Dec 21, 2014

ದಾಂಪತ್ಯ ಗೀತೆ

ಉಮೇಶ ಮುಂಡಳ್ಳಿ ಭಟ್ಕಳ
ತವರು ಸಿರಿಗಿಂತ
ನಿಮ್ಮ ಮನ ಹಿರಿದೆನಗೆ
ನಿಮ್ಮ ಎದೆ ಆಸರೆಯು 
ಒಲವು ನನಗೆ.

ಹಣ್ಣುಂಟು ಹಾಲುಂಟು
ಜೇನುಂಟು ತವರಲ್ಲಿ
ನಿಮ್ಮ ಪ್ರೀತಿಗೆ ಅದುವೆ
ಸಮನು ಅಹುದೆ.

ಅಮ್ಮನಾ ಆರೈಕೆ
ಇಹುದಿಂದು ತವರಲ್ಲಿ
ನಿಮ್ಮ ಕರದಾರೈಕೆ
ಕೊನೆಯವರೆಗೆ.

ರೆಸಿಮೆಯ ಜರಿ ಸೀರೆ
ತೊಡಿಸಿಹರು ಎನಗಿಲ್ಲಿ
ನಿಮ್ಮ ಪ್ರೇಮದ ಧಾರೆ
ಎನಗೆ ಮಿಗಿಲು.

ಒಂದು ತಿಂಗಳೊಳಗೆ
ಕಂದ ಬರುವನು ಮನೆಗೆ
ನೆನಪು ಕಾಡುವುದೆನಗೆ
ಬೇಗ ಬರುವೆ.

No comments:

Post a Comment