ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದ ವಿದಾನಸಭಾ ಚುನಾವಣೆಗಳನ್ನು ಗೆಲ್ಲಲು ಬಾಜಪ ಇನ್ನಿರದ ಪ್ರಯತ್ನ ಮಾಡುತ್ತಿದೆ.ಇದೀಗ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಈಗಾಗಲೇ ಎರಡು ರಾಜ್ಯಗಳಲ್ಲಿ ಬಾಜಪ ಆಳ್ವಿಕೆ ನಡೆಸುತ್ತಿದ್ದು, ಸಹಜವಾಗಿಯೇ ಆಡಳಿತ ವಿರೋಧಿ ಅಲೆಯನ್ನು ಅದು ಎದುರಿಸುತ್ತಿದೆ.ಹಿಮಾಚಲಪ್ರದೇಶ ಮತ್ತು ಮಣಿಪುರದಂತಹ ಪುಟ್ಟ ರಾಜ್ಯಗಳ ಪಲಿತಾಂಶಗಳು ರಾಷ್ಟ್ರ ರಾಜಕಾರಣದಲ್ಲಿ ಅಂತಹ ಕಂಪನಗಳನ್ನು ಉಂಟು ಮಾಡಲಾರವು. ಇಂತಹ ಸನ್ನಿವೇಶದಲ್ಲಿ, ಅದೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಸರಿಸುಮಾರು ಮೂರುವರ್ಷಗಳಾಗುತ್ತಿರುವ ಈ ಸಮಯದಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ಬಾಜಪದ ಪಾಲಿಗೆ ಮಹತ್ವದ್ದಾಗಿವೆ.ಉತ್ತರಪ್ರದೇಶವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಬಾಜಪಕ್ಕೆ ಇರಲು ಎರಡು ಮುಖ್ಯ ಕಾರಣಗಳಿವೆ. ಅವೆಂದರೆ:
