ಅಕ್ಟೋ 5, 2016

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ವಿಫಲವಾಗಲು ಕಾರಣಗಳು: ಒಂದು ಟಿಪ್ಪಣಿ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ಸಿಗುವುದಿಲ್ಲ ಮತ್ತು ಕರ್ನಾಟಕದ ಜನತೆ ಆ ವಿಷಯದ ಮಟ್ಟಿಗೆ ರಾಷ್ಟ್ರೀಯವಾಗಿ ಚಿಂತಿಸುತ್ತಾರೆಂಬ ಮಾತು ಮಾಮೂಲಿಯಾಗಿಬಿಟ್ಟಿದೆ. ಕರ್ನಾಟಕದ ಜನತೆ ಒಕ್ಕೂಟ ವ್ಯವಸ್ಥೆಗೆ ಎಷ್ಟು ಒಗ್ಗಿ ಹೋಗಿದ್ದಾರೆಂದರೆ ನಮ್ಮ ಜನತೆ ಇದುವರೆಗು ಯಾವುದೇ ಪ್ರಾದೇಶಿಕ ಪಕ್ಷವೊಂದನ್ನು ನಮ್ಮದೂ ಎಂದು ಒಪ್ಪಿಕೊಂಡು ಸಂಪೂರ್ಣವಾಗಿ ಅದನ್ನು ಬೆಂಬಲಿಸಿದ ನಿದರ್ಶನಗಳೇ ಸಿಗುವುದಿಲ್ಲ. ಕನ್ನಡದ ನೆಲಜಲಗಳ ಪ್ರಶ್ನೆ ಬಂದಾಗ ಪ್ರಾದೇಶಿಕ ಪಕ್ಷವೊಂದರ ಅನಿವಾರ್ಯತೆಯ ಬಗ್ಗೆ ಆವೇಶದಿಂದ ಮಾತಾಡುವ ಕನ್ನಡಿಗರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬಾಜಪ ಅಥವಾ ಕಾಂಗ್ರೆಸ್ ಅನ್ನುವ ಎರಡು ರಾಷ್ಟ್ರೀಯ ಪಕ್ಷಗಳತ್ತ ವಾಲಿಬಿಡತ್ತಾರೆ ಎನ್ನುವ ಆರೋಪವೂ ಕನ್ನಡಿಗರ ಮೇಲಿದೆ. ಈ ವಿಚಾರದ ವಿಶ್ಲೇಷಣೆಯಲ್ಲಿ ನಾನು ಬಹಳ ಹಿಂದಕ್ಕೇನು ಹೋಗುವುದಿಲ್ಲ. ಎಂಭತ್ತರ ದಶಕದ ನಂತರದ ಕರ್ನಾಟಕದ ರಾಜಕಾರಣದ ಆಗು ಹೋಗುಗಳನ್ನು ಅದ್ಯಯನ ಮಾಡಿದರೆ ಸಾಕು ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಾಗಿದ್ದರೆ ಕರ್ನಾಟಕದ ಜನತೆಗೆ ಯಾಕೆ ಪ್ರಾದೇಶಿಕ ಪಕ್ಷಗಳ ಬಗ್ಗೆ ಈ ರೀತಿಯ ಅಸಡ್ಡೆ? ಯಾಕೆ ಕನ್ನಡಿಗರು ಪ್ರಾದೇಶಿಕ ಪಕ್ಷಗಳತ್ತ ಒಲವು ತೋರಿಸುವುದಿಲ್ಲವೆಂಬ ಪ್ರಶ್ನೆಗೆ ಎರಡು ನೆಲೆಯಲ್ಲಿ ಉತ್ತರ ಕಂಡುಕೊಳ್ಳಬಹುದು:

ಸೆಪ್ಟೆಂ 30, 2016

ಮೇಕಿಂಗ್ ಹಿಸ್ಟರಿ: ಬೆಳಗುತ್ತಿ-ಬಾದಾಮಿ-ನಿಪ್ಪಾಣಿ-ಚಿತ್ರದುರ್ಗ-ಬೀದರ್

saketh rajan
ಸಾಕೇತ್ ರಾಜನ್ 

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
26/09/2016
7. ಬೆಳಗುತ್ತಿ (1835)


ಬೆಳಗುತ್ತಿಯನ್ನು 1804ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್, ವೆಂಕಟಪ್ಪ ನಾಯಕನಿಗೆ ಇನಾಮು ಹಳ್ಳಿಯಾಗಿ ನೀಡಿದ್ದ. ಜೊತೆಗೆ, ವೆಂಕಟ್ಟಪ್ಪ ಮಗ ತಿಮ್ಮಾ ನಾಯಕನ ದಿನನಿತ್ಯದ ಹಾಲು ಬೆಣ್ಣೆಗಾಗಿ, ರಾಜ ವಾರ್ಷಿಕ 220 ವರಹಗಳನ್ನು ಕೊಡುಗೆಯಾಗಿ ನೀಡುತ್ತಿದ್ದ. ಆದರಿದನ್ನು ನಂತರದಲ್ಲಿ ಬ್ರಿಟೀಷರು ನಿಲ್ಲಿಸಿಬಿಟ್ಟರು. 1830ರಲ್ಲಿ, ತಿಮ್ಮಪ್ಪ ನಾಯಕ ತನ್ನ ಬಡತನದ ಬಗ್ಗೆ ಬರೆದುಕೊಂಡು ಮುಂಚಿದ್ದ ಜಾಗೀರನ್ನು ಮತ್ತೆ ಸ್ಥಾಪಿಸಬೇಕೆಂದು ಕೇಳಿಕೊಂಡ. ಆದರೆ ಬ್ರಿಟೀಷರು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. 1830ರಲ್ಲಿ, ನಗರದ ಬಂಡಾಯವನ್ನು ಮುನ್ನಡೆಸಿದ್ದ ಬೂಡಿ ಬಸಪ್ಪ, ಬೆಳಗುತ್ತಿಗೆ ಭೇಟಿ ನೀಡಿ, ತನ್ನ ಗೆಲುವಿನೊಂದಿಗೆ ನಿನ್ನ ಜಾಗೀರು ನಿನಗೆ ಸಿಗುತ್ತದೆ ಎಂದು ತಿಮ್ಮಪ್ಪನಿಗೆ ಭರವಸೆ ಕೊಟ್ಟಿದ್ದ. ತಿಮ್ಮಪ್ಪ ನಾಯಕ ನಗರದ ಬಂಡಾಯಕ್ಕೆ ತನ್ನ ಬೆಂಬಲ ಸೂಚಿಸಿದ. (48)

ಸೆಪ್ಟೆಂ 27, 2016

ಕರ್ನಾಟಕದಲ್ಲಿ ಲ್ಯಾಂಡ್ ಬ್ಯಾಂಕಿನ ವಿಸರ್ಜನೆ: ಸ್ವಾಗತಾರ್ಹ ಕ್ರಮ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕೈಗಾರಿಕೆಗಳಿಗೆ ಸುಲಭವಾಗಿ ಭೂಮಿ ಒದಗಿಸಲು ಸರಕಾರವೇ ರಚಿಸಿದ್ದ ಲ್ಯಾಂಡ್ ಬ್ಯಾಂಕನ್ನು ವಿಸರ್ಜಿಸುವುದರೊಂದಿಗೆ ಕರ್ನಾಟಕ ಸರಕಾರ ಒಂದು ಮಹತ್ವಪೂರ್ಣ ಹೆಜ್ಜೆಯನ್ನಿಟ್ಟಿದೆ. 

ಹಾಗೆ ನೋಡಿದರೆ ಈ ಲ್ಯಾಂಡ್ ಬ್ಯಾಂಕ್ ಎನ್ನುವುದೇ ರೈತ ವಿರೋಧಿಯಾದ ಮತ್ತು ಬಂಡವಾಳಶಾಹಿ ಸ್ನೇಹಿಯಾದ ಒಂದು ಸಂಸ್ಥೆ! ಯಾಕೆಂದರೆ ಜಾಗತೀಕರಣದ ನಂತರ ಇಂಡಿಯಾದಲ್ಲಿ ತಮ್ಮ ಉದ್ದಿಮೆಗಳನ್ನು ಸ್ಥಾಪಿಸುವಂತೆ ಸ್ವದೇಶಿ ಮತ್ತು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳನ್ನು ರತ್ನಗಂಬಳಿ ಹಾಸಿ ಸ್ವಾಗತಕ್ಕೆ ನಿಂತ ಸರಕಾರಕ್ಕೆ ಇದ್ದ ಮೊದಲ ಸಮಸ್ಯೆ ಎಂದರೆ ಸದರಿ ಉದ್ದಿಮೆಗಳಿಗೆ ಭೂಮಿ ಒದಗಿಸುವುದಾಗಿತ್ತು. ಮುಕ್ತ ಆರ್ಥಿಕ ನೀತಿಗೆ ಬದಲಾದ ನಮ್ಮ ಹೊಸ ಆರ್ಥಿಕ ವ್ಯವಸ್ಥೆಗಾಗಿ ಕೇಂದ್ರ ಸರಕಾರ ಹಲವಾರು ಕಾನೂನುಗಳನ್ನು ತಿದ್ದುಪಡಿ ಮಾಡುವುದರ ಮತ್ತು ಹೊಸ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಕೈಗಾರೀಕರಣದ ಪ್ರಕ್ರಿಯೆಯ ವೇಗ ಹೆಚ್ಚಿಸುವ ಕ್ರಮಕ್ಕೆ ಟೊಂಕ ಕಟ್ಟಿ ನಿಂತಿತು.

ಸೆಪ್ಟೆಂ 24, 2016

ಒಕ್ಕೂಟ ವ್ಯವಸ್ಥೆಯೂ ಪ್ರಾದೇಶಿಕ ಪಕ್ಷಗಳೂ: ಒಂದು ಟಿಪ್ಪಣಿ.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜ್ಯವೊಂದಕ್ಕೆ ಒಕ್ಕೂಟ ವ್ಯವಸ್ಥೆಯಲ್ಲಿ ಅನ್ಯಾಯವಾಗುತ್ತಿದೆ ಎಂದೆನಿಸಿದಾಗೆಲ್ಲ ಆ ರಾಜ್ಯದ ಜನತೆ ಪ್ರಾದೇಶಿಕ ಪಕ್ಷವೊಂದು ತಮಗೆ ಇದ್ದಿದ್ದೇ ಆಗಿದ್ದರೆ ಇಂತಹದೊಂದು ಅನ್ಯಾಯ ತಮಗಾಗುತ್ತಿರಲಿಲ್ಲವೆಂದು ಕೊರಗುವುದು ಮತ್ತು ತಾತ್ಕಾಲಿಕವಾಗಿ ಅದರ ಬಗ್ಗೆ ಒಂದಿಷ್ಟು ಚರ್ಚಿಸುವುದು ಕಳೆದ ಏಳು ದಶಕಗಳಿಂದಲೂ ಇಂಡಿಯಾದ ಹಲವಾರು ರಾಜ್ಯಗಳಲ್ಲಿ ನಡೆಯುತ್ತ ಬಂದಿರುವ ವಿದ್ಯಾಮಾನ. ಇದೀಗ ಅಂತಹುದೇ ಒಂದು ಚರ್ಚೆ ನಮ್ಮ ನಾಡಿನ ಜನರಲ್ಲಿಯೂ ಪ್ರಾರಂಭವಾದಂತಿದೆ. ಆದರೆ ಇಂತಹ ಚರ್ಚೆಯಿನ್ನೂ ಒಂದು ನೆಲೆಯಲ್ಲಿ ಮಾತ್ರ ನಡೆಯುತ್ತಿದ್ದು,. ಅದರಲ್ಲೂ ಇಂತಹದೊಂದು ಚರ್ಚೆ ಹೆಚ್ಚಾಗಿ ನಡೆಯುತ್ತಿರುವುದು ಅಕ್ಷರಸ್ಥರೇ ಹೆಚ್ಚಾಗಿರುವ ಸಾಮಾಜಿಕ ತಾಲತಾಣಗಳಲ್ಲಿ ಮತ್ತು ಆಗೀಗ ಸುದ್ದಿ ವಾಹಿನಿಗಳ ಚರ್ಚೆಗಳಲ್ಲಿ ಬಂದು ತಮ್ಮ ಅನಿಸಿಕೆಗಳನ್ನು ಹೇಳುವ ಹೋರಾಟಗಾರರ ಮಟ್ಟದಲ್ಲಿ ಮಾತ್ರ. ಆದರೆ ಪರಿಸ್ಥಿತಿ ಹೀಗೇ ಮುಂದುವರೆದರೆ ಈ ಚರ್ಚೆ ಸಮಾಜದ ಎಲ್ಲ ಸ್ತರಗಳಲ್ಲಿಯೂ ನಡೆಯುವುದು ಖಚಿತವೆನಿಸುತ್ತಿದೆ.

ಸೆಪ್ಟೆಂ 23, 2016

ಮೇಕಿಂಗ್ ಹಿಸ್ಟರಿ: ಕಿತ್ತೂರು (1824)

Making history by saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
23/09/2016
ಕಿತ್ತೂರನ್ನು ಬ್ರಿಟೀಷ್ ವಸಾಹತುಶಾಹಿಯ ಕೈಗೊಂಬೆ ರಾಜ್ಯವನ್ನಾಗಿ ಉಳಿಸಿಕೊಳ್ಳುವ ಚೆನ್ನಮ್ಮಳ ಹೋರಾಟ, ವಿವಿಧ ಊಳಿಗಮಾನ್ಯ ದೊರೆಗಳ ಪ್ರಕರಣಗಳಲ್ಲಾದಂತೆಯೇ, ಬ್ರಿಟೀಷರೊಂದಿಗೆ ಸಶಸ್ತ್ರ ಕದನಕ್ಕೆ ದಾರಿ ಮಾಡಿತು. 

ನಾವೀಗಾಗಲೇ ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದ ಕೊನೆಯ ಅಧ್ಯಾಯದಲ್ಲಿ ಗಮನಿಸಿದಂತೆ, ಕಿತ್ತೂರಿನ ದೇಸಾಯಿ, ಮಲ್ಲಾಸರ್ಜಾರ ಮಗ ಶಿವಲಿಂಗ ರುದ್ರ ಸರ್ಜಾ ಬ್ರಿಟೀಷರ ಸಲುವಾಗಿ ಪೇಶ್ವೆಗಳನ್ನು ತೊರೆದುಬಿಟ್ಟ, 1818ರಲ್ಲಿ. ಮರಾಠ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವ ಹೋರಾಟದಲ್ಲಿ ಅವನು ಬ್ರಿಟೀಷರ ಕೈ ಜೋಡಿಸಿದ. (36) ಈ ಸೇವೆಯನ್ನು ಪರಿಗಣಿಸುತ್ತಾ, ಮುನ್ನೂರ ಐವತ್ತು ಹಳ್ಳಿಗಳಷ್ಟಿದ್ದ ಅವನ ಪ್ರಾಂತ್ಯವನ್ನು ಉಳಿಸಿಕೊಳ್ಳುವ ಅವಧಿಯನ್ನು ಬ್ರಿಟೀಷರು ವಿಸ್ತರಿಸಿದರು, ಮೈಸೂರಿನ ನಂತರ ಕರ್ನಾಟಕದಲ್ಲಿದ್ದ ಅತಿ ದೊಡ್ಡ ಪ್ರಾಂತ್ಯವಿದು. ಮಲ್ಲಸರ್ಜವನ್ನು ಟಿಪ್ಪು ಸುಲ್ತಾನ್ 1785ರಲ್ಲಿ ಸೋಲಿಸಿ, ವಶಪಡಿಸಿಕೊಂಡು ಬಂಧನದಲ್ಲಿಟ್ಟಿದ್ದ. ಅವನ ಸಂಸ್ಥಾನ ಕೊನೆಗೊಂಡಿತ್ತು. ಕಿತ್ತೂರು ದೇಶಗತಿಗಳಿಗೆ, ಇತಿಹಾಸ ಒಂದು ಪೂರ್ಣ ಸುತ್ತು ಹೊಡೆದಿತ್ತು. ಆದರೆ 1787ರಲ್ಲಿ, ಮರಾಠರ ಸಂಚು ಟಿಪ್ಪು ಸುಲ್ತಾನನನ್ನು ಸೋಲಿಸಿದಾಗ, ಮಲ್ಲಸರ್ಜ ಮತ್ತೆ ಸ್ಥಾಪಿತನಾಗಿದ್ದ. ವಿಜಯಿಗಳು ಗಡಿಯಾರದ ಮುಳ್ಳನ್ನು ಮತ್ತೆ ತಿರುಗಿಸಿದ್ದರು ಮತ್ತು ಮಲ್ಲಸರ್ಜನಿಗೆ ಅವನ ಅಧಿಕಾರ ಕ್ಷೇತ್ರವಿದ್ದ ಹನ್ನೊಂದು ಹಳ್ಳಿಗಳನ್ನು ಕಾಣ್ಕೆಯಾಗಿ ನೀಡಿದ್ದರು. (37) 1800ರಲ್ಲಿ, ದೊಂಡಿಯಾ ವಾಗ್ ಕರ್ನಾಟಕದ ಉತ್ತರ ಭಾಗಗಳಲ್ಲಿ ಸಂಚರಿಸುತ್ತಿದ್ದಾಗ, ಕಿತ್ತೂರು ದೇಸಾಯಿಗಳು ದೊಂಡಿಯಾನನ್ನು ಹುಡುಕುತ್ತಿದ್ದ ಬ್ರಿಟೀಷರಿಗೆ ನೂರು ಕುದುರೆಸವಾರರನ್ನು ಮತ್ತು ನೂರು ಕಾಲಾಳು ಸೈನಿಕರನ್ನು ಕೊಟ್ಟರು. ಸಂಗೊಳ್ಳಿಯ ಕೋಟೆಯನ್ನೂ ವಸಾಹತುಶಾಹಿಗಳು ಸೇವೆಗೆ ಮೀಸಲಿಟ್ಟರು. (38) ಮನ್ರೋ ಬಹಿರಂಗಪಡಿಸಿದಂತೆ, ಬ್ರಿಟೀಷರು ಕಳೆದೆರಡು ದಶಕಗಳಿಂದ ದೇಸಾಯಿಗಳನ್ನು ಪೋಷಿಸಿ ಬೆಳೆಸಿದ್ದರು. ಬ್ರಿಟೀಷರ ಉದಾರತನ ಅಂತಿಮವಾಗಿ ಶಿವಲಿಂಗ ರುದ್ರ ಸರ್ಜನನ್ನು ಅವರೆಡೆಗೆ ಬರುವಂತೆ ಮಾಡಿತು ಮತ್ತು ಅವನು ತನ್ನ ಕಡೆಯಿಂದ ಮುನ್ನೂರೈವತ್ತು ಹಳ್ಳಿಗಳನ್ನು ಪಡೆದುಕೊಂಡು, ಪೇಶ್ವೆಗಳ ಸಾಮ್ರಾಜ್ಯದ ದಕ್ಷಿಣಕ್ಕಿರುವ ಪ್ರಮುಖ ಆಸರೆಯಾಗಿದ್ದ.

ಸೆಪ್ಟೆಂ 20, 2016

ಪ್ರೀತಿಯನ್ನೇ ಮರೆತಿರಲು

ಪ್ರವೀಣಕುಮಾರ್ ಗೋಣಿ
20/09/2016
ಪ್ರೀತಿಯ ಪರಿಮಳವಿಲ್ಲದ
ರಸಹೀನ ಬದುಕಿಗಿಂತ
ಚರಾ ಚರಗಳಲ್ಲಿ ಅವನಿರುವ
ಗ್ರಹಿಸದೆ ಗೋಳಾಡುವ ಅಜ್ಞಾನಕಿಂತ
ಬೇರೆ ಪಾಮರತೇ ಉಂಟೇ ?

ಸೆಪ್ಟೆಂ 18, 2016

ಅಡ್ಗೆ ಮನೆ: ಅಣಬೆ ಮಸಾಲಾ.

ತಾಜಾ ಆಯ್ಸ್ಟರ್ ಅಣಬೆಯನ್ನು ಬಳಸಿಕೊಂಡು ರುಚಿಯಾದ ಅಣಬೆ ಮಸಾಲಾ ಮಾಡುವ ವಿಧಾನ. ಬಟನ್ ಅಣಬೆ ಬಳಸಿದರೂ ರುಚಿಯಾಗಿರುತ್ತದೆ.
ಒಂದು ಪ್ಯಾಕೆಟ್ ಆಯ್ಸ್ಟರ್ ಅಣಬೆಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಳ್ಳಿ.

ಸೆಪ್ಟೆಂ 17, 2016

ಮರಳಿ ಭೂಮಿ ಪಡೆದ ಸಿಂಗೂರಿನ ರೈತರು: ಕೃಷಿವಲಯಕ್ಕೆ ಸಂದ ಜಯ!

ಸಾಂದರ್ಭಿಕ ಚಿತ್ರ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
17/09/2016
ಸುದ್ದಿ-ನಿನ್ನೆ ಮಮತಾಬ್ಯಾನರ್ಜಿಯವರು ಸಿಂಗೂರಿನ ರೈತರಿಗೆ ಅವರ ಕೃಷಿಭೂಮಿಯನ್ನು ಪರಿಹಾರದ ಸಮೇತ ಮರಳಿಸಿದ್ದಾರೆ!

ಇಡೀ ಇಂಡಿಯಾ ಮುಕ್ತ ಆರ್ಥಿಕ ನೀತಿಗೆ ತನ್ನನ್ನು ತೆರದುಕೊಂಡು ತನ್ನ ಸಮಾಜವಾದಿ ಆಶಯಗಳನ್ನೆಲ್ಲ ಗಾಳಿಗೆ ತೂರುವ ರೀತಿಯಲ್ಲಿ ಹೊಸ ಹೊಸ ಶಾಸನಗಳನ್ನು ರೂಪಿಸುತ್ತಿರುವ ಈ ಹೊತ್ತಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಕುಮಾರಿ ಮಮತಾ ಬ್ಯಾನರ್ಜಿಯವರ ಈ ನಡೆ ನನ್ನ ಮಟ್ಟಿಗಂತು ಐತಿಹಾಸಿಕವೆನಿಸುತ್ತಿದೆ. ಏಕೆಂದರೆ ಚುನಾವಣೆಗಳಲ್ಲಿ ನೀಡುವ ಜನಪರ ಆಶ್ವಾಸನೆಗಳನ್ನು ನೆನಪಲ್ಲಿಟ್ಟುಕೊಂಡು ರಾಜಕಾರಣ ಮಾಡುವವರ ಸಂಖ್ಯೆ ವಿರಳವಾಗುತ್ತಿರುವ ಈ ದಿನಗಳಲ್ಲಿ, ತಾವು ಅಧಿಕಾರದಲ್ಲಿರದೆ ಹೋದಾಗ ಸಿಂಗೂರು ರೈತರ ಹೋರಾಟದಲ್ಲಿ ಬಾಗವಹಿಸಿ ಅವರಿಗೆ ಭೂಮಿಯನ್ನು ಮರಳಿಸುವುದಾಗಿ ಭರವಸೆ ನೀಡಿಯೇ ಅಧಿಕಾರದ ಖುರ್ಚಿಗೆ ಲಗ್ಗೆ ಹಾಕಿದ ಅವರು ತಮ್ಮ ಮಾತನ್ನು ಉಳಿಸಿಕೊಳ್ಳುವುದರ ಮೂಲಕ ಎರಡು ಅಂಶಗಳನ್ನು ಭಾರತೀಯರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.

ಸೆಪ್ಟೆಂ 16, 2016

ಮೇಕಿಂಗ್ ಹಿಸ್ಟರಿ: ಐಜೂರ್ - ಕೊಪ್ಪಳ - ಬೀದರ್ - ಸಿಂಧಗಿ.

Making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
16/09/2016
ಶ್ರೀರಂಗಪಟ್ಟಣದಿಂದ ಓಡಿಹೋದ ಮೇಲೆ ದೊಂಡಿಯಾ ಮೊದಲಿಗೆ ತಲುಪಿದ್ದು ಬ್ರಿಟೀಷರ ವಿರುದ್ಧ ಹೋರಾಡಲು ತಯಾರಿ ಮಾಡಿಕೊಳ್ಳುತ್ತಿದ್ದ ಪಾಳೇಗಾರ ವೆಂಕಟಾದ್ರಿ ನಾಯಕರ ಪ್ರಾಂತ್ಯವಾದ ಐಜೂರಿಗೆ. 

ಹಾಸನದ ಸಕಲೇಶಪುರ ತಾಲ್ಲೂಕಿನ ಐಜೂರಿನ ಪಾಳೇಗಾರರು ಇಕ್ಕೇರಿಯ ನಾಯಕರ ಸಾಮಂತರು. ಕೊಡವರನ್ನು ನಿಗ್ರಹಿಸಲು ಪ್ರಯತ್ನಿಸಿ ಕಲಿತ ಪಾಠಗಳಿಂದ, ಟಿಪ್ಪು ಐಜೂರಿನ ಪಾಳೇಗಾರ ಕೃಷ್ಣಪ್ಪ ನಾಯಕನೊಡನೆ ಗೆಳೆತನ ಬೆಳೆಸಿಕೊಂಡು; ಐಜೂರಿನ ಪಾಳೇಗಾರ ಕೃಷ್ಣಪ್ಪ ನಾಯಕ ಬ್ರಿಟೀಷರಿಗೆ ಬೆಂಬಲ ಕೊಡುತ್ತಿದ್ದರೂ ಅವನೊಡನೆ ಗೆಳೆತನ ಬೆಳೆಸಿಕೊಂಡ ಟಿಪ್ಪು, ಅವನಿಗೆ ತನ್ನ ಪ್ರಾಂತ್ಯವನ್ನು ಉಳಿಸಿಕೊಳ್ಳಲು ಅನುಮತಿ ನೀಡಿದ, ವಾರ್ಷಿಕ ಕಪ್ಪ ಕಾಣಿಕೆಯನ್ನು ಶ್ರೀರಂಗಪಟ್ಟಣಕ್ಕೆ ನೀಡಬೇಕು ಎಂಬ ಶರತ್ತಿನೊಂದಿಗೆ. ನಂತರ, ಬೆಂಗಳೂರು ಮಂಗಳೂರು ರಸ್ತೆಯಲ್ಲಿರುವ ಬಲ್ಲಂ ಪ್ರದೇಶದಲ್ಲಿ ಮಂಜರಾಬಾದ್ ಕೋಟೆಯನ್ನು ಕಟ್ಟಿದ, ಕರಾವಳಿಯೊಡನೆ ತೊಂದರೆಯಿಲ್ಲದ ವಾಣಿಜ್ಯಕ ವ್ಯವಹಾರವನ್ನು ಸಾಧಿಸಿದ.

ರೋಗಗ್ರಸ್ತ ಸಾರ್ವಜನಿಕ ಉದ್ದಿಮೆಗಳಿಗೆ ಅಂತಿಮ ಸಂಸ್ಕಾರ! ನೀತಿ ಆಯೋಗದಿಂದ ಸರಕಾರಕ್ಕೆ ಸೂಚನೆ

ಕು.ಸ. ಮಧುಸೂದನ್ ರಂಗೇನಹಳ್ಳಿ.
16/09/2016
ನಷ್ಟದಲ್ಲಿವೆಯೆಂದು ಹೇಳಲಾಗುತ್ತಿರುವ ಸುಮಾರು 74 ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಪಟ್ಟಿಯನ್ನು ಸರಕಾರಕ್ಕೆ ನೀಡಿರುವ ನೀತಿ ಆಯೋಗವು ಬಹುತೇಕ ಅವುಗಳನ್ನು ಮುಚ್ಚುವ ಅಥವಾ ಖಾಸಗಿಯವರಿಗೆ ವಹಿಸಿಕೊಡುವ ಪ್ರಸ್ತಾವನೆಯನ್ನು ಸಲ್ಲಿಸಿದೆ.

ತೊಂಭತ್ತರ ದಶಕದಲ್ಲಿ ಆರಂಭಗೊಂಡ ಜಾಗತೀಕರಣದ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡವರ್ಯಾರಿಗೂ ನೀತಿ ಆಯೋಗದ ಇವತ್ತಿನ ಈ ನಡೆ ಅಚ್ಚರಿಯನ್ನೇನು ಉಂಟು ಮಾಡುವುದಿಲ್ಲ. ಯಾಕೆಂದರೆ ಮುಕ್ತ ಆರ್ಥಿಕ ನೀತಿಯ ಮೂಲ ಉದ್ದೇಶವೇ ಸರಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳನ್ನು ಖಾಸಗಿ ಬಂಡವಾಳಶಾಹಿಗಳ ಪಾದಗಳಿಗೆ ಸಮರ್ಪಿಸುವುದಾಗಿತ್ತು. ಸರಕಾರದ ಕೆಂಪು ಪಟ್ಟಿಗಳ, ಲೈಸೆನ್ಸ್ ರಾಜ್ ಬಗ್ಗೆ ಮಾತಾಡುವ ಮುಕ್ತ ಆರ್ಥಿಕ ನೀತಿಯ ಪರವಾದ ಬಂಡವಾಳಶಾಹಿಗಳ ಹುನ್ನಾರವೇ ಸಮಾಜವಾದಿ ವ್ಯವಸ್ತೆಯಲ್ಲಿರಬಹುದಾದ ದೋಷಗಳನ್ನು ಭೂತಗನ್ನಡಿಯಲ್ಲಿ ತೋರಿಸುತ್ತ, ಜನರ ದೃಷ್ಠಿಯಲ್ಲಿ ಸರಕಾರಿ ಸ್ವಾಮ್ಯದ ಉದ್ದಿಮೆಗಳೆಂದರೆ ಭ್ರಷ್ಟಾಚಾರದ ಕೂಪಗಳೆಂಬ ಅನುಮಾನ ಮೂಡಿಸಿ, ಖಾಸಗಿಯವರು ಮಾತ್ರ ಅವುಗಳನ್ನು ಉದ್ದಾರ ಮಾಡಬಲ್ಲರೆಂಬ ನಂಬಿಕೆಯೊಂದನ್ನು ಹುಟ್ಟು ಹಾಕುವುದಾಗಿದೆ.ಕಳೆದ 25 ವರ್ಷಗಳಲ್ಲಿ ಆಗಿ ಹೋದ ಎಲ್ಲ ಸರಕಾರಗಳ ನೀತಿಗಳೂ ಸಹ ಇಂತಹದೊಂದು ಕ್ರಿಯೆಗೆ ಉತ್ತೇಜನ ನೀಡುತ್ತಲೇ ಬಂದವು.