ಮೂಲಭೂತವಾದ ಹಾಗೂ ಬಂಡವಾಳವಾದ ಈ ಎರಡೂ ಸಾಹಿತ್ಯ-ಸಂಸ್ಕೃತಿಗಳ ಮುಖವಾಡ ತೊಟ್ಟು ಜನಪರವೆಂದು ತಮ್ಮನ್ನು ಬಿಂಬಿಸಿಕೊಳ್ಳುತ್ತ, ತಮ್ಮ ಕಾರ್ಯಯೋಜನೆಗಳಿಗೆ ಮನ್ನಣೆ ಪಡೆಯಲು ಪೈಪೋಟಿ ನಡೆಸುತ್ತಿವೆ. ಜನಸಾಮಾನ್ಯರ ದೈನಂದಿನ ಬದುಕಿನೊಳಗೂ ಮಾರುಕಟ್ಟೆ ಮತ್ತು ಧಾರ್ಮಿಕ ಹಿತಾಸಕ್ತಿ ಅನಾರೋಗ್ಯಕರ ಸ್ಪರ್ಧೆ ಹಾಗೂ ಅಸಹನೆ ಹುಟ್ಟುಹಾಕುತ್ತಿವೆ. ಇವುಗಳ ಮುಖವಾಡವನ್ನು ಗುರುತಿಸದವರು ಸನ್ನಿವೇಶದ ಸನ್ನಿಗೆ ಒಳಗಾದಂತೆ ಮಾರುಹೋಗುತ್ತಿದ್ದಾರೆ, ಈ ವರ್ತುಲದ ಸಹಭಾಗಿಗಳಾಗುತ್ತಿದ್ದಾರೆ. ಇದು ಯುವ ಪೀಳಿಗೆಯನ್ನು ಗೊಂದಲಗೊಳಿಸಿ ದಿಕ್ಕು ತಪ್ಪಿಸುವ ಅಪಾಯ ದಟ್ಟವಾಗಿದೆ.
ಡಿಸೆಂ 5, 2016
ನೋಟು ನಿಷೇಧದಿಂದ ಭ್ರಷ್ಟಾಚಾರ ನಿಗ್ರಹ ಅಸಾದ್ಯ: ಸುಧಾರಣೆಯಾಗಬೇಕಿರುವ ಚುನಾವಣಾ ವ್ಯವಸ್ಥೆ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನವೆಂಬರ್ ಎಂಟನೇ ತಾರೀಖಿನ ರಾತ್ರಿ ದೊಡ್ಡ ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ್ದಕ್ಕೆ ಕಾರಣಗಳನ್ನು ನೀಡುತ್ತ ಹೇಳಿದ ಬಹುಮುಖ್ಯ ಮಾತುಗಳೆಂದರೆ, ಈ ನಿಷೇಧದಿಂದ ಕಪ್ಪಹಣದ ಹಾವಳಿ ಇಲ್ಲವಾಗುತ್ತದೆ ಮತ್ತು ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂಬುದಾಗಿತ್ತು. ಈ ಮಾತುಗಳನ್ನು ಕೇಳಿಸಿಕೊಂಡ ಜನತೆಗೆ ತಕ್ಷಣಕ್ಕೆ ಇದು ನಿಜವೆನಿಸಿ ಮೋದಿಯವರ ಬಗ್ಗೆ ಮೆಚ್ಚುಗೆ ಮೂಡಿದ್ದು ಸುಳ್ಳಲ್ಲ. ಹಾಗಾಗಿಯೇ ಆರಂಭದಲ್ಲಿ ವಿರೋಧಪಕ್ಷಗಳು ಸಹ ಈ ನಿಷೇಧವನ್ನು ವಿರೋಧಿಸಲು ಹಿಂದೆ ಮುಂದೆ ನೋಡುವಂತಾಯಿತು.
ಡಿಸೆಂ 2, 2016
ಮೇಕಿಂಗ್ ಹಿಸ್ಟರಿ: ಯುದ್ಧದ ಸ್ವಭಾವ
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಶತ್ರುವಿನ ಲೆಕ್ಕದಲ್ಲಿ ಸೈನಿಕ ಕಾರ್ಯಾಚರಣೆಯು ತುಂಬ ಅಸಹ್ಯಕರ ರೀತಿಯಲ್ಲಿ ಶುರುವಾಗಿತ್ತು, ಮೈಸೂರು ಪಡೆಗಳನ್ನು ಸುತ್ತುವರೆಯಲಾಗಿತ್ತು, ಹೊಡೆದು ಬಡಿದು ಕಿರುಕುಳ ಕೊಡಲಾಗಿತ್ತು ಮತ್ತು ಪ್ರಥಮ ಆಕ್ರಮಣದಲ್ಲಿಯೇ ದೂರಕ್ಕಟ್ಟಲಾಗಿತ್ತು. ಕೆಲವು ನೂರರಷ್ಟಿದ್ದ ಪಡೆಗಳು ಅಣ್ಣಪ್ಪನ ನೇತೃತ್ವದಲ್ಲಿ ತರೀಕೆರೆಯನ್ನು ವಶಪಡಿಸಿಕೊಂಡು ಕ್ಯಾಂಪು ಹಾಕಿದ್ದರು. ಗೆರಿಲ್ಲಾ ಪಡೆಗಳು, ಕೋಟೆಯನ್ನು ಸುತ್ತುವರಿದವು ಮತ್ತು ದಾಳಿಗಳನ್ನು ಪದೇ ಪದೇ ನಡೆಸಿದರು, ಹಲವಾರು ಸೈನಿಕರನ್ನು ಸಾಯಿಸಿದರು. “ಕೋಟೆಗಿದ್ದ ಎಲ್ಲಾ ರಸ್ತೆಗಳನ್ನೂ ಆಕ್ರಮಿಸಿಕೊಂಡಿದ್ದರಿಂದ ಕೋಟೆಯಲ್ಲಿದ್ದ ಮೈಸೂರು ಪಡೆಗಳಿಗೆ ಸಾಮಗ್ರಿಗಳು ಸಿಗುವುದು ಕಡಿಮೆಯಾಗಿಬಿಟ್ಟಿತು. ಟಪಾಲುಗಳಿಗೆ ತಡೆಯೊಡ್ಡಲಾಯಿತು ಮತ್ತು ಧಾನ್ಯ ಹಾಗೂ ಹಣದ ಪೂರೈಕೆಯನ್ನು ಕತ್ತರಿಸಿ ಹಾಕಲಾಯಿತು”. (129)
ನವೆಂ 28, 2016
ಪಂಜಾಬ್ ವಿದಾನಸಭಾ ಚುನಾವಣೆ: ಪ್ರಯಾಸ ಪಡಬೇಕಿರುವ ಬಾಜಪ-ಅಕಾಲಿದಳ ಮೈತ್ರಿಕೂಟ!
ಕು.ಸ.ಮಧುಸೂದನ
ಉತ್ತರಪ್ರದೇಶದಲ್ಲಿನ 2017ರ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಾಜಪ ಇದೀಗ ತಾನು ಶಿರೋಮಣಿ ಅಕಾಲಿದಳದೊಂದಿಗೆ ಮೈತ್ರಿಮಾಡಿಕೊಂಡು ಆಡಳಿತ ನಡೆಸುತ್ತಿರುವ ಪಂಜಾಬ್ ರಾಜ್ಯವನ್ನು ಉಳಿಸಿಕೊಳ್ಳಬೇಕಾದ ಸಂಕಷ್ಟಕ್ಕೆ ಸಿಲುಕಿದೆ. ಸತತವಾಗಿ ಎರಡು ಅವಧಿಗೆ ಅಧಿಕಾರ ನಡೆಸಿರುವ ಬಾಜಪ ಮೈತ್ರಿಕೂಟಕ್ಕೆ ಈ ಬಾರಿಯ ಚುನಾವಣೆ ನಿಜಕ್ಕೂ ಕಷ್ಟಕರವಾಗಲಿದೆ. ಇದಕ್ಕಿರಬಹುದಾದ ಕಾರಣಗಳನ್ನು ನೋಡೋಣ:
ಮೊದಲನೆಯದಾಗಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದರ ಪರಿಣಾಮವಾಗಿ ಅದು ಸಹಜವಾಗಿಯೇ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿದೆ. ಎರಡನೆಯದಾಗಿ ಮೊದಲಿಂದಲೂ ಇದ್ದ ಮಾದಕದ್ರವ್ಯಗಳ ಮಾಫಿಯಾ ಹೆಚ್ಚಾಗಿದ್ದು, ಇದರಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರೂ ಷಾಮೀಲಾಗಿದ್ದಾರೆಂಬ ಆರೋಪವನ್ನು ವಿರೋಧ ಪಕ್ಷಗಳು ಸತತವಾಗಿ ಮಾಡುತ್ತಲೇ ಬಂದಿದ್ದಾರೆ.
ನವೆಂ 25, 2016
ಮೇಕಿಂಗ್ ಹಿಸ್ಟರಿ: ಊಳಿಗಮಾನ್ಯತೆಗೆ ಹೊಡೆತಗಳು ಬಿದ್ದಾಗ
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಊಳಿಗಮಾನ್ಯತೆಯನ್ನು ಎರಡು ರೀತಿಯಿಂದ ಗುರಿಯಾಗಿಸಲಾಗಿತ್ತು. ಒಂದನ್ನು ಸುಲಭವಾಗಿ ಗುರುತಿಸಬಹುದಿತ್ತು. ಊಳಿಗಮಾನ್ಯ ವರ್ಗಗಳ ಮೇಲೆ ಸತತವಾಗಿ ನಡೆದ ದಾಳಿಯದು. ಎರಡನೆಯ ರೀತಿ ಸೂಕ್ಷ್ಮವಾಗಿತ್ತು ಮತ್ತು ಅದು ಒಂದು ಸಂದರ್ಭದಲ್ಲಿ ತುಂಬಾ ಖಚಿತವಾಗಿ ತೋರಿಸಿಕೊಂಡಿತಾದರೂ ಅದರ ಬಗ್ಗೆ ನಮ್ಮಲ್ಲಿ ತುಂಬಾ ಸಾಕ್ಷ್ಯಗಳಿಲ್ಲ. ಈ ಎರಡನೆಯ ಅಂಶವನ್ನು ಮೊದಲು ಪರೀಕ್ಷಿಸೋಣ.
ಸಂಗೊಳ್ಳಿ ರಾಯಣ್ಣ ಪರಿಚಯಿಸಿದ ರೀತಿಯಲ್ಲಿಯೇ, ಹೊಸಂತೆಯಲ್ಲಿ ನಡೆದ ರೈತ ರ್ಯಾಲಿಯಲ್ಲಿ, ಎಲ್ಲಾ ರೈತರು, ತಮ್ಮ ನಡುವಿನ ಜಾತಿ ಭೇದದ ನಡುವೆಯೂ ಸಹಭೋಜನ ನಡೆಸಿದ್ದರು. (120) ವ್ಯಾಪಕ ಜನ ಸಮೂಹ ಜೊತೆಯಾದಾಗ, ಊಳಿಗಮಾನ್ಯತೆ ವಿಧಿಸಿದ್ದ ಕಟ್ಟಳೆಗಳಲ್ಲಿ ಸಂಪೂರ್ಣ ವಿರುದ್ಧ ದಿಕ್ಕಿನ ಮೌಲ್ಯಗಳು ಮತ್ತು ಗ್ರಹಿಕೆಗಳೊಡನೆ ಜೊತೆಯಾಗುತ್ತಿತ್ತು. ಈ ಹೊಸ ಪರಂಪರೆಯು, ದಮನಿತರ ನಡುವಿನ ಒಗ್ಗಟ್ಟನ್ನು ದೃಡಗೊಳಿಸುತ್ತಿತ್ತು ಮತ್ತು ಮೇಲ್ಜಾತಿಯ ಊಳಿಗಮಾನ್ಯ ಮನಸ್ಥಿತಿಯ ವಿರುದ್ಧ ಬಹಿರಂಗವಾಗಿ ದೃಢವಾಗಿ ದಾಳಿ ನಡೆಸುವಂತೆ ಮಾಡುತ್ತಿತ್ತು.
ನವೆಂ 23, 2016
ಬಾಜಪಕ್ಕೆ ಎದುರಾಗಿರುವ ಅಗ್ನಿಪರೀಕ್ಷೆ: ಗೋವಾ ವಿದಾನಸಭಾ ಚುನಾವಣೆ.
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದುವರೆಗಿನ ರಾಷ್ಟ್ರ ರಾಜಕಾರಣದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಪಡೆಯದ ಗೋವಾ ರಾಜ್ಯದ ವಿದಾನಸಭಾ ಚುನಾವಣೆಗಳು ಮುಂದಿನ ವರ್ಷದ ಮೊದಲಭಾಗದಲ್ಲಿ ನಡೆಯಲಿವೆ. ಮೂರು ಕಾರಣಗಳಿಗಾಗಿ ಈ ಚುನಾವಣೆಗಳು ಮೊದಲಬಾರಿಗೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಮಹತ್ವ ಪಡೆಯಲಾರಂಬಿಸಿವೆ. ಈ ಮೂರು ಕಾರಣಗಳನ್ನು ತಿಳಿದು, ಸದ್ಯದ ಅಲ್ಲಿನ ರಾಜಕೀಯ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುವ ಮುಂಚೆ ಗೋವಾದ ರಾಜಕೀಯ ಹಿನ್ನೆಲೆಯನ್ನು ಒಮದಿಷ್ಟು ಅವಲೋಕಿಸೋಣ:
1985ರವರೆಗು ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ, ನಂತರದಲ್ಲಿ ಪೂರ್ಣಪ್ರಮಾಣದ ರಾಜ್ಯ ಸ್ಥಾನಮಾನ ಪಡೆದು 40 ಸ್ಥಾನಗಳ ವಿದಾನಸಭೆ ರಚನೆಯಾಯಿತು. ಅಲ್ಲಿಯವರೆಗು ಶಕ್ತಿಶಾಲಿಯಾಗಿಯು, ಪ್ರಬಾವಶಾಲಿಯೂ ಆಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ನಂತರದ ದಿನಗಳಲ್ಲಿ ನಿದಾನವಾಗಿ ನೇಪಥ್ಯಕ್ಕೆ ಸರಿಯುತ್ತ ಕಾಂಗ್ರೆಸ್ ಮತ್ತು ಬಾಜಪಗಳು ಬೆಳೆಯುವಂತಾಯಿತು.
ನವೆಂ 21, 2016
ಜಾತಿಗಣತಿಯ ವರದಿ ಬಹಿರಂಗ ಪಡಿಸದ ಸರಕಾರ: ಮೇಲ್ವರ್ಗಗಳ ಒತ್ತಡಕ್ಕೆ ಮಣಿದರೇ ಮುಖ್ಯಮಂತ್ರಿಗಳು?
ಸಾಂದರ್ಭಿಕ ಚಿತ್ರ: ಬ್ಯುಸಿನೆಸ್ ಲೈನ್ |
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಚುನಾವಣೆಗಳಿಗೂ ಮುಂಚೆ ಹೇಳಿದಂತೆಯೇ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗಣತಿಯನ್ನು ( ಇನ್ನೊಂದು ಅರ್ಥದಲ್ಲಿ ಜಾತಿಗಣತಿ), ಮೇಲ್ವರ್ಗಗಳ ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಾಡಿ ಮುಗಿಸಿದರು. ಇವತ್ತು ನಾವೇನೇ ಜಾತಿವಿನಾಶದ ಆದರ್ಶದ ಮಾತುಗಳನ್ನು ಆಡಿದರೂ ಜಾತಿ ಎನ್ನುವುದು ಈ ದೇಶದ ಕಟುವಾಸ್ತವ ಎಂಬುದನ್ನು ಮರೆಯಬಾರದು. ಈ ಗಣತಿ ಕಾರ್ಯವನ್ನು ವಿರೋಧಿಸಿದವರೆಲ್ಲ ಜಾತಿಪದ್ದತಿಯ ಪೋಷಕರೇ ಆಗಿದ್ದುದು ಮತ್ತು ಅಂತಹ ಮೇಲ್ವರ್ಗಗಳ ಬೆಂಬಲ ಪಡೆದ ರಾಜಕೀಯ ಪಕ್ಷಗಳೇ ಆಗಿದ್ದವು. ಸರಕಾರದ ಒಳಗೇ ಇರುವ ಹಲವು ಮೇಲ್ವರ್ಗಗಳ ನಾಯಕರುಗಳೇ ಈ ಜಾತಿ ಗಣತಿಯನ್ನು ಆಂತರಿಕವಾಗಿ ವಿರೋಧಿಸಿದ್ದರು. ಇಷ್ಟಲ್ಲದೆ ಮೇಲ್ವರ್ಗಗಳ ಹಿಡಿತದಲ್ಲಿರುವ ನಮ್ಮ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಸಹ ಈ ಜಾತಿ ಗಣತಿಯನ್ನು ವಿಡಂಬನೆ ಮಾಡುತ್ತ, ಪರೋಕ್ಷವಾಗಿ ತಮ್ಮ ಅಸಮಾದಾನವನ್ನೂ ವ್ತಕ್ತ ಪಡಿಸಿದ್ದವು. ಆದರೆ ಯಥಾ ಪ್ರಕಾರ ತಮ್ಮ ನಿಲುವನ್ನು ಸಡಿಲಿಸದ ಮುಖ್ಯಮಂತ್ರಿಗಳು ಗಣತಿ ಕಾರ್ಯ ಮುಗಿಯುವಂತೆ ನೋಡಿಕೊಂಡರು, ಸ್ವಾತಂತ್ರ ಪೂರ್ವದಲ್ಲಿ ಅಂದರೆ ಬ್ರಿಟೀಷರ ಆಳ್ವಿಕೆಯಲ್ಲಿ 1931ನೇ ಇಸವಿಯಲ್ಲಿ ನಡೆದ ಜಾತಿಗಣತಿಯ ನಂತರ ಇದುವರೆಗು ಇಂಡಿಯಾದ ಯಾವ ರಾಜ್ಯದಲ್ಲು ಇಂತಹ ಗಣತಿಕಾರ್ಯ ನಡೆದಿರಲಿಲ್ಲ.
ನವೆಂ 18, 2016
ಅನಾಣ್ಯೀಕರಣ ಮತ್ತು ರಾಜಕೀಯ ಲಾಭ!
ಕು.ಸ.ಮದುಸೂದನನಾಯರ್ ರಂಗೇನಹಳ್ಳಿ
ದಿನಾಂಕ 9-11-2016ರ ಬುದವಾರ ತಡಸಂಜೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ಅನಾಣ್ಯೀಕರಣದ(ಡಿಮೊನೈಟೇಷನ್) ನಿರ್ದಾರವನ್ನು ಪ್ರಕಟಿಸಿದ ಕೂಡಲೆ ಇಡೀ ರಾಷ್ಟ್ರ ಒಮ್ಮೆಲೇ ಬೆಚ್ಚಿ ಬಿದ್ದಿತ್ತು. ಊಟ ಮಾಡುತ್ತ ಅಥವಾ ಊಟ ಮುಗಿಸಿ ವಾಹಿನಿಗಳಲ್ಲಿ ಸುದ್ದಿ ನೋಡುತ್ತ(ಕೇಳತ್ತ) ಕೂತಿದ್ದ ಜನತೆ ಆತಂಕಕ್ಕೀಡಾಗಿದ್ದು ಸುಳ್ಳಲ್ಲ. ಅನಾಣ್ಯೀಕರಣದ ಬಗ್ಗೆ ಹೆಚ್ಚೆನು ಮಾಹಿತಿ ಇರದ ಜನತೆಗೆ ಇದರ ಹಿಂದಿನ ಉದ್ದೇಶ ಮತ್ತು ಸಾಧಕಬಾದಕಗಳನ್ನು ಅರ್ಥಮಾಡಿಕೊಳ್ಳಲು ಸುಮಾರು ಮೂರು ದಿನ ಬೇಕಾಗಿತ್ತು. ಸುದ್ದಿವಾಹಿನಿಗಳನ್ನು ನೋಡಿದವರು, ವೃತ್ತಪತ್ರಿಕೆಗಳನ್ನು ಓದಿದವರು ಒಂದಷ್ಟು ಅರ್ಥಮಾಡಿಕೊಂಡರೂ, ಬಹಳಷ್ಟು ಜನ ಅವಿದ್ಯಾವಂತರಿಗೆ ಈ ನಡೆಯನ್ನು ಅರಿತುಕೊಳ್ಳಲು ಕಷ್ಟವಾಗಿದ್ದು ನಿಜ. ಅನಾಣ್ಯೀಕರಣವೆಂದರೆ ಜಾಸ್ತಿ ಮುಖಬೆಲೆಯ ಅಂದರೆ ಐನೂರು ಮತ್ತು ಸಾವಿರದ ನೋಟುಗಳನ್ನು ಸರಕಾರ ಹಿಂದಿರುಗಿ ಪಡೆದು ಅವುಗಳ ಬದಲಿಗೆ ಅದೇ ಮೌಲ್ಯದ ಕಡಿಮೆ ಮುಖಬೆಲೆಯ ನೋಟುಗಳನ್ನು ಜನರಿಗೆ ನೀಡುವುದೆಂಬ ಮಾತು ಜನರಿಗೆ ಅರ್ಥವಾದರೂ, ಅವರಿಗೆ ಅರ್ಥವಾಗದೇ ಹೋದದ್ದು. ಹೀಗೆ ನೋಟು ಬದಲಿಸಿಕೊಳ್ಳುವ ಮಾರ್ಗ ಮತ್ತು ಅವಧಿಯ ಬಗ್ಗೆ. ಅಂತೂ ಮೂರ್ನಾಲ್ಕು ದಿನಗಳ ಒಳಗೆ ಜನರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿಯಂತು ಸಿಕ್ಕಿತ್ತು.
ಮೇಕಿಂಗ್ ಹಿಸ್ಟರಿ: ಮೂರನೇ ಅಲೆ: ರೈತರ ಗೆರಿಲ್ಲಾ ಯುದ್ಧ
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ನಗರ ರೈತರ ಗೆರಿಲ್ಲಾ ಯುದ್ಧದ ಕೆಲವು ವಿಶಿಷ್ಟ ಲಕ್ಷಣಗಳನ್ನೀಗ ನೋಡೋಣ; ಆ ಯುದ್ಧದ ಸಾಧನೆಗಳು ಮತ್ತು ಅದು ಸೃಷ್ಟಿಸಿದ ಸಂಕಟಗಳು ಶತ್ರುಗಳನ್ನು ಮುಗ್ಗರಿಸುವಂತೆ ಮಾಡಿದ್ದನ್ನು ನೋಡೋಣ. ನಗರದ ಬಂಡಾಯದ ಮೂರನೇ ಹಂತದಲ್ಲಿ ಸಶಸ್ತ್ರ ಹೋರಾಟವು ಬಹುಮುಖ್ಯ ಜನಪ್ರಿಯ ಹೋರಾಟವಾಗಿದ್ದದ್ದು ಸ್ಪಷ್ಟವಾಗಿದೆ.
i) ವರ್ಗ ಸಂಯೋಜನೆಯಲ್ಲಾದ ಬದಲಾವಣೆ
ಹೋರಾಟದ ವಿವಿಧ ಹಂತಗಳಲ್ಲಿ, ಹೋರಾಟದ ಮಾದರಿಯೂ ಬದಲಾಗುತ್ತಿತ್ತು. ಜೊತೆ ಜೊತೆಗೇ, ಚಳುವಳಿಯಲ್ಲಿನ ವರ್ಗ ಸಂಯೋಜನೆ ಮತ್ತು ಪಾತ್ರಗಳಲ್ಲೂ ಬದಲಾವಣೆಯಾಗುತ್ತಿತ್ತು. ಈ ಬದಲಾವಣೆಗಳು ಹೋರಾಟದ ಹಂತಗಳ ಮಾರ್ಪಡುವಿಕೆಯನ್ನು ಗುರುತಿಸುತ್ತಿತ್ತು ಮತ್ತು ಅಳವಡಿಸಿಕೊಂಡ ಮಾದರಿಯನ್ನು ನಿರ್ಧರಿಸುತ್ತಿತ್ತು. ಬಂಡಾಯದ ಬಗೆಗಿನ ಯಾವುದೇ ಸಾಮಾನ್ಯ ವಿಶ್ಲೇಷಣೆಯನ್ನೂ ಈ ಅಂಶದ ಆಧಾರದ ಮೇಲೆ ನಿರ್ಧರಿಸುವುದು ಅವಶ್ಯಕ.
ನವೆಂ 17, 2016
ಬ್ಯಾಂಕುಗಳ ಮುಂದೆ ಬಸವಳಿದ ಭಾರತ.
ಡಾ.ಅಶೋಕ್.ಕೆ.ಆರ್
ಇಡೀ ದೇಶ ಅಚ್ಚರಿ ಮತ್ತು ಆಘಾತಕ್ಕೊಳಗಾಗಿ ಒಂದು ವಾರವಾಯಿತು. ಭ್ರಷ್ಟಾಚಾರ ರಹಿತ, ಅಭಿವೃದ್ಧಿಗೆ ಪೂರಕವಾಗಿ ಆಡಳಿತ ನೀಡುವ ಆಶ್ವಾಸನೆಯೊಂದಿಗೆ ಕೇಂದ್ರದಲ್ಲಿ ಅಧಿಕಾರವಿಡಿದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಕೊಟ್ಟ ಮೊದಲ ಅಚ್ಚರಿಯಿದು. ಅಚ್ಚರಿಗೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಅಚ್ಚರಿ ಆಘಾತವಾಗಿ ಪರಿವರ್ತನೆಯಾಗುವುದಕ್ಕೆ ಹೆಚ್ಚೇನೂ ಸಮಯ ಬೇಕಾಗಲಿಲ್ಲ. ಜನರ ಹೊಗಳಿಕೆಯ ಮಾತುಗಳು ತೆಗಳಿಕೆಯಾಗಿ ಮಾರ್ಪಡುವುದಕ್ಕೂ ಹೆಚ್ಚು ಸಮಯ ಹಿಡಿಯಲಿಲ್ಲ. ಒಳ್ಳೆಯ ಉದ್ದೇಶದಿಂದ ಕೂಡಿದೆ ಎನ್ನಿಸುವ ದೂರಗಾಮಿಯಲ್ಲಿ ಉತ್ತಮ ಪರಿಣಾಮಗಳನ್ನುಂಟು ಮಾಡುತ್ತದೆ ಎನ್ನಲಾದ ಯೋಜನೆಯೊಂದು ಪೂರ್ವ ಸಿದ್ಧತೆಯ ಕೊರತೆಯ ಕಾರಣದಿಂದಾಗಿ ದೇಶದ ಜನರ – ಹೆಚ್ಚಾಗಿ ಬಡ, ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದ ಜನರ – ದಿನಗಳನ್ನೇ ಏರುಪೇರುಮಾಡಿಬಿಟ್ಟಿದೆ. ದೇಶಕ್ಕೆ ಒಳ್ಳೇದಾಗುತ್ತೇನೋ ಎಂಬ ನಿರೀಕ್ಷೆಯಿಂದ ಜನರೂ ಒಂದು ಮಟ್ಟಿಗೆ ತಾಳ್ಮೆಯಿಂದಲೇ ಕಷ್ಟವನ್ನನುಭವಿಸುತ್ತಿದ್ದಾರೆ. ನಿಜಕ್ಕೂ ಪ್ರಧಾನ ಮಂತ್ರಿ ಮೋದಿಯವರ ಈ ನಿರ್ಧಾರದಿಂದ ಒಳ್ಳೆಯದಾಗುತ್ತದಾ?