Dec 10, 2014

ಅಂಗವಿಕಲರ ರಾಜ್ಯ ಸಂಘಟನೆಗೆ ಸಹಕರಿಸಲು ಮನವಿ

office bearers
ಪತ್ರಿಕಾ ಪ್ರಕಟಣೆ.
ಅಂಗವಿಕಲರ ಅಭಿವೃದ್ಧಿಗಾಗಿ ಕಳೆದ 40 ವರ್ಷಗಳಿಂದ ಹಗಲಿರುಳು ದುಡಿಯುತ್ತಿರುವ ಶ್ರೀ ಕೊಡಕ್ಕಲ್ ಶಿವಪ್ರಸಾದರು ಇದೀಗ ಅಖಿಲ ಭಾರತ ಅಂಗವಿಕಲರ ನೌಕರರ ಸಂಘ (ರಿ) ಇದರ ರಾಜ್ಯ ಸಂಚಾಲಕರಾಗಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಅವರೀಗ ಕರ್ನಾಟಕದಲ್ಲಿ ಅಂಗವಿಕಲರ ಸಂಘಟನೆಗಾಗಿ ಕಾರ್ಯತತ್ಪರರಾಗಿದ್ದಾರೆ.
ಅಂಗವಿಕಲ ನೌಕರರಿಗೆ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಅಂಗವಿಕಲ ನೌಕರರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರ ಒದಗಿಸಿ ಅವರನ್ನು ಹಸನ್ಮುಖಿಗಳಾಗಿಸುವುದೇ ಅಲ್ಲದೆ ಅನೇಕ ಉದ್ದೇಶಗಳ ದ್ಯೇಯವನ್ನು ಈ ಸಂಘಟನೆ ಇಟ್ಟುಕೊಂಡಿದೆ. ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಿಂದ ಕನಿಷ್ಟ 8 ಮಂದಿ ನೌಕರಿಯಲ್ಲಿರುವ ಅಂಗವಿಕಲರು ಒಟ್ಟು ಸೇರಬೇಕಾಗಿದ್ದು ಪ್ರತಿ ಜಿಲ್ಲೆಯಿಂದ ಅಂಗವಿಕಲರ ನೌಕರರು ತಮ್ಮ ತಮ್ಮ ವಿಳಾಸ ಹಾಗೂ ಮೊಬೈಲ್ ನಂಬರುಗಳನ್ನು ಕಳುಹಿಸಿಕೊಡುವ ಮೂಲಕ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಇದರ ಶಾಖೆಗಳನ್ನು ಏರ್ಪಡಿಸಿ ಸಂಘಟಿತರಾಗಲು ಮನವಿ ಮಾಡಲಾಗಿದೆ.
ಕೊಡಕ್ಕಲ್ ಶಿವಪ್ರಸಾದ್
ರಾಜ್ಯದ ಪ್ರತಿ ಜಿಲ್ಲೆಯಿಂದ ಅಂಗವಿಕಲ ನೌಕರರು ಶ್ರೀ ಕೊಡಕ್ಕಲ್ ಶಿವಪ್ರಸಾದ, ಶಿವನಾಗ, 2ನೇ ತಿರುವು, ಶ್ರೀ ಶಾರದಾ ದೇವಿ ಶಾಲೆ ಎದುರು, ಗುಂಡಪ್ಪ ಶೆಡ್, ಶಿವಮೊಗ್ಗ - 577201 ಈ ವಿಳಾಸಕ್ಕಾಗಲೀ ಅಥವಾ ಇ ಮೇಲ್ ಮುಖಾಂತರ kodakkal.s@rediffmail.com ಇಲ್ಲಿಗೆ ಕಳುಹಿಸಿಕೊಡಲು ಕೋರಿದೆ.

No comments:

Post a Comment