜಿನಲ್ಲಿಟ್ಟು ಆಸ್ಪತ್ರೆಗೆ ಹೊರಟೆ. ಅವತ್ತು ಬೆಳಗಿನ ಡ್ಯೂಟಿಯಿತ್ತು. ಭಾನುವಾರವಾದ್ದರಿಂದ ಹೆಚ್ಚೇನೂ ಕೆಲಸವಿರಲಿಲ್ಲ. ಮೈಸೂರಿನ ಆರ್.ಬಿ.ಐ ಒಳಗಿರುವ ಪುಟ್ಟ ಆಸ್ಪತ್ರೆಯದು. ಆರ್.ಬಿ.ಐ ನಿವಾಸಿಗಳಷ್ಟೇ ಬರುತ್ತಿದ್ದುದು. ಶಿಫ್ಟಿನ ಮೇಲೆ ಮೂರು ಜನ ವೈದ್ಯರು ಕೆಲಸ ಮಾಡುತ್ತಿದ್ದೆವು. ಭಾನುವಾರ ಕೆಲಸ ಮಾಡುವುದೆಂದರೆ ಯಮಹಿಂಸೆ. ಸಾಮಾನ್ಯವಾಗಿ ನಾನು ಭಾನುವಾರ ರಜೆ ತೆಗೆದುಕೊಂಡುಬಿಡುತ್ತಿದ್ದೆ. ನಾಳೆ ಅತ್ತೆ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಇಟ್ಕೊಂಡಿದ್ದಾರೆ, ಹಾಗಾಗಿ ಭಾನುವಾರ ಬಂದಿದ್ದೆ. ಹನ್ನೊಂದರವರೆಗೆ ಒಂದಷ್ಟು ರೋಗಿಗಳಿದ್ದರು. ಮಾಮೂಲಿ ಜ್ವರ, ನೆಗಡಿ, ಕೆಮ್ಮು ಇತ್ಯಾದಿ. ಹನ್ನೊಂದರಿಂದ ಹನ್ನೆರಡರವರೆಗೆ ಯಾರೂ ಬರಲಿಲ್ಲ. ಹುಟ್ಟುಹಬ್ಬದ ಶುಭಾಷಯಗಳ ಮೆಸೇಜುಗಳು ಮೊಬೈಲು ತುಂಬಿಸಿತ್ತು. ಅವರಿಗೆಲ್ಲಾ ಒಂದು ಧನ್ಯವಾದ ಹೇಳಿದೆ. ತೀರ ಫೋನು ಮಾಡಿ ಶುಭಾಶಯ ಹೇಳುವಂತಹ ಗೆಳೆಯರ್ಯಾರು ಇರಲಿಲ್ಲ. ಅಪ್ಪ, ಅಮ್ಮ, ತಮ್ಮ ಬೆಳಿಗ್ಗೆಯೇ ಫೋನ್ ಮಾಡಿದ್ದರು. ಮಧ್ಯಾಹ್ನ ಅಲ್ಲಿಗೇ ಊಟಕ್ಕೆ ಹೋಗಬೇಕು. ಊಟ ಮುಗಿಸಿ ಅತ್ತೆ ಮನೆಗೆ. ಮೆಸೇಜು ಕಳುಹಿಸಿದವರಲ್ಲಿ ಅನೇಕರು ನಮ್ಮ ಮೇನ್ ಆಸ್ಪತ್ರೆಯವರು. ಒಂದು ವರುಷ ಅಲ್ಲಿ ಕೆಲಸ ಮಾಡಿದ್ದಾಗ ಪರಿಚಿತರಾಗಿದ್ದವರು. ಮೆಸೇಜು ಕಳುಹಿಸಿದ್ದೆಲ್ಲ ಮುಗಿದ ಮೇಲೆ ಆನ್ ಆಗಿದ್ದ ಕಂಪ್ಯೂಟರಿನಲ್ಲಿ ಒಪೆರಾ ಬ್ರೌಸರ್ ತೆರೆದು ಫೇಸ್ ಬುಕ್ ಪುಟವನ್ನು ತೆರೆದೆ. ಒಂದು ಮೂವತ್ತು ಜನ ಶುಭಾಶಯ ಕೋರಿದ್ದರು! ಬಹುತೇಕರು ಎಂಬಿಬಿಎಸ್ ಓದುವಾಗ ಸಹಪಾಠಿಗಳಾಗಿದ್ದವರು. ಲೈಕ್ ಒತ್ತಿ, ಥ್ಯಾಂಕ್ ಯೂ ಎಂದು ಕಮೆಂಟಿಸಿದೆ. ಶುಭಾಶಯ ಕೋರಿದವರಲ್ಲಿ ಅನೇಕರೊಡನೆ ಕಾಲೇಜು ದಿನಗಳಲ್ಲಿ ಮಾತನಾಡಿಯೇ ಇರಲಿಲ್ಲ. ನಿಟ್ಟುಸಿರುಬಿಟ್ಟು ಇನ್ನೇನು ಫೇಸ್ ಬುಕ್ಕಿನಿಂದ ಲಾಗ್ ಔಟ್ ಆಗಬೇಕೆಂದುಕೊಳ್ಳುವಷ್ಟರಲ್ಲಿ ಪರದೆಯ ಎಡಭಾಗದಲ್ಲಿ Sagar ವಿಶಾಲ sent you a friend request ಎಂದು ಕಾಣಿಸಿತು. ಯಾರಿದು ಸಾಗರ್ ವಿಶಾಲ್? ನನ್ನ ಎಂಬಿಬಿಎಸ್ ಕ್ಲಾಸ್ ಮೇಟ್ ಅಲ್ಲಾ ತಾನೇ? ಎಂದು ಸಂಶಯಿಸುತ್ತಾ ಆ ಹೆಸರಿನ ಮೇಲೆ ಕ್ಲಿಕ್ಕಿಸಿದೆ. ಓದಿದ್ದು ಜೆಎಸ್ಎಸ್ ಊರು ಬೆಂಗಳೂರು ಎಂದಿತ್ತು. ಓ ಅವನೇ ಇರಬೇಕು ಎಂದುಕೊಂಡೆ; ಆದರೆ ಅವನ ಹೆಸರು ಬರೀ ಸಾಗರ್ ಅಲ್ಲವಾ? ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ಕಿಸಿದೆ. ಸಮುದ್ರ ತೀರದಲ್ಲಿ ಅಲೆಗಳಿಗೆ ಮುಖವೊಡ್ಡಿ ಕುಳಿತಿದ್ದಾನೆ, ಎದುರಿಗಿನ ಸೂರ್ಯದೋಯ ನೋಡುತ್ತ. ಇಂಥಹ ಫೋಟೋನ ಪ್ರೊಫೈಲಿಗೆ ಹಾಕಿಕೊಂಡಿದ್ದಾನೆಂದರೆ ಇದು ಅವನೇ ಎಂದು ನಗು ಬಂತು. ಮನಸಾರೆ ನಕ್ಕೆ. ‘ರಿಕ್ವೆಸ್ಟ್ ಕಳುಹಿಸಿದ್ದಕ್ಕೆ ಥ್ಯಾಂಕ್ಸ್’ ಎಂದು ಮೆಸೇಜ್ ಟೈಪು ಮಾಡಿದೆ; ಕಳುಹಿಸಲಿಲ್ಲ. ಹುಟ್ಟಿದ ಹಬ್ಬಕ್ಕೆ ಶುಭಾಷಯ ತಿಳಿಸುತ್ತಾನೇನೋ ನೋಡೋಣ ಅಂದುಕೊಂಡು ಟೈಪಿಸಿದ್ದನ್ನು ಅಳಿಸಿಹಾಕಿದೆ. ಕಳೆದ ವಾರದಿಂದ ಚಿಕನ್ ಗುನ್ಯಾದಿಂದ ನರಳುತ್ತಿದ್ದ ರೋಗಿಯೊಬ್ಬರು ಒಳಬಂದರು. ಮೆಸೇಜು ಕಳುಹಿಸುತ್ತಾನೇನೋ ನೋಡೋಣ ಅಂದುಕೊಂಡು ಲಾಗ್ ಔಟ್ ಮಾಡದೆ ರೋಗಿಯ ಕಡೆ ಗಮನಕೊಟ್ಟೆ. ಎರಡು ಘಂಟೆಯವರೆಗೆ ರೋಗಿಗಳು ಬರುತ್ತಲೇ ಇದ್ದರು. ಭಾನುವಾರ ಡಾಕ್ಟರ್ ಇರ್ತಾರಲ್ಲ ಸುಮ್ನೆ ತೋರಿಸಿಕೊಂಡು ಹೋಗೋಣ ಎಂದು ಬಂದವರೇ ಹೆಚ್ಚು. ಎರಡು ಘಂಟೆಗೆ ಬರಬೇಕಿದ್ದ ಡಾ. ರವಿ ಎರಡೂ ಕಾಲಾದರೂ ಬರಲಿಲ್ಲ. ಈ ರವೀದು ಯಾವಾಗ್ಲೂ ಇದೇ ಗೋಳು. ಬರೋದು ಲೇಟು ಹೋಗೋದು ಬೇಗ. ನಾವೇನಾದರೂ ಐದು ನಿಮಿಷ ಲೇಟ್ ಬಂದುಬಿಟ್ರೆ ಆಕಾಶ ಭೂಮಿ ಒಂದು ಮಾಡ್ಬಿಡ್ತಾನೆ. ಹೆಚ್ ಆರ್ ಮ್ಯಾನೇಜರ್ರಿಗೆ ಫೋನು ಮಾಡಿ ದೂರು ನೀಡಿಬಿಡ್ತಾನೆ. ಇವತ್ತು ನಾನೂ ದೂರು ಕೊಟ್ಟುಬಿಡಬೇಕು ಎಂದುಕೊಂಡು ಕಂಪ್ಯೂಟರ್ ನೋಡಿದೆ. ಸಾಗರ್ ಆನ್ ಲೈನ್ ಇದ್ದ. ಯಾವ ಮೆಸೇಜೂ ಕಳುಹಿಸಿರಲಿಲ್ಲ. ಲಾಗ್ ಔಟ್ ಮಾಡಿದೆ. ಡಾ. ರವಿ ಒಳಬಂದ. “ಸಾರಿ ಧರಣಿ. ಸ್ವಲ್ಪ ಲೇಟ್ ಆಗೋಯ್ತು. ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ. ಇದನ್ನು ತರೋದಿಕ್ಕೆ ಲೇಟ್ ಆಗಿದ್ದು” ಎಂದ್ಹೇಳಿ ಹೂವಿನ ಬೊಕ್ಕೆ ಕೊಟ್ಟ. ಇವತ್ತು ಕಂಪ್ಲೇಂಟ್ ಮಾಡೋದು ಬೇಡ ಎಂದುಕೊಳ್ಳುತ್ತಾ ‘ಥ್ಯಾಂಕ್ಸ್ ರವಿ ಸರ್’ ಎಂದ್ಹೇಳಿ ಬೊಕ್ಕೆ ತೆಗೆದುಕೊಂಡು ಹೊರಟೆ.
ಅವತ್ತು ಏಪ್ರಿಲ್ ಹದಿನಾಲ್ಕು. ನನ್ನ ಹುಟ್ಟಿದ ದಿನ. ಗಂಡ ಬೆಳಿಗ್ಗೆ ಬೆಳಿಗ್ಗೆ ಕೇಕ್ ತಂದಿದ್ದ, ಜೊತೆಗೆ ಹನುಮಂತು ಹೋಟೆಲ್ಲಿನಿಂದ ನಾಟಿ ಕೋಳಿ ಪಲಾವ್. ಒಂದು ಚಿಕ್ಕ ತುಂಡು ಕೇಕ್ ತಿಂದು ಒಂದೂವರೆ ಪ್ಲೇಟ್ ನಾಟಿ ಕೋಳಿ ಪಲಾವ್ ಮುಗಿಸಿ ಉಳಿದ ಕೇಕನ್ನು ಫ್ರಿಜ್ಜಿನಲ್ಲಿಟ್ಟು ಆಸ್ಪತ್ರೆಗೆ ಹೊರಟೆ. ಅವತ್ತು ಬೆಳಗಿನ ಡ್ಯೂಟಿಯಿತ್ತು. ಭಾನುವಾರವಾದ್ದರಿಂದ ಹೆಚ್ಚೇನೂ ಕೆಲಸವಿರಲಿಲ್ಲ. ಮೈಸೂರಿನ ಆರ್.ಬಿ.ಐ ಒಳಗಿರುವ ಪುಟ್ಟ ಆಸ್ಪತ್ರೆಯದು. ಆರ್.ಬಿ.ಐ ನಿವಾಸಿಗಳಷ್ಟೇ ಬರುತ್ತಿದ್ದುದು. ಶಿಫ್ಟಿನ ಮೇಲೆ ಮೂರು ಜನ ವೈದ್ಯರು ಕೆಲಸ ಮಾಡುತ್ತಿದ್ದೆವು. ಭಾನುವಾರ ಕೆಲಸ ಮಾಡುವುದೆಂದರೆ ಯಮಹಿಂಸೆ. ಸಾಮಾನ್ಯವಾಗಿ ನಾನು ಭಾನುವಾರ ರಜೆ ತೆಗೆದುಕೊಂಡುಬಿಡುತ್ತಿದ್ದೆ. ನಾಳೆ ಅತ್ತೆ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಇಟ್ಕೊಂಡಿದ್ದಾರೆ, ಹಾಗಾಗಿ ಭಾನುವಾರ ಬಂದಿದ್ದೆ. ಹನ್ನೊಂದರವರೆಗೆ ಒಂದಷ್ಟು ರೋಗಿಗಳಿದ್ದರು. ಮಾಮೂಲಿ ಜ್ವರ, ನೆಗಡಿ, ಕೆಮ್ಮು ಇತ್ಯಾದಿ. ಹನ್ನೊಂದರಿಂದ ಹನ್ನೆರಡರವರೆಗೆ ಯಾರೂ ಬರಲಿಲ್ಲ. ಹುಟ್ಟುಹಬ್ಬದ ಶುಭಾಷಯಗಳ ಮೆಸೇಜುಗಳು ಮೊಬೈಲು ತುಂಬಿಸಿತ್ತು. ಅವರಿಗೆಲ್ಲಾ ಒಂದು ಧನ್ಯವಾದ ಹೇಳಿದೆ. ತೀರ ಫೋನು ಮಾಡಿ ಶುಭಾಶಯ ಹೇಳುವಂತಹ ಗೆಳೆಯರ್ಯಾರು ಇರಲಿಲ್ಲ. ಅಪ್ಪ, ಅಮ್ಮ, ತಮ್ಮ ಬೆಳಿಗ್ಗೆಯೇ ಫೋನ್ ಮಾಡಿದ್ದರು. ಮಧ್ಯಾಹ್ನ ಅಲ್ಲಿಗೇ ಊಟಕ್ಕೆ ಹೋಗಬೇಕು. ಊಟ ಮುಗಿಸಿ ಅತ್ತೆ ಮನೆಗೆ. ಮೆಸೇಜು ಕಳುಹಿಸಿದವರಲ್ಲಿ ಅನೇಕರು ನಮ್ಮ ಮೇನ್ ಆಸ್ಪತ್ರೆಯವರು. ಒಂದು ವರುಷ ಅಲ್ಲಿ ಕೆಲಸ ಮಾಡಿದ್ದಾಗ ಪರಿಚಿತರಾಗಿದ್ದವರು. ಮೆಸೇಜು ಕಳುಹಿಸಿದ್ದೆಲ್ಲ ಮುಗಿದ ಮೇಲೆ ಆನ್ ಆಗಿದ್ದ ಕಂಪ್ಯೂಟರಿನಲ್ಲಿ ಒಪೆರಾ ಬ್ರೌಸರ್ ತೆರೆದು ಫೇಸ್ ಬುಕ್ ಪುಟವನ್ನು ತೆರೆದೆ. ಒಂದು ಮೂವತ್ತು ಜನ ಶುಭಾಶಯ ಕೋರಿದ್ದರು! ಬಹುತೇಕರು ಎಂಬಿಬಿಎಸ್ ಓದುವಾಗ ಸಹಪಾಠಿಗಳಾಗಿದ್ದವರು. ಲೈಕ್ ಒತ್ತಿ, ಥ್ಯಾಂಕ್ ಯೂ ಎಂದು ಕಮೆಂಟಿಸಿದೆ. ಶುಭಾಶಯ ಕೋರಿದವರಲ್ಲಿ ಅನೇಕರೊಡನೆ ಕಾಲೇಜು ದಿನಗಳಲ್ಲಿ ಮಾತನಾಡಿಯೇ ಇರಲಿಲ್ಲ. ನಿಟ್ಟುಸಿರುಬಿಟ್ಟು ಇನ್ನೇನು ಫೇಸ್ ಬುಕ್ಕಿನಿಂದ ಲಾಗ್ ಔಟ್ ಆಗಬೇಕೆಂದುಕೊಳ್ಳುವಷ್ಟರಲ್ಲಿ ಪರದೆಯ ಎಡಭಾಗದಲ್ಲಿ Sagar ವಿಶಾಲ sent you a friend request ಎಂದು ಕಾಣಿಸಿತು. ಯಾರಿದು ಸಾಗರ್ ವಿಶಾಲ್? ನನ್ನ ಎಂಬಿಬಿಎಸ್ ಕ್ಲಾಸ್ ಮೇಟ್ ಅಲ್ಲಾ ತಾನೇ? ಎಂದು ಸಂಶಯಿಸುತ್ತಾ ಆ ಹೆಸರಿನ ಮೇಲೆ ಕ್ಲಿಕ್ಕಿಸಿದೆ. ಓದಿದ್ದು ಜೆಎಸ್ಎಸ್ ಊರು ಬೆಂಗಳೂರು ಎಂದಿತ್ತು. ಓ ಅವನೇ ಇರಬೇಕು ಎಂದುಕೊಂಡೆ; ಆದರೆ ಅವನ ಹೆಸರು ಬರೀ ಸಾಗರ್ ಅಲ್ಲವಾ? ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ಕಿಸಿದೆ. ಸಮುದ್ರ ತೀರದಲ್ಲಿ ಅಲೆಗಳಿಗೆ ಮುಖವೊಡ್ಡಿ ಕುಳಿತಿದ್ದಾನೆ, ಎದುರಿಗಿನ ಸೂರ್ಯದೋಯ ನೋಡುತ್ತ. ಇಂಥಹ ಫೋಟೋನ ಪ್ರೊಫೈಲಿಗೆ ಹಾಕಿಕೊಂಡಿದ್ದಾನೆಂದರೆ ಇದು ಅವನೇ ಎಂದು ನಗು ಬಂತು. ಮನಸಾರೆ ನಕ್ಕೆ. ‘ರಿಕ್ವೆಸ್ಟ್ ಕಳುಹಿಸಿದ್ದಕ್ಕೆ ಥ್ಯಾಂಕ್ಸ್’ ಎಂದು ಮೆಸೇಜ್ ಟೈಪು ಮಾಡಿದೆ; ಕಳುಹಿಸಲಿಲ್ಲ. ಹುಟ್ಟಿದ ಹಬ್ಬಕ್ಕೆ ಶುಭಾಷಯ ತಿಳಿಸುತ್ತಾನೇನೋ ನೋಡೋಣ ಅಂದುಕೊಂಡು ಟೈಪಿಸಿದ್ದನ್ನು ಅಳಿಸಿಹಾಕಿದೆ. ಕಳೆದ ವಾರದಿಂದ ಚಿಕನ್ ಗುನ್ಯಾದಿಂದ ನರಳುತ್ತಿದ್ದ ರೋಗಿಯೊಬ್ಬರು ಒಳಬಂದರು. ಮೆಸೇಜು ಕಳುಹಿಸುತ್ತಾನೇನೋ ನೋಡೋಣ ಅಂದುಕೊಂಡು ಲಾಗ್ ಔಟ್ ಮಾಡದೆ ರೋಗಿಯ ಕಡೆ ಗಮನಕೊಟ್ಟೆ. ಎರಡು ಘಂಟೆಯವರೆಗೆ ರೋಗಿಗಳು ಬರುತ್ತಲೇ ಇದ್ದರು. ಭಾನುವಾರ ಡಾಕ್ಟರ್ ಇರ್ತಾರಲ್ಲ ಸುಮ್ನೆ ತೋರಿಸಿಕೊಂಡು ಹೋಗೋಣ ಎಂದು ಬಂದವರೇ ಹೆಚ್ಚು. ಎರಡು ಘಂಟೆಗೆ ಬರಬೇಕಿದ್ದ ಡಾ. ರವಿ ಎರಡೂ ಕಾಲಾದರೂ ಬರಲಿಲ್ಲ. ಈ ರವೀದು ಯಾವಾಗ್ಲೂ ಇದೇ ಗೋಳು. ಬರೋದು ಲೇಟು ಹೋಗೋದು ಬೇಗ. ನಾವೇನಾದರೂ ಐದು ನಿಮಿಷ ಲೇಟ್ ಬಂದುಬಿಟ್ರೆ ಆಕಾಶ ಭೂಮಿ ಒಂದು ಮಾಡ್ಬಿಡ್ತಾನೆ. ಹೆಚ್ ಆರ್ ಮ್ಯಾನೇಜರ್ರಿಗೆ ಫೋನು ಮಾಡಿ ದೂರು ನೀಡಿಬಿಡ್ತಾನೆ. ಇವತ್ತು ನಾನೂ ದೂರು ಕೊಟ್ಟುಬಿಡಬೇಕು ಎಂದುಕೊಂಡು ಕಂಪ್ಯೂಟರ್ ನೋಡಿದೆ. ಸಾಗರ್ ಆನ್ ಲೈನ್ ಇದ್ದ. ಯಾವ ಮೆಸೇಜೂ ಕಳುಹಿಸಿರಲಿಲ್ಲ. ಲಾಗ್ ಔಟ್ ಮಾಡಿದೆ. ಡಾ. ರವಿ ಒಳಬಂದ. “ಸಾರಿ ಧರಣಿ. ಸ್ವಲ್ಪ ಲೇಟ್ ಆಗೋಯ್ತು. ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ. ಇದನ್ನು ತರೋದಿಕ್ಕೆ ಲೇಟ್ ಆಗಿದ್ದು” ಎಂದ್ಹೇಳಿ ಹೂವಿನ ಬೊಕ್ಕೆ ಕೊಟ್ಟ. ಇವತ್ತು ಕಂಪ್ಲೇಂಟ್ ಮಾಡೋದು ಬೇಡ ಎಂದುಕೊಳ್ಳುತ್ತಾ ‘ಥ್ಯಾಂಕ್ಸ್ ರವಿ ಸರ್’ ಎಂದ್ಹೇಳಿ ಬೊಕ್ಕೆ ತೆಗೆದುಕೊಂಡು ಹೊರಟೆ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.