ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಗೆರಿಲ್ಲಾ ಯುದ್ಧದ ಒಂದು ಪ್ರಮುಖ ಲಕ್ಷಣವೆಂದರೆ ನಿರ್ಣಾಯಕ ಯುದ್ಧಗಳಿಂದ ತಪ್ಪಿಸಿಕೊಳ್ಳುವುದು. ಪಾಳೇಗಾರ ಮುಖಂಡತ್ವವು ಹೆಚ್ಚಿದ್ದ ಮತ್ತು ಕೋಟೆ ಯುದ್ಧದ ನೆನಹುಗಳು ಸಶಕ್ತವಾಗಿದ್ದ ಕೆಲವು ಸಂದರ್ಭಗಳನ್ನು ಹೊರತುಪಡಿಸಿದರೆ, ಬಂಡಾಯಗಾರರು ಸುದೀರ್ಘ ಯುದ್ಧದಿಂದ ಸಾಮಾನ್ಯವಾಗಿ ದೂರವಿರುತ್ತಿದ್ದರು ಮತ್ತು ಶತ್ರುಗಳು ಸುತ್ತುವರಿಯಬಹುದು ಎನ್ನಿಸಿದಾಗ ಶೀಘ್ರವಾಗಿ ಹಿಮ್ಮೆಟ್ಟುತ್ತಿದ್ದರು. ಯುದ್ಧದಲ್ಲಿ ತೊಡಗಿದ್ದ ಬ್ರಿಟೀಷ್ ಅಧಿಕಾರಿಗಳ ವರದಿಗಳಲ್ಲಿ ಬಂಡಾಯಗಾರರು “ಚದುರಿದ” ಬಗ್ಗೆ ಹೆಚ್ಚು ಪ್ರಸ್ತಾಪವಿದೆಯೇ ಹೊರತು ಬಂಡಾಯಗಾರರ ಸಾವಿನ ಬಗ್ಗೆಯಲ್ಲ.