ಫೆಬ್ರ 14, 2017

ಮಹಾರಾಷ್ಟ್ರ-ಸ್ಥಳೀಯ ಚುನಾವಣೆಗಳು: ಬಾಜಪ-ಶಿವಸೇನೆಗಳ ಪ್ರತ್ಯೇಕ ಸ್ಪರ್ದೆಯು, ಕಾಂಗ್ರೆಸ್ಸಿಗೆ ಗೆಲ್ಲಲೇಬೇಕಾದ ಅನಿವಾರ್ಯತೆಯೂ!

ಕು.ಸ.ಮಧುಸೂದನ್
ಇದೇ ತಿಂಗಳ 16ನೇ ಮತ್ತು 21ನೇ ತಾರೀಖಿನಂದು ಮಹಾರಾಷ್ಟ್ರದ 10ಮುನ್ಸಿಪಲ್ ಕೌನ್ಸಿಲ್ಲುಗಳಿಗೆ, 283 ಪಂಚಾಯತ್ ಸಮಿತಿಗಳಿಗೆ, 26 ಜಿಲ್ಲಾ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಇದರಲ್ಲಿ ಬಹು ಪ್ರಮುಖವಾದದ್ದು ಮುಂಬೈ ನಗರದ ಆಡಳಿತದ ಹೊಣೆ ಇರುವ ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಗಳಾಗಿವೆ. ಇದಕ್ಕೆ ಕಾರಣಗಳೂ ಇವೆ:

ಮುಂಬೈ ಇಂಡಿಯಾದ ವಾಣಿಜ್ಯ ನಗರಿಯಾಗಿದ್ದು ಈ ನಗರದ ಆಡಳಿತ ಹಿಡಿಯುವುದು ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿರುತ್ತದೆ. ದೇಶದ ಹಲವಾರು ಪುಟ್ಟ ರಾಜ್ಯಗಳ ಬಜೆಟ್ಟಿಗಿಂತ ಈ ನಗರ ಪಾಲಿಕೆಯ ಬಜೆಟ್ ದೊಡ್ಡದಿದ್ದು ವಾರ್ಷಿಕವಾಗಿ ಲಕ್ಷಾಂತರ ಕೋಟಿಗಳ ಆಯವ್ಯಯ ಮಂಡನೆಯಾಗುತ್ತಿದೆ. ಇವೆಲ್ಲವನ್ನೂ ಮೀರಿ ಮುಂಬೈ ನಗರದಲ್ಲಿ ದೇಶದ ಎಲ್ಲಾ ಭಾಗಗಳ ಜನರು ವಾಸವಾಗಿದ್ದು, ಒಂದು ಮಿನಿ ಇಂಡಿಯಾ ಎನ್ನಬಹುದಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನೇ ನಿಯಂತ್ರಿಸಬಲ್ಲಂತಹ ನೂರಾರು ಉದ್ಯಮಗಳು ಇಲ್ಲವೆ. ಹೀಗಾಗಿ ಮಹಾರಾಷ್ಟ್ರದ ಪೌರ ಚುನಾವಣೆಗಳಲ್ಲಿ ಮುಂಬೈ ನಗರ ಪಾಲಿಕೆಯ ಚುನಾವಣೆಗಳಿಗೆ ವಿಶೇಷ ಮಹತ್ವ ಇದೆ.

ಫೆಬ್ರ 1, 2017

ಬಾಜಪದ ಪಾಲಿಗೆ ಮಹತ್ತರವಾದ ಉತ್ತರಪ್ರದೇಶದ ವಿದಾನಸಭಾ ಚುನಾವಣೆಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದ ವಿದಾನಸಭಾ ಚುನಾವಣೆಗಳನ್ನು ಗೆಲ್ಲಲು ಬಾಜಪ ಇನ್ನಿರದ ಪ್ರಯತ್ನ ಮಾಡುತ್ತಿದೆ.ಇದೀಗ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಈಗಾಗಲೇ ಎರಡು ರಾಜ್ಯಗಳಲ್ಲಿ ಬಾಜಪ ಆಳ್ವಿಕೆ ನಡೆಸುತ್ತಿದ್ದು, ಸಹಜವಾಗಿಯೇ ಆಡಳಿತ ವಿರೋಧಿ ಅಲೆಯನ್ನು ಅದು ಎದುರಿಸುತ್ತಿದೆ.ಹಿಮಾಚಲಪ್ರದೇಶ ಮತ್ತು ಮಣಿಪುರದಂತಹ ಪುಟ್ಟ ರಾಜ್ಯಗಳ ಪಲಿತಾಂಶಗಳು ರಾಷ್ಟ್ರ ರಾಜಕಾರಣದಲ್ಲಿ ಅಂತಹ ಕಂಪನಗಳನ್ನು ಉಂಟು ಮಾಡಲಾರವು. ಇಂತಹ ಸನ್ನಿವೇಶದಲ್ಲಿ, ಅದೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಸರಿಸುಮಾರು ಮೂರುವರ್ಷಗಳಾಗುತ್ತಿರುವ ಈ ಸಮಯದಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ಬಾಜಪದ ಪಾಲಿಗೆ ಮಹತ್ವದ್ದಾಗಿವೆ.ಉತ್ತರಪ್ರದೇಶವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಬಾಜಪಕ್ಕೆ ಇರಲು ಎರಡು ಮುಖ್ಯ ಕಾರಣಗಳಿವೆ. ಅವೆಂದರೆ:

ಪ್ರೀತಿಯ ಕನವರಿಕೆ.

ನಾಗಪ್ಪ.ಕೆ.ಮಾದರ
ಮನಸ್ಸಿನ ಭಾವದಿ ಕಲರವ ಮೂಡಿಸಿ 
ಬೆಳದಿಂಗಳ ಬೆಳಕು ನೀ ತಾಗಿಸಿ
ಸವಿ ನುಡಿಯ ನುಡಿಯಲು ಬಲ್ಲೆಯಾ 
ಜೀವದ ಗೆಳತಿಯೇ!

ಜನ 23, 2017

ಧೋಬಿಘಾಟ್’ನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರ ‘ಮೈಲುತುತ್ತ’ ಪದ್ಯಸಂಕಲನ ಬಿಡುಗಡೆ

ಜ.20ರಂದು ಬೆಂಗಳೂರಿನಲ್ಲಿ ಪತ್ರಕರ್ತ, ಸಿನೆಮಾ ನಿರ್ದೇಶಕರೂ ಆಗಿರುವ ಚಕ್ರವರ್ತಿ ಚಂದ್ರಚೂಡ್ ಅವರ “ಮೈಲುತುತ್ತ’ ಪದ್ಯಸಂಕಲನ ವಿಭಿನ್ನ ರೀತಿಯಲ್ಲಿ ಲೋಕಾರ್ಪಣೆಗೊಂಡಿತು. ಮಲ್ಲೇಶ್ವರದ ಧೋಬಿಘಾಟ್’ನಲ್ಲಿ ‘ಪದ್ಯಗಳಿಗೆ ಬಿಡುಗಡೆ’ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಚಕ್ರವರ್ತಿಯವರ ದರ್ವೇಶ್ ಚೌಕಿ ತಂಡ ಈವರೆಗಿನ ಸಾಹಿತ್ಯಲೋಕದ ಶಿಷ್ಟಾಚಾರಗಳನ್ನು ಮೀರಿ ಕಾರ್ಯಕರ್ಮ ರೂಪಿಸಿತ್ತು. 

ತಲ್ಲಣ

ಸವಿತ ಎಸ್ ಪಿ
ಕಂಗಳಲಿ ನಿಂತು
ಕಾಡುವ ಬಗೆ ಏನು
ನೋಟದಲಿ ಸೆಳೆದು
ಮಾಡಿರುವೆ ಮೋಡಿ

ಜನ 20, 2017

ಮನದ ಮರೆಯಲಿ ನಿಂತ ಚಲುವೆ

ನಾಗಪ್ಪ.ಕೆ.ಮಾದರ
ರವಿಯ ಕಿರಣಗಳ ನಡುವೆ 
ಬಳಲುವ ಚಲುವೆ ನಿನ್ನಂದವನ್ನು 
ನೋಡಲು ಸೂರ್ಯ ತನ್ನ 
ರಶ್ಮಿಯನ್ನು ಚಿಮ್ಮುಕಿಸುತಿಹನು

ಮಣಿಪುರ ವಿದಾನಸಭಾ ಚುನಾವಣೆ: ಜನಾಂಗೀಯ ಸಂಘರ್ಷವೇ ಪ್ರಮುಖವಾಗಿ, ಮಿಕ್ಕೆಲ್ಲ ಅಭಿವೃದ್ದಿಯ ವಿಚಾರಗಳು ನಗಣ್ಯವಾಗಿರುವ ದುರಂತ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದೀಗ ಚುನಾವಣೆ ಘೋಷಣೆಯಾಗಿರುವ ಐದು ರಾಜ್ಯಗಳ ಪೈಕಿ ಮಣಿಪುರ ರಾಜ್ಯ ವಿದಾನಸಭಾ ಚುನಾವಣೆಗಳು ಯಾವುದೇ ಮಾನದಂಡದಿಂದ ನೋಡಿದರು ರಾಷ್ಟ್ರದ ಸಾಮಾನ್ಯಜನರ ಗಮನ ಸೆಳೆಯುವಲ್ಲಿ ವಿಫಲವಾಗಿವೆ ಎನ್ನಬಹುದು. ಯಾಕೆಂದರೆ ಇಂಡಿಯಾದ ಉಳಿದ ಭಾಗಗಳ ಜನರಿಗೆ ಈಶಾನ್ಯರಾಜ್ಯಗಳ ಬಗ್ಗೆ ಅಷ್ಟೇನು ಅರಿವು, ಕಾಳಜಿ ಇದ್ದಂತಿಲ್ಲ. ಸ್ವಾತಂತ್ರ ಬಂದ ದಿನದಿಂದಲೂ ಅವು ತೀರಾ ನಿರ್ಲಕ್ಷಿತ ಪ್ರದೇಶಗಳಾಗಿಯೇ ಉಳಿದಿವೆ. ಇದಕ್ಕೆ ಇರಬಹುದಾದ ಕೆಲವು ಕಾರಣಗಳೆಂದರೆ, ಈಶಾನ್ಯದಲ್ಲಿರುವ ರಾಜ್ಯಗಳು ಬೌಗೋಳಿಕವಾಗಿ ಮತ್ತು ಜನಸಂಖ್ಯೆಯ ದೃಷ್ಠಿಯಿಂದ ಬಹಳ ಸಣ್ಣವಾಗಿದ್ದು, ಅಲ್ಲಿಯ ಜನರ ಚಹರೆ ವೇಷಭೂಷಣಗಳು ಭಿನ್ನವಾಗಿರುವುದು. ಜೊತೆಗೆ ಮೊದಲಿನಿಂದಲೂ ಅಲ್ಲಿ ಜನಾಂಗೀಯ ಮತ್ತು ಸ್ವಾತಂತ್ರದ ಸಂಘರ್ಷಗಳು ನಡೆಯುತ್ತಲೇ ಇರುವುದು.

ಜನ 19, 2017

ಸ್ವರ್ಗದಿಂದೊಂದು ಸ್ವಗತ: ಎಂ.ಕೆ.ಗಾಂದಿ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನನ್ನ ದೇಶದಲ್ಲಿ ನೋಟುಗಳ ಮೇಲಿದ್ದ ನನ್ನ ಬಾವಚಿತ್ರವನ್ನು ತೆಗೆದು ಹಾಕಿದ್ದಾರೆ ಮತ್ತು ನಾನು ಬಹಳವಾಗಿ ಪ್ರೀತಿಸುತ್ತಿದ್ದ ಖಾದಿಯನ್ನು ಪ್ರಚಾರ ಮಾಡುತ್ತಿದ್ದ ಖಾದಿಗ್ರಾಮೋದ್ಯೋಗದ ಕ್ಯಾಲೆಂಡರಿನಿಂದಲೂ ನನ್ನ ಬಾವಚಿತ್ರವನ್ನು ತೆಗೆದು ಬೇರೆಯವರದನ್ನು ಹಾಕಿದ್ದಾರೆಂದು ಇದೀಗ ಬಂದವರೊಬ್ಬರು ನನಗೆ ಹೇಳಿದರು. ನನಗೇನೂ ಅನಿಸಲಿಲ್ಲ. ಯಾಕೆಂದರೆ ಅವರು ಮುದ್ರಿಸುತ್ತಿದ್ದ ನೋಟುಗಳ ವ್ಯಾಮೋಹ ನಾನಲ್ಲಿ ಇದ್ದಾಗಲೂ ನನಗಿರಲಿಲ್ಲ. ಇನ್ನು ಕ್ಯಾಲೆಂಡರ್ ಡೈರಿಗಳ ಮೂಲಕ ಪ್ರಚಾರ ನಡೆಸುವ ತಂತ್ರಗಳು ನನ್ನ ಕಾಲದಲ್ಲಿರಲಿಲ್ಲ. ಮತ್ತು ಅಂತವುಗಳ ಬಗ್ಗೆ ನನಗೆ ನಂಬಿಕೆಯೂ ಹಿಂದೆ ಇರಲಿಲ್ಲ, ಈಗಲೂ ಇಲ್ಲ.

ಉತ್ತರಪ್ರದೇಶ: M.Y FACTOR

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಯಾರೇನೆ ಹೇಳಿದರು ಬರಲಿರುವ ಉತ್ತರಪ್ರದೇಶದ ಚುನಾವಣೆಯ ಅಂತಿಮ ಪಲಿತಾಂಶವನ್ನು ನಿರ್ದರಿಸಲಿರುವುದು 'ಮೈಫ್ಯಾಕ್ಟರ್'(M.YFACTOR) ಎನ್ನುವುದಂತು ಬಹುತೇಕ ನಿಜ! ಎಂವೈ ಅಂದರೆ 'ಮುಸ್ಲಿಂ ಮತ್ತು ಯಾದವ' ಎಂದರ್ಥ. ಕಳೆದೆರಡು ಮೂರು ಚುನಾವಣೆಗಳ ಪಲಿತಾಂಶಗಳನ್ನು ಹಾಗು ವರ್ತಮಾನದಲ್ಲಿ ಆ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅದ್ಯಯನ ಮಾಡಿದರೆ ಈ ಮೈ ಫ್ಯಾಕ್ಟೆರಿನ ಬಗ್ಗೆ ನಿಖರವಾದ ಅರ್ಥ ಮತ್ತು ಬಲ ತಿಳಿಯುತ್ತದೆ.

ಕಳೆದ ಬಾರಿ ಒಟ್ಟಾರೆ ಶೇಕಡಾ 29.15ರಷ್ಟು ಮತಗಳನ್ನು ಪಡೆದ ಸಮಾಜವಾದಿ ಪಕ್ಷ 224 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಪಡೆದಿತ್ತು.ಎರಡನೆ ಸ್ಥಾನದಲ್ಲಿ ಬಹುಜನ ಪಕ್ಷವು ಶೇಕಡಾ25.91 ಮತಗಳನ್ನು ಗಳಿಸಿ 80 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಭಾರತೀಯ ಜನತಾ ಪಕ್ಷವು ಶೇಕಡಾ 15ರಷ್ಟು ಮತಗಳನ್ನು ಪಡೆದು47 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇನ್ನುಳಿದಂತೆ ಮತ್ತೊಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಕೇವಲ ಶೇಕಡಾ 11.63 ಮತಗಳಿಸಿ 28 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳವು ಶೇಕಡಾ 2.33 ಮತಗಳಿಸಿ 9 ಸ್ಥಾನಗಳಿಗೆ ಸೀಮಿತವಾಗಿತ್ತು. (ನಂತರ ನಡೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಾಜಪ ಹೆಚ್ಚು ಸ್ಥಾನಗಳನ್ನು ಗೆದ್ದುತನ್ನ ಮತಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದರೂ, ನಾನಿಲ್ಲಿ ಹಿಂದಿನ ವಿದಾನಸಭಾ ಚುನಾವಣೆಯ ಪಲಿತಾಂಶವನ್ನು ಮಾತ್ರ ವಿಶ್ಲೇಷಣೆಗೆ ಬಳಸಿಕೊಂಡಿದ್ದೇನೆ).

ಜನ 12, 2017

ಹತ್ತಿರವಾಗುತ್ತಿರುವ ನಿತೀಶ್ ಕುಮಾರ್ ಮತ್ತು ನರೇಂದ್ರಮೋದಿ: ರಾಜಕೀಯ ಮಾಗುವಿಕೆಯೊ? ಅವಕಾಶವಾದಿತನವೊ?

ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ (ಸಾಂದರ್ಭಿಕ ಚಿತ್ರ)
ಕು.ಸ.ಮಧುಸೂದನ ರಂಗೇನಹಳ್ಳಿ
ಬಹುಶ: ಶಕ್ತಿರಾಜಕಾರಣದಲ್ಲಿ ಅಧಿಕಾರದ ಕುರ್ಚಿಗೆ ಮಾತ್ರ ಅಂತಹ ಅದ್ಬುತ ಶಕ್ತಿ ಇರುವಂತೆ ಕಾಣುತ್ತದೆ. ವಿರೋಧಪಕ್ಷದಲ್ಲಿದ್ದಾಗ ಬೆಂಕಿ ಉಗುಳುತ್ತಿದ್ದ ನಾಯಕರು ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ಪಡೆದ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ನಿರಂತರವಾಗಿ ಅದು ತಮ್ಮ ಕೈತಪ್ಪಿ ಹೋಗದಂತೆ ನೋಡಿಕೊಳ್ಳಲು ರಾಜಕೀಯವಾಗಿ ರಾಜಿಯಾಗುತ್ತ ಹೋಗುತ್ತಾನೆ. ಅದನ್ನು ರಾಜಕೀಯ ಪಂಡಿತರು ರಾಜಕಾರಣಿಯೊಬ್ಬನ ವ್ಯಕ್ತಿತ್ವದ ಮಾಗುವಿಕೆ ಎನ್ನುತ್ತಾರೆ. ಆದರೆ ಸಾಮಾನ್ಯರ ಮಟ್ಟಿಗೆ ಅದು ಅವಕಾಶವಾದಿತನ ಮಾತ್ರ. ಇಂಡಿಯಾದಂತಹ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವೇ ಅಂತಿಮವಾದ ಗುರಿಯಾಗಿರುವುದರಿಂದ ಇಂತಹ ಮಾಗುವಿಕೆಗಳಿಗೆ ಅಚ್ಚರಿ ಪಡುವಂತದ್ದೇನಿಲ್ಲ. ರಾಜಕೀಯದಲ್ಲಿ ಇವತ್ತಿನ ಮಿತ್ರರುಗಳು ನಾಳಿನ ಶತ್ರುಗಳಾಗುವಂತೆ, ಇವತ್ತಿನ ಶತ್ರುಗಳೂ ನಾಳೆ ಮಿತ್ರರುಗಳಾಗಬಹುದಾದ ಸಾಧ್ಯತೆಯೂ ಇದೆ. ಇಂಡಿಯಾದ ರಾಜಕಾರಣದ ವೈಶಿಷ್ಟ್ಯತೆ ಇರುವುದೆ ಇಂತಹ ಅಸಾದ್ಯಗಳನ್ನು ಸಾದ್ಯವಾಗಿಸುವಲ್ಲಿ. ಇದಕ್ಕೆ ತಾಜಾ ಉದಾಹರಣೆ ನಮ್ಮ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಮತ್ತು ಬಿಹಾರದ ಮುಖ್ಯಮಂತ್ರಿಗಳೂ ಆದ ಶ್ರೀ ನಿತೀಶ್ ಕುಮಾರ್ ಅವರು. ಕೆಲವೇ ತಿಂಗಳುಗಳ ಹಿಂದೆ ಹಾವು ಮುಂಗುಸಿಗಳಂತೆ ಇದ್ದ ಮೋದಿಯವರು ಮತ್ತು ನಿತೀಶ್ ಅವರು ಇದೀಗ ತಮ್ಮ ವೈಮನಸ್ಸುಗಳನ್ನು ಮರೆತು ಬಿಟ್ಟವರಂತೆ ಪರಸ್ಪರರನ್ನು ಹೊಗಳುತ್ತ ತಮ್ಮ ರಾಜಕೀಯದ ದಾಳಗಳನ್ನು ಉರುಳಿಸುತ್ತಿದ್ದಾರೆ.