ಜನ 13, 2019

ಎನಿತು ದಕ್ಯಾವು ?

ಪ್ರವೀಣಕುಮಾರ್ ಗೋಣಿ
ಅರ್ಪಣೆ ಈಡಿಯಾಗಿ
ಇರದಿರಲು ಅರಿವಿಗೆ 
ಬಂದೀತೆ ಅವನಿರುವಿನ ಅನುಭಾವ ?

ಅಣು ಅಣುವು ಬಿಸಿಗೆ 
ತನುವೊಡ್ಡಿ ಕೊಳ್ಳದಿರಲು 
ಕೆನೆಗಟ್ಟಿ ಹೋದೀತೇ ಹಾಲು ?

ಜನ 5, 2019

ಒಂದು ಬೊಗಸೆ ಪ್ರೀತಿ: ಪ್ರವೇಶ.

ಡಾ. ಅಶೋಕ್. ಕೆ. ಆರ್
“ಉಹ್ಞೂ. ಅವಳೆಡೆಗೆ ನನ್ನಲ್ಲಿರುವ ಪ್ರೀತಿ, ಪ್ರೇಮದ ಭಾವನೆಗಳನ್ನು ಸುಳ್ಳೆಂದು ಹೇಳಲಾರೆ, ತಿರಸ್ಕರಿಸಲಾರೆ, ಪದಗಳನ್ನು ಸುಂದರವಾಗಿ ಜೋಡಿಸಿ – ಪೋಣಿಸಿ ಭಾವನೆಗಳನ್ನು ತೇಲಿಬಿಡಲಾರೆ. ಹೌದು, ಅವಳೆಂದರೆ ನನಗಿಷ್ಟ, ಅವಳ ಮಾತು, ನಗು, ವ್ಯಕ್ತಿತ್ವ, ಬುದ್ಧಿಮತ್ತೆ, ಯೋಚನಾಶಕ್ತಿ, ಆತ್ಮ, ದೇಹ ಎಲ್ಲವೂ ನನಗಿಷ್ಟ. ಆದರೆ ನಮ್ಮಿಬ್ಬರ ಮನಸ್ಸಿನ ಹಸಿವು ಮತ್ತೊಬ್ಬರಿಗೆ ನೋವುಂಟುಮಾಡುವ ಹಸಿವಾಗಿಬಿಟ್ಟರೆ ನನ್ನ, ಅವಳ, ಅವನ ಜೀವನದ ನೆಮ್ಮದಿ ಹಾಳಾಗುವುದು. ಒಪ್ತೀನಿ, ಅವಳನ್ನು ಸಂಪೂರ್ಣವಾಗಿ ಮರೆಯುವುದು ಅಸಾಧ್ಯ, ಮನಸ್ಸಿನ ಮೂಲೆ ಮೂಲೆಯಲ್ಲೂ ವ್ಯಾಪಿಸಿರುವ, ಆಳಕ್ಕೆ ಇಳಿದಿರುವ ಅವಳನ್ನು ಹೊರದಬ್ಬುವುದು ಕಷ್ಟದ ಕೆಲಸ ಮಾತ್ರವಲ್ಲ ಅಸಾಧ್ಯವೂ ಹೌದು. ಆದರದು ಸಾಧುವಾದ, ಅನಿವಾರ್ಯವಾದ ಕೆಲಸ. ಅವನಿಗೋಸ್ಕರ ನನಗೆ ಮತ್ತು ಅವಳಿಗೆ ನೋವಾಗುವುದಾದರೆ ಆಗಲಿ. ನಮ್ಮಿಬ್ಬರಿಗೂ ಆ ನೋವನ್ನು ತಡೆದುಕೊಳ್ಳುವ ಶಕ್ತಿಯಿದೆ ಎಂಬುದು ಉತ್ಪ್ರೇಕ್ಷೆಯ ಮಾತಾಗದಿರಲಿ ಎನ್ನುವುದೇ ನನ್ನ ಆಸೆ ಆಶಯ.

ಇಷ್ಟು ದಿನದ ಗೊಂದಲಗಳಿಗೆ ತೆರೆಬೀಳಿಸಲು ಇವತ್ತಿನಿಂದಾದರೂ ಕಾರ್ಯ ಶುರುವಾಗಲಿ. ಮನಸ್ಸಿನ ಹಸಿವು ನೀಗಿಸಿದ ಈ ನಾಲ್ಕು ತಿಂಗಳು ನಿಜಕ್ಕೂ ಮರೆಯಲಾಗದಂಥಹುದು. ಮನಸ್ಸಿನ ಹಸಿವನ್ನು ಮೀರಿ ನಿಲ್ಲುವುದು ಮೇಲ್ನೋಟಕ್ಕೆ ತ್ರಾಸದಾಯಕವೆಂಬ ಭಾವನೆ ಇದೆಯಾದರೂ ಜೀವನದ ವ್ಯಾಪ್ತಿ ಈ ಮನಸ್ಸಿನ ಹಸಿವು, ಪ್ರೀತಿ, ಪ್ರೇಮದಿಂದಾಚೆಗೂ ವ್ಯಾಪಿಸಿದೆ ಎಂಬ ಸತ್ಯ (ಕೊನೇಪಕ್ಷ ನನಗೆ ಅರಿವಾಗಿರುವ ಸತ್ಯ) ನನ್ನನ್ನು ಈ ಒಂದು ಹೆಸರಿಡದ, ಹೆಸರಿಡಲಾಗದ ನಿಷ್ಕಾಮ, ಶುದ್ಧ ಸಂಬಂಧದಿಂದ ಹೊರಬರಲು ಸಹಕರಿಸುತ್ತದೆಂಬ ನಂಬಿಕೆಯಿದೆ. Soulmate ಎಂಬ ಈ ಆತ್ಮದ ಗೆಳೆತನದಿಂದ ಹೊರಬರಲು ನನಗೆ ಅತ್ಯಗತ್ಯವಾಗಿ ಬೇಕಾಗಿರುವ ಶಕ್ತಿ ನನ್ನ ಮನಸ್ಸಿನಾಳದಿಂದ ಉದ್ಭವಿಸಿ ಆತ್ಮ ದೇಹ ಮನಸ್ಸಿನಲ್ಲೆಲ್ಲ ಸಂಚರಿಸಲೆಂದು ಆಶಿಸುತ್ತೇನೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜನ 3, 2019

ಅದೆಷ್ಟೋ ಸಲ !

ಪ್ರವೀಣಕುಮಾರ್ ಗೋಣಿ
ನಿಗಿ ನಿಗಿ ನಿಡುಸೊಯ್ಯುವ 
ಸಂಕಟಕ್ಕೆ ಮೌನವೊಂದೇ 
ಸಾಂತ್ವನದ ಸಾನಿಧ್ಯ 
ಕೊಡುವಾಗ ಮತ್ಯಾಕೆ 
ಬೇಕಾಗಿತು ಮಾತಿನಾ ಗೊಡವೆ ?

ಎದೆಯ ಹೊಲದ ಮೇಲೆ 
ನರಳಿಕೆಯ ಗರಿಕೆಯೇ
ಪೊಗಸ್ತಾಗಿ ಹಬ್ಬಿರಲು 
ಹರುಷದ ಹೂವರಳಿಸುವ 
ಕಾಯಕವದು ಅದೆಷ್ಟು ಯಾತನೆಯದು 
ಬಲ್ಲವರಷ್ಟೇ ಬಲ್ಲರು ! 

ಡಿಸೆಂ 25, 2018

ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ

ಪದ್ಮಜಾಜೋಯ್ಸ್ ದರಲಗೋಡು
ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ ಅಂದರೇ ಆಚಾರ ವಿಚಾರಗಳನ್ನು ದೂಷಿಸುವುದಲ್ಲ, ಸ಼ಂಪ್ರದಾಯದ ಸಂಕೋಲೆಯ ಧಿಕ್ಕಾರವಲ್ಲ, ಪದ್ಧತಿಗಳ ರದ್ಧತಿಯಲ್ಲ, ಉಡುಗೆ ತೊಡುಗೆಗಳ ಬದಲಾವಣೆಯೂ ಅಲ್ಲ, ರೀತಿನೀತಿಗಳ ಮಿತಿ ಮೀರುವುದೂ ಅಲ್ಲ ಸಾಂಸಾರಿಕ ಕೌಟುಂಬಿಕ ಚೌಕಟ್ಟುಗಳ ನಿರಾಕರಣೆಯೂ ಅಲ್ಲ.....

ಇಂದು ಆಧುನಿಕತೆ ಮಹಿಳೆಯರಿಗೂ ಅತ್ಯಗತ್ಯ , ಅದು ಸಕಾರಣವಾಗಿದ್ದಲ್ಲಿ ಹಾಗೂ ಸಂಧರ್ಭಗಳ ಸಮಯೋಚಿತತೆಯಲ್ಲಿ, ಅಂದರೇ ನಮ್ಮ ಆಲೋಚನೆಯಲ್ಲಿ ಆಧುನಿಕತೆ ಇರಲೀ ಆಚಾರ ವಿಚಾರಗಳ ನಿರಾಕರಣೆಯಲ್ಲಲ್ಲ....

ಇಂದು ಮಹಿಳೆಯೊಬ್ಬಳು ಮೌಢ್ಯವನ್ನು ಮೀರಿ ಹೊಸ್ತಿಲಾಚೆ ಕಾಲಿಟ್ಟು ಶಿಕ್ಷಣದ ವಿಚಾರಪರತೆಯ ಜ್ಞಾನದ ವಿಜ್ಞಾನದ ಬೆನ್ನೇರಿ

ಭಾಗಶಃ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರ ಮೀರಿ ಯಶೋಗಾಥೆ ಹಾಡುವಂತಹ ಆಧುನಿಕತೆಯ ಅಳವಡಿಕೆಯಲ್ಲಿ ಮಹಿಳೆಯ ಪಾತ್ರ ಅಮೋಘವಾಗಿದೆ,

ಈ ಮೊದಲು ಮಹಿಳೆಯ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿತ್ತು, ಮಕ್ಕಳನ್ನು ಹೆರುವುದು ಅವುಗಳ ಲಾಲನೆ ಪಾಲನೆ, ಕುಟುಂಬ ನಿರ್ವಹಣೆ, ಮಾತ್ರ ಅವಳ ಕೆಲಸವಾಗಿತ್ತು, ಈಗ ಕಾಲ ಬದಲಾಗುತ್ತಿದೆ ಮಹಿಳೆಯರ ಅರಿವಿನ ಪರಿ ವಿಸ್ತರಿಸುತ್ತಿದೆ, ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದಾಳೆ. ಅವಳ ಈ ಸಾಧನೆಗೆ ಸಹಾಯಕವಾದ ಶಿಕ್ಷಣ ಮಾಧ್ಯಮಗಳಿಗೆ ಧನ್ಯವಾಧ ಅರ್ಪಿಸಬೇಕಿದೆ,

ಡಿಸೆಂ 24, 2018

ಅಲ್ಲಿಯವರೆಗು ಕಾಯುತ್ತ!

ಕು.ಸ.ಮಧುಸೂದ ನರಂಗೇನಹಳ್ಳಿ 
ರೆಕ್ಕೆ ಬಿಚ್ಚಿ ಹಗಲು 
ಹಾರಲಾಗದೆ ಕೂತಲ್ಲೇ ಬೇರುಬಿಟ್ಟ ಬೆಟ್ಟ 
ಕನಸೇನಲ್ಲ ಕಣ್ಣ ಮುಂದಿನ ನೋಟ 
ಉಕ್ಕುವ ಯೌವನದ ಬೆಂಕಿ ಕಾವು 
ಸರಿದ ಇರುಳುಗಳ ನೆರಳುಗಳ 
ನಟ್ಟ ನಡುವೆ ಸರಳುಗಳ ಸರಸದಾಟ 
ಎದೆಯುಬ್ಬಿಸಿ ನಿಂತ ದ್ವಾರಪಾಲಕರ ಭರ್ಜಿಗಳ 
ಚೂಪಿಗೆ ಎದೆಯೊಡ್ಡಿ ನಿಂತ ಹರಯದ ಹುರುಪು 
ಮಟಾಮಾಯ 
ಇವನ ಕಡುಕಪ್ಪು ಕಬ್ಬಿಣದಂತ ತೋಳುಗಳಿಗೆ ಕಾದವಳು 
ಕರಗಿದಂತೆ ಕಾಲ 
ಜರುಗಿದಂತೆ ಗಡಿಯಾರದ ಮುರಿದ ಮುಳ್ಳು 
ಕುಂತಲ್ಲೇ ಒದ್ದೆಯಾದಳು

ಕಂಡೆ ನೋಡ !?

ಪ್ರವೀಣಕುಮಾರ್ ಗೋಣಿ
ನಿನಗೆ ಶರಣಾಗುವಿಕೆಯ 
ಹೊರತು ಮಿಕ್ಕೆಲ್ಲವೂ 
ವ್ಯರ್ಥವೆನಿಸುವ ವೇಳೆ 
ಮಾಯೆ ಅಳಿದು ನಿಂತಿತ್ತು ನೋಡ .

ವಾಸನೆಗಳ ತಾಳಕ್ಕೆ 
ತಕ ತಕನೇ ಕುಣಿದು 
ಮೈಮನಗಳು ದಣಿದಾಗ 
ನಿನ್ನ ಅನುಭಾವವೊಂದೇ ಚಿರವೆನ್ನುವ 
ಅರಿವು ಅರಳಿ ನಿಂತಿತ್ತು ನೋಡ . 

ಡಿಸೆಂ 18, 2018

ರಾಜಾಸ್ಥಾನ ಬಾಜಪ ಸೋಲಿಗೆ ಕಾರಣವಾದ ಆಡಳಿತ ವೈಖರಿ!

ಚಿತ್ರಮೂಲ: election commission of India
ಕು.ಸ.ಮಧುಸೂದನ ರಂಗೇನಹಳ್ಳಿ
ಕಳೆದ ಐದು ವರ್ಷಗಳಿಂದ ರಾಜಾಸ್ಥಾನದಲ್ಲಿ ಆಡಳಿತ ನಡೆಸುತ್ತಿದ್ದ ಬಾಜಪದ ಶ್ರೀಮತಿ ವಸುಂದರಾ ರಾಜೆಯವರ ಸರಕಾರ ಈ ಬಾರಿ ಚುನಾವಣೆಯಲ್ಲಿ ಸೋತು ಕಾಂಗ್ರೆಸ್ಸಿಗೆ ಅಧಿಕಾರ ವಹಿಸಿಕೊಟ್ಟಿದೆ. ಚುನಾವಣೆಗಳಿಗು ಮೊದಲು ಬಿಡುಗಡೆಯಾದ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಮತದಾನದ ಸಂಜೆ ದೊರೆತ ಎಕ್ಸಿಟ್ ಪೋಲ್ ಸಹ ಬಾಜಪ ಸರಕಾರದ ಸೋಲನ್ನು ಖಚಿತ ಪಡಿಸಿದ್ದವು.

ಎಲ್ಲರೂ ಬಾಜಪ ಸೋಲಬಹುದೆಂದೇನೊ ನುಡಿದಿದ್ದರೂ ಅದು ಈ ಮಟ್ಟಿಗೆ ಸೋಲುತ್ತದೆಯೆಂಬ ನಿರೀಕ್ಷೆ ಇರಲಿಲ್ಲ. ಯಾಕೆಂದರೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟ 200 ಸ್ಥಾನಗಳ ಪೈಕಿ 163 ರಲ್ಲಿ ಬಾಜಪ ಗೆದ್ದಿದ್ದರೆ, ಕಾಂಗ್ರೆಸ್ 21 ರಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿತ್ತು. ಹೆಚ್ಚೂ ಕಡಿಮೆ ಅಂದು ಪ್ರದಾನಮಂತ್ರಿ ಅಭ್ಯರ್ಥಿಯಾಗಿದ್ದ ಶ್ರೀ ನರೇಂದ್ರ ಮೋದಿಯವರ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿತ್ತು. ಅಷ್ಟು ಬಲಿಷ್ಠವಾಗಿ ಹೊರಹೊಮ್ಮಿದ್ದ ಬಾಜಪ ಇವತ್ತು ಕೇವಲ ಐದೇ ವರ್ಷಗಳಲ್ಲಿ ಕಾಂಗ್ರೆಸ್ಸಿನೆದುರು ಮಂಡಿಯೂರಿದೆ. ಈ ಬಾರಿ ಚುನಾವಣೆ ನಡೆದ 199ಕ್ಷೇತ್ರಗಳ ಪೈಕಿ ಕಾಂಗ್ರೆಸ್ 99 ಸ್ಥಾನವನ್ನು, ಬಾಜಪ 73 ಸ್ಥಾನಗಳನ್ನು ಗೆದ್ದಿವೆ. ಇನ್ನು ಯಥಾ ಪ್ರಕಾರ ಇಲ್ಲಿ ಅಷ್ಟೇನು ಪ್ರಭಾವಶಾಲಿಯಲ್ಲದ ಬಹುಜನ ಪಕ್ಷ 6 ಸ್ಥಾನಗಳನ್ನೂ ಪಡೆದಿದೆ. ಇರಲಿ ಈಗ ನಾವು ರಾಜಾಸ್ಥಾನದಲ್ಲಿನ ಬಾಜಪ ಸೋಲಿಗೆ ಕಾರಣವಾದ ಅಂಶಗಳನ್ನು ನೋಡೋಣ:

ಅವಳ ನೆನಪಿನಲ್ಲಿ.


ಡಾ. ಅಶೋಕ್. ಕೆ. ಆರ್. 
ಒಂದ್ ಹುಡ್ಗೀನ್ ಇಷ್ಟ ಪಟ್ಟು ಧೈರ್ಯ ತಕಂಡ್ ಪ್ರಪೋಸು ಮಾಡಿ ಅಪ್ಪಿ ತಪ್ಪಿ ಅವಳು ಒಪ್ಪೂ ಬಿಟ್ಟು 'ಶುಭಂ' ಅಂತೊಂದ್ ಬೋರ್ಡು ಹಾಕೊಳ್ಳೋದಕ್ಕಿಂತ ಗ್ಯಾಪ್ ಗ್ಯಾಪಲ್ಲಿ ಒಂದೊಂದ್ ಹುಡ್ಗಿ ಜೊತೆ ಒನ್ ವೇ ಲವ್ವಲ್ ಬಿದ್ದು ನಾಕೈದು ವರ್ಷಕ್ಕೊಂದ್ಸಲ ಹಳೇ ಗಾಯ ಕೆರ್ಕಂಡ್ ಕೂರೋದ್ ಚೆಂದ್ವೋ ಏನೋಪ! 

ಮೊನ್ಮೊನ್ನೆ ನಮ್ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಇಮಿಡೀಯಟ್ ಸೀನಿಯರ್ಸು ಗೆಟ್ ಟುಗೆದರ್ ಮಾಡ್ಕಂಡಿದ್ ಫೋಟೋಗಳನ್ನ ಹಾಕಂಡಿದ್ರು ಎಫ್.ಬೀಲಿ. ಅದರಲ್ಲಿದ್ದ ಗ್ರೂಪ್ ಫೋಟೋನ ತಟಕ್ಕಂತ ಝೂಮ್ ಮಾಡಿದ್ದು ಅವಳ ನೋಡುವ ನೆಪದಿಂದ! ಆರೇಳು ವರ್ಷ ಆಗಿತ್ತಾಂತ ಅವಳ ಮುಖ ನೋಡಿ?! 

ಹೆಚ್ಚು ಕಡಿಮೆ ಹದಿನೇಳು ವರುಷದ ಹಿಂದಿನ ನೆನಪುಗಳು. ನಮ್ ಕಾಲೇಜ್ ಶುರುವಾಗಿ ಮೊದಲ ಇಂಟರ್ನಲ್ಸ್ ಮುಗಿಯುವ ಸುಮಾರಿಗೆ ನಮ್ ಇಮಿಡೀಯಟ್ ಸೀನಿಯರ್ಸುಗಳ ರಿಸಲ್ಟ್ ಬಂದಿತ್ತು. ಊರಿಗೋಗಿದ್ದ ಸೀನಿಯರ್ಸ್ ಎಲ್ಲಾ ಕಾಲೇಜಿಗೆ ವಾಪಸ್ಸಾದ್ರು. ಎರಡನೇ ವರ್ಷದ ಶುರುವಿನಲ್ಲಿ ಓದಿ ದಬಾಕೋಕು ಏನೂ ಇರೋಲ್ಲ. ಜೊತೆಗೆ ಮೆಡಿಕಲ್ನಲ್ಲಿ ಮೊದಲ ವರ್ಷ ಪಾಸಾದ್ರೆ ಡಾಕ್ಟರಾಗಿಬಿಟ್ಟ ಫೀಲಿಂಗ್ ತಲೇಲ್ ಇರ್ತದೆ! ಸೀನಿಯರ್ಸ್ ಎಲ್ಲಾ ಗುಂಪು ಗುಂಪಾಗಿ ಲೈಬ್ರರಿಗೆ ಬಂದು ಕೂರೋರು. ಜೂನಿಯರ್ಸ್ ಯಾರ್ನಾದ್ರೂ ಕರುಸ್ಕಂಡು ಅದೂ ಇದೂ ತರ್ಲೆ ಪ್ರಶ್ನೆ ಕೇಳ್ತಾ ಮಜಾ ತಗೊಳ್ಳೋರು. ಆಗಲೇ ಅವಳು ಕಂಡಿದ್ದು. 

ಡಿಸೆಂ 16, 2018

ಹನಿ....

ಪಮ್ಮೀ ಫೀನಿಕ್ಸ್
ಮುಂಗಾರು ಮೆಲ್ಲ ಮೆಲ್ಲನೇ ಆವರಿಸುತ್ತಾ ಇಳೆಯನೆಲ್ಲಾ ಆವರಿಸತೊಡಗಿದಾಗ ಮಸ್ತಿಷ್ಕದಲಿ ಘನೀಭವಿಸಿದ ನೆನಪುಗಳು ನಿಧಾನವಾಗಿ ಕರಗುತ್ತಾ ಹನಿಹನಿ ಧಾರೆಯಾಗಿ ಮೈಮನದ ತುಂಬಾ ಆವರಿಸಿಕೊಳ್ಳುತ್ತದೆ.....

ನಿನ್ನಂತೆಯೇ ಈ ಮಳೆಯೂ ಸುರಿದರೆ ಇಡಿಯಾಗಿ ಕವಿದುಕೊಳ್ಳುವುದು. ಹೆಪ್ಪುಗಟ್ಟಿದ ವಿಶಾದದ ತೆರೆ ಹರಿದು ಕಚಗುಳಿಯಿಡುತ್ತಾ ನೀ ಎದೆಯಂಗಳಕ್ಕೆ ಹೆಜ್ಜೆಯಿಡುವಾಗ ನಿನಗೆ ಸ್ವಾಗತಿಸಲೆಂದೇ ಉದುರುವ ಜಾಜಿಮೊಲ್ಲೆ ತನ್ನ ಘಮದೊಂದಿಗೆ ನಿನ್ನಾಗಮನದ ಸೂಚನೆ ತಲುಪಿಸುವುದು

ಡಿಸೆಂ 14, 2018

ನೀ ಎನಗೆ !


ಪ್ರವೀಣಕುಮಾರ್ ಗೋಣಿ

ಅಕಾರಣ ಹನಿವ 
ಕಣ್ಣ ಹನಿಗಳೊಳಗೆ 
ನಿನ್ನ ಸಾಂತ್ವನದ 
ಬಿಸಿ ಮತ್ತೆ ಹೃದಯವನ್ನ ಅರಳಿಸುವುದೋ !

ಬೇಡಿಕೆಗಳ ಹೊರೆಯೆಲ್ಲ 
ಹೊತ್ತು ನಿನ್ನೆಡೆ ನಡೆದೆ ನಿಜ ,
ನೀ ಎದುರಾಗುತ್ತಲೇ 
ಬಯಕೆಗಳ ಹೊರೆಯೇ 
ಕರಗಿ ಮತ್ತೆ ಹಗುರಾದೆನೋ ನಾನು !