ಡಾ. ಅಶೋಕ್. ಕೆ. ಆರ್.
ಬಾಗಿಲ ಚಿಲುಕ ಹಾಕಿ ಬಂದು ಹಾಸಿಗೆಯಲ್ಲಿ ಅಡ್ಡಾದೆ. ಕಣ್ಣಂಚಿನಲ್ಲಿ ನೀರು ಸುರಿದು ಯಾವಾಗ ಒಣಗಿತೋ ಯಾವಾಗ ನನಗೆ ನಿದ್ರೆ ಆವರಿಸಿತೋ ನನಗೂ ತಿಳಿಯದು. ಸಮಯ ನೋಡಿದರೆ ಏಳೂವರೆ ಆಗಿತ್ತು. ರಾಜೀವ ಇನ್ನೂ ಬಂದಿರಲಿಲ್ಲ. ಫೋನ್ ಮಾಡಿದೆ. ಕಟ್ ಮಾಡಿದರು. ಮತ್ತೊಮ್ಮೆ ಮಾಡುವಷ್ಟರಲ್ಲಿ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಫೋನ್ ಸ್ವಿಚ್ ಆಫ್ ಮಾಡಿಕೊಂಡು ಅಪ್ಪನ ಮನೆಗಾದರೂ ಹೋಗಿಬಿಡುವ ಎಂದುಕೊಳ್ಳುವಷ್ಟರಲ್ಲಿ ಸಾಗರನ ಫೋನ್ ಬಂದಿತ್ತು. ಕರೆ ಸ್ವೀಕರಿಸಿ ಹಲೋ ಅನ್ನುವಷ್ಟರಲ್ಲಿ "ಯಾಕೋ ಭಯಂಕರ ಬೇಸರವಾಗ್ತಿದೆ ಕಣೇ" ಅಂದ. ದನಿಯಲ್ಲಿ ದುಃಖವಿತ್ತು.
'ಸೇಮ್ ಹಿಯರ್ ಕಣೋ. ನಾನೂ ಒಂದ್ ರೌಂಡು...ಒಂದೇನಾ?? ಎಷ್ಟೋ ರೌಂಡು ಅತ್ತು ಮುಗಿಸಿದೆ ಈಗಷ್ಟೇ'
“ಯಾಕೋ ಪುಟ್ಟಾ. ಏನಾಯ್ತೋ? ನಾನೇನಾದ್ರೂ ತಪ್ಪಾಗ್ ನಡ್ಕಂಡ್ನ? ಅಥವಾ ಅವತ್ತು ನಾನೇನೋ ಗೀಚಿದ್ದು ಓದಿ ಹೇಳಿದ್ದಕ್ಕೆ ಬೇಜಾರ್ ಮಾಡ್ಕಂಡ್ಯ?”
ಅಯ್ಯೋ ಅದನ್ನೆಲ್ಲ ಯೋಚಿಸುವಷ್ಟು ಪುರುಸೊತ್ತಾದರೂ ನನಗೆಲ್ಲಿದೆ ಅನ್ನೋ ವಾಕ್ಯ ಬಾಯಿಗೆ ಬಂತಾದರೂ ಬೇಸರಗೊಳ್ಳುತ್ತಾನೆ ಅಂತ ಹೇಳಲಿಲ್ಲ. ಹೆಸರಿಗಷ್ಟೇ ಸೋಲ್ ಮೇಟು, ಆತ್ಮಸಂಗಾತಿ..... ಅದ್ಯಾರೇ ಆದ್ರೂ ಮನದ ಭಾವನೆಗಳನ್ನು ಪೂರ್ಣವಾಗಿ ಹಂಚಿಕೊಳ್ಳೋದಿಕ್ಕಾಗೋದಿಲ್ಲ ಅನ್ನುವುದಷ್ಟೇ ಅಂತಿಮ ಸತ್ಯ.
'ಹೇ. ಇಲ್ವೋ. ಅದಕ್ಯಾಕ್ ಬೇಸರ ಮಾಡಿಕೊಳ್ಳಲಿ. ಗೊತ್ತಲ್ವ ನಿಂಗ್ಯಾಕೆ ಹಂಗೆಲ್ಲ ಅನ್ನಿಸ್ತದೆ ಅಂತ'
“ಮತ್ತೆ ಇನ್ನೇನಾಯ್ತೆ"
'ನೀ ಯಾಕ್ ಭಯಂಕರ ಬೇಸರದಲ್ಲಿದ್ದೆ?'
“ಏನಿಲ್ವೇ ಮಾಮೂಲಿ"
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.