ಫೆಬ್ರ 15, 2018

ಮಿತ್ರಪಕ್ಷಗಳನ್ನು ನಿರ್ಲಕ್ಷಿಸುತ್ತಿರುವ ಬಾಜಪ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಎನ್.ಡಿ.ಎ. ಮೈತ್ರಿಕೂಟದಲ್ಲಿ ಬಾಜಪದ ಬಹುಮುಖ್ಯ ಮಿತ್ರಪಕ್ಷಗಳೆಂದರೆ ಶಿವಸೇನೆ, ಅಕಾಲಿದಳ ಮತ್ತು ತೆಲುಗುದೇಶಂ! ಇದೀಗ ಬಾಜಪದ ದೊಡ್ಡಣ್ಣನ ರೀತಿಯ ನಡವಳಿಕೆಯಿಂದ ಅದರ ಮಿತ್ರಪಕ್ಷಗಳಲ್ಲಿ ನಿದಾನವಾಗಿ ಅಸಮಾದಾನ ಹೊಗೆಯಾಡುತ್ತಿದ್ದು, 2019ರ ಸಾರ್ವತ್ರಿಕ ಚುನಾವಣೆಗಳ ಹೊತ್ತಿಗೆ ಈ ಮೈತ್ರಿಕೂಟದಲ್ಲಿ ಬಹಳಷ್ಟು ಬದಲಾವಣೆಗಳಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅದರ ಬಗ್ಗೆ ಒಂದಿಷ್ಟು ನೋಡೋಣ:

ಚುನಾವಣೆಗಳನ್ನು ಗೆಲ್ಲಲು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿಮಾಡಿಕೊಳ್ಳುವ ಮೂಲಕ, ತಮ್ಮ ಅಸ್ತಿತ್ವ ಇಲ್ಲದ ರಾಜ್ಯಗಳಲ್ಲಿ ಬೇರು ಬಿಡಲು ಪ್ರಯತ್ನಿಸುವುದು ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳ ಮಾಮೂಲಿ ವರಸೆಯಾಗಿದೆ. ಕಾಂಗ್ರೆಸ್ ಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡ ನಂತರದಲ್ಲಿ ಎಂಭತ್ತರ ದಶಕದಿಂದೀಚೆಗೆ ಇಂತಹ ಮೈತ್ರಿಗಳು ಸರ್ವೇಸಾದಾರಣವಾಗಿವೆ. ತೊಂಭತ್ತರ ದಶಕದಲ್ಲಿ ರಾಷ್ಟ್ರದಾದ್ಯಂತ ಬಲಿಷ್ಠ ಶಕ್ತಿಯಾಗಿ ಬೆಳೆಯುತ್ತಿದ್ದ ತೃತೀಯ ರಂಗವನ್ನು ಇಲ್ಲವಾಗಿಸಲು ಕಾಂಗ್ರೆಸ್ ಮತ್ತು ಬಾಜಪಗಳು ನಿದಾನವಾಗಿ ತಮ್ಮ ಪ್ರಯತ್ನ ಪ್ರಾರಂಭಿಸಿದವು ತೃತೀಯ ರಂಗದ ಅಂಗಪಕ್ಷಗಳನ್ನು ( ಎಡಪಕ್ಷಗಳನ್ನು ಹೊರತು ಪಡಿಸಿ) ಒಂದೊಂದಾಗಿ ತಮ್ಮ ತೆಕ್ಕೆಗೆ ಸೆಳೆಯುತ್ತ ತಾವು ಗಟ್ಟಿಯಾಗಿ ಬೆಳೆಯುತ್ತ ಹೋದವು. 

ಜನ 27, 2018

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅಂದ ಹಾಗೆ ಬೆಕ್ಕು ಎಲ್ಲಿದೆ?

ಕು.ಸ.ಮಧುಸೂದನ ನಾಯರ್ ರಂಗೇನಹಳ್ಳಿ
ರಾಜ್ಯ ರಾಜಕಾರಣದಲ್ಲಿ ಇಂತಹದೊಂದು ಸನ್ನಿವೇಶ ಎದುರಾಗಬಹುದೆಂದು ಜನರಿರಲಿ, ನಮ್ಮ ಯಾವುದೇ ರಾಜಕೀಯ ಪಕ್ಷಗಳಾಗಲಿ ಅದರ ನಾಯಕರುಗಳೇ ಆಗಲಿ ನಿರೀಕ್ಷಿಸಿರಲಿಲ್ಲ. ಎಂಭತ್ತರ ದಶಕದ ನಂತರ ಮೊತ್ತಮೊದಲಬಾರಿಗೆ, ರಾಜ್ಯದ ವಿದಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕನ್ನಡದ ಅಸ್ಮಿತೆಯ ಪ್ರಶ್ನೆ ಮತ್ತು ರಾಜ್ಯ ರೈತರ ಸ್ವಾಭಿಮಾನದ ಪ್ರಶ್ನೆಯೊಂದು ಚುನಾವಣಾ ವಿಷಯವಾಗುವ ಸುವರ್ಣ ಅವಕಾಶವೊಂದು ಎದುರಾಗಿದೆ.

ಹಾಗಂತ ಈ ವಿಷಯಗಳು ಚುನಾವಣೆಯಲ್ಲಿ ಪ್ರಸ್ತಾಪವಾಗಲೇ ಬೇಕೆಂದೇನು ನಮ್ಮ ರಾಜಕೀಯ ಪಕ್ಷಗಳು ಬಯಸುತ್ತಿಲ್ಲ. ಆಕಸ್ಮಿಕವಾಗಿ ಜರುಗಿದ ಹಲವು ವಿದ್ಯಾಮಾನಗಳು ಕನ್ನಡದ ಮತ್ತು ರೈತರ ಸಮಸ್ಯೆಗಳನ್ನು ಹೆಚ್ಚೂ ಕಡಿಮೆ ಚುನಾವಣಾ ಪ್ರಚಾರದ ಕೇಂದ್ರಬಿಂದುವನ್ನಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಈಗಲೂ ನಮ್ಮ ರಾಜಕೀಯ ಪಕ್ಷಗಳು ಇವನ್ನು ಚುನಾವಣಾ ಪ್ರಚಾರದಿಂದ ದೂರವಿಡಲು ಪ್ರಯತ್ನಿಸುವುದು ಖಚಿತ. ಹಾಗಾಗಿ ಈಗ ಮುನ್ನೆಲೆಗೆ ಬಂದಿರುವ ಈ ವಿಚಾರಗಳನ್ನು ಚುನಾವಣೆಯ ಮುಖ್ಯ ವಿಚಾರಗಳನ್ನಾಗಿಸಿ ಮತದಾನ ಮಾಡಿಸಬೇಕಿರುವುದು ನಮ್ಮ ಕನ್ನಡಪರ ಸಂಘಟನೆಗಳ ಮತ್ತು ರೈತ ಸಂಘಟನೆಗಳ ಆದ್ಯ ಕರ್ತವ್ಯವಾಗಬೇಕಿದೆ.

ಡಿಸೆಂ 9, 2017

ಅಕ್ಷರ ಪ್ರೀತಿ ಬೆಳೆಸಿದ ರವಿ ಬೆಳಗೆರೆಯ ನೆನಪಲ್ಲಿ......

ಡಾ. ಅಶೋಕ್.ಕೆ.ಆರ್

ರವಿ ಬೆಳಗೆರೆ ಅರೆಸ್ಟ್ ಎಂಬ ಸುದ್ದಿ ನಿನ್ನೆ ಮಧ್ಯಾಹ್ನದಿಂದ ಟಿವಿ, ಸುದ್ದಿ ಯ್ಯಾಪ್‍ಗಳು, ಎಫ್.ಬಿಯಲ್ಲಿ ರಾರಾಜಿಸಲಾರಂಭಿಸಿದೆ. ರವಿ ಬೆಳಗೆರೆ ಎಂಬ ವ್ಯಕ್ತಿ ಹೊತ್ತು ತಂದ ನೆನಪುಗಳ ಬುತ್ತಿ ಚಿಕ್ಕದಲ್ಲ. 

ಎರಡನೆ ವರ್ಷದ ಪಿ.ಯು.ಸಿಯ ದಿನಗಳವು. ಅವತ್ಯಾವ ಕಾರಣಕ್ಕೋ ನೆನಪಿಲ್ಲ, ಕಾಲೇಜು ಬೇಗ ಮುಗಿದಿತ್ತು. ಮನೆಗೆ ಹೋಗುವ ದಾರಿಯಲ್ಲಿ ಸಿಗುತ್ತಿದ್ದ ಸ್ಟೇಡಿಯಂ ಬಳಿ ಚೆಂದದ ಚುರ್ಮುರಿ ಮಾಡುತ್ತಿದ್ದ ಗಾಡಿಯ ಬಳಿ ನಿಂತು ಚುರ್ಮುರಿ ತಿನ್ನುವಾಗ ಎದುರುಗಡೆ ನಗರ ಕೇಂದ್ರ ಗ್ರಂಥಾಲಯ ಅನ್ನೋ ಬೋರ್ಡು ಕಾಣಿಸಿತು. ಹುಣಸೂರಿನಲ್ಲಿದ್ದಾಗ ಅಪರೂಪಕ್ಕೆ ಲೈಬ್ರರಿಗೆ ಹೋಗುತ್ತಿದ್ದೆ, ಮಂಡ್ಯದ ಲೈಬ್ರರಿಗಿನ್ನೂ ಕಾಲಿಟ್ಟಿರಲಿಲ್ಲ. ನಡೀ ಲೈಬ್ರರಿಗಾದ್ರೂ ಹೋಗೋಣ ಅಂದ್ಕೊಂಡು ಒಳಗೆ ಕಾಲಿಟ್ಟೆ. ಒಂದಷ್ಟು ದಿನಪತ್ರಿಕೆ ತಿರುವು ಹಾಕಿ, ರೂಪತಾರ ತರಂಗ ಮಂಗಳ ತಿರುವು ಹಾಕಿದ ನಂತರ ಕಣ್ಣಿಗೆ ಬಿದ್ದಿದ್ದು ಕಪ್ಪು ಸುಂದರಿ! ಕೈಗೆತ್ತಿಕೊಂಡ ಮೊದಲ ಟ್ಯಾಬ್ಲಾಯ್ಡ್ ಪತ್ರಿಕೆ ಹಾಯ್ ಬೆಂಗಳೂರ್! ಆ ವಯಸ್ಸಲ್ಲಿ ಪತ್ರಿಕೆಯಲ್ಲಿದ್ದ ಕ್ರೈಂ – ರಾಜಕೀಯ ವರದಿಗಳ ರಂಜನೀಯ ಟೈಟಲ್ಲುಗಳು ಇಷ್ಟವಾಯ್ತೋ, ಖಾಸ್ ಬಾತ್ ಬಾಟಮ್ ಐಟಮ್ ಹಲೋ ಕೇಳಿ ಅನ್ನೋ ಹೆಸರುಗಳು ಇಷ್ಟವಾಯ್ತೋ ಈಗ ನಿರ್ಧರಿಸುವುದು ಕಷ್ಟದ ಕೆಲಸ. ಹೀಗೆ ಶುರುವಾಗಿತ್ತು ಹಾಯ್ ಬೆಂಗಳೂರ್ ಜೊತೆಗಿನ ಒಡನಾಟ.

ಕನ್ಯತ್ವವೂ ಕನ್ಯಾಪೊರೆಯೂ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮೊದಲಿಗೆ ನಿರಂಜನ ವಾನಳ್ಳಿ ಅಂತವರು ಅದರಲ್ಲೂ ಪತ್ರಿಕೋದ್ಯಮದ ಬಗ್ಗೆ ಶಿಕ್ಷಣ ನೀಡುವಂತವರು ಕನ್ಯತ್ವದ ಬಗ್ಗೆ ಮಾತನಾಡಿರುವುದೇ ಅತ್ಯಂತ ಅಸಹ್ಯಕರವಾದ ಮತ್ತು ಅಸಂಗತವಾದ ವಿಚಾರ.

ಅಷ್ಟಕ್ಕೂ ಈ ಕನ್ಯತ್ವಎಂದರೇನು? ಯೋನಿಯೊಳಗಿನ ಕನ್ಯಾಪೊರೆಯನ್ನು ಉಳಿಸಿಕೊಳ್ಳುವುದೇ ಕನ್ಯತ್ವವೇ ವಾನಳ್ಳಿಸರ್?

ಹೆಣ್ಣೊಬ್ಬಳ ಯೋನಿನಾಳದ ಆವರಣದ ತೆಳುವಾದ ಪೊರೆಯನ್ನು ಕನ್ಯಾಪೊರೆ ಎಂದು ಕರೆಯುವುದುಂಟು. ಯಾವತ್ತಿಗೂ ಸಂಭೋಗ ಕ್ರಿಯೆಯಲ್ಲಿ ಬಾಗವಹಿಸದ ಹೆಣ್ಣಿನ ಕನ್ಯಾಪೊರೆ ಹರಿಯುವುದಿಲ್ಲ ಎಂಭ ಭ್ರಮೆಯೊಂದು ಸಮಾಜದಲ್ಲಿ ಬೆಳೆದು ಬಂದಿದೆ.

ನವೆಂ 17, 2017

ಇಂಡಿಯಾದಲ್ಲಿ ಮತೀಯವಾದದ ರಾಜಕಾರಣದ ಬೆಳವಣಿಗೆಗೆ ಕಾರಣವಾದ ಅಂಶಗಳು!

ಕು.ಸ.ಮಧುಸೂದನರಂಗೇನಹಳ್ಳಿ
(ಇಂಡಿಯಾದ ರಾಜಕಾರಣದಲ್ಲಿ ಮತೀಯವಾದವೇನು ಇದ್ದಕ್ಕಿದ್ದಂತೆ ಸೃಷ್ಠಿಯಾಗಿದ್ದಲ್ಲ. ಬದಲಿಗೆ ಎಪ್ಪತ್ತರ ದಶಕದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರುಗಳು ತೆಗೆದುಕೊಂಡ ತಪ್ಪು ನಿರ್ದಾರಗಳಿಂದಾಗಿ ಮತ್ತು ತದನಂತರದಲ್ಲೂ ಸಿದ್ದಾಂತಕ್ಕಿಂತ ಅಧಿಕಾರವೇ ಮುಖ್ಯ ಎನ್ನುವ ರೀತಿಯಲ್ಲಿ ನಡೆದುಕೊಂಡಿದ್ದರಿಂದ ಮತೀಯವಾದ ಎನ್ನುವುದು ನಿದಾನವಾಗಿ ಇಂಡಿಯಾದ ರಾಜಕಾರಣದಲ್ಲಿ ವಿಷದಂತೆ ತುಂಬಿಕೊಳ್ಳತೊಡಗಿತು. ಇಂದಿನ ಯುವಜನತೆಗೆ ಇದರ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದಷ್ಟೆ ಈ ಲೇಖನದ ಉದ್ದೇಶ)

ಅದು ಶಕ್ತಿ ರಾಜಕಾರಣದ ಪಡಸಾಲೆಯೇ ಇರಲಿ, ವಿಚಾರವಂತರು ಮತ್ತು ಪ್ರಗತಿಪರರ ವೈಚಾರಿಕಗೋಷ್ಠಿಗಳಿರಲಿ, ಇಲ್ಲ ಅತಿ ಸಾಮಾನ್ಯಜನರ ಸರಳ ಮಾತುಕತೆಗಳ ಪಟ್ಟಾಂಗದಲ್ಲಿರಲಿ ಒಂದುಮಾತು ಮಾತ್ರ ಪದೆಪದೇ ಪುನರುಚ್ಚರಿಸಲ್ಪಡುತ್ತಿದೆ ಮತ್ತು ತೀವ್ರ ರೀತಿಯ ಚರ್ಚೆಗೆ ಗ್ರಾಸವಾಗುತ್ತಲಿದೆ: ಅದೆಂದರೆ ಇಂಡಿಯಾದಲ್ಲಿ ಮತಾಂಧ ರಾಜಕಾರಣ ಮೇಲುಗೈ ಸಾದಿಸುತ್ತಿದೆಮತ್ತು ಅದರ ಕಬಂದ ಬಾಹುಗಳು ಈ ನೆಲದ ಬುಡಕಟ್ಟುಜನಾಂಗಗಳನ್ನೂ ಸಹ ಆವರಿಸಿಕೊಳ್ಳುತ್ತಿದೆ ಅನ್ನುವುದಾಗಿದೆ.ನಿಜ ಇವತ್ತು ಮತೀಯ ರಾಜಕಾರಣ ಮಾಡುತ್ತಲೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಾಜಪ ದಿನೇದಿನೇ ತನ್ನ ಶಕ್ತಿಯನ್ನು ಮತ್ತು ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ.ಎಂಭತ್ತರ ದಶಕದಲ್ಲಿ ಶುರುವಾದ ಬಾಜಪದ ಕೋಮುರಾಜಕಾರಣವೀಗ ತನ್ನ ಉತ್ತುಂಗ ಸ್ಥಿತಿಯನ್ನು ತಲುಪಿದ್ದು ಈ ನಾಡಿನ ಜಾತ್ಯಾತೀತ ನೇಯ್ಗೆಯನ್ನು ಚಿಂದಿ ಮಾಡಿದೆ ಮತ್ತು ಮಾಡುತ್ತಿದೆ. ಈಹಿನ್ನೆಲೆಯಲ್ಲಿಯೇ ನಾವು ಬಾಜಪ ಹೇಗೆ ಬೆಳೆಯುತ್ತಬಂದಿತು ಮತ್ತು ಹೇಗೆ ತನ್ನ ಮತೀಯ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ಭಾರತೀಯರು ಒಪ್ಪುವಂತೆಮಾಡುವಲ್ಲಿ ಯಶಸ್ವಿಯಾಯಿತು ಎನ್ನುವುದನ್ನು ವಿಶ್ಲೇಷಿಸಿ ನೋಡಬೇಕಿದೆ. 

ಅಮೃತಯಾನ.

ಚಿತ್ರಕಲಾವಿದೆ, ವಿನ್ಯಾಸಕಿ, ರಂಗನಟಿಯಾಗಿದ್ದ ಅಮೃತಾ ರಕ್ಷಿದಿ ತನ್ನ ಬದುಕಿನ ಅನುಭವಗಳನ್ನು "ಅಮೃತ ಯಾನ" ಎಂಬ ಹೆಸರಿನಲ್ಲಿ ಪುಟಗಳ ಮೇಲಿಳಿಸಿದ್ದಾಳೆ. ಆತ್ಮಕತೆ ಬರೆದಾಯ್ತಲ್ಲ ಇನ್ನೇನು ಕೆಲಸ ಎನ್ನುವಂತೆ ತುಂಬಾ ಚಿಕ್ಕ ವಯಸ್ಸಿಗೇ ಅನಾರೋಗ್ಯದಿಂದ ಅಸುನೀಗಿಬಿಟ್ಟಳು ಅಮೃತಾ. ಅವಳ ಅನುಪಸ್ಥಿತಿಯಲ್ಲಿ ಐದು ಸಂಪುಟಗಳ "ಅಮೃತ ಯಾನ" ಇದೇ ಭಾನುವಾರ (19/11/2017) ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಬೇಸ್ ಮೆಂಟ್ ಗ್ಯಾಲರಿಯಲ್ಲಿ ಬಿಡುಗಡೆಗೊಳ್ಳಲಿದೆ. ಬಿಡುವು ಮಾಡಿಕೊಂಡು ಬನ್ನಿ. 
ಅಮೃತಯಾನದ ಒಂದು ಪುಟ್ಟ ಅಧ್ಯಾಯ ಹಿಂಗ್ಯಾಕೆಯ ಓದುಗರಿಗಾಗಿ. 

ಅಜ್ಜಮನೆ

ಅಣ್ಣಯ್ಯನಿಗೆ ಅಕ್ಟೋಬರ್ ರಜೆ ಪ್ರಾರಂಭವಾಗಿತ್ತು. ಮಳೆಗಾಲ ಕಳೆದು ಬಿಸಿಲು ಬಂದಿತ್ತು. ಈ ನಡುವೆ ಅಪ್ಪ ದೇವಾಲದ ಕೆರೆಯಲ್ಲಿನ ಕೆಲಸವನ್ನು ಬಿಟ್ಟು ಹಾರ್ಲೆಗೆ ಕೆಲಸಕ್ಕೆ ಸೇರಿದ್ದರು. ಒಮ್ಮೆ ಅಜ್ಜಮನೆಗೆ ಹೋಗಿಬರಬೇಕೆಂದು ಅಮ್ಮ ಅಪ್ಪನಲ್ಲಿ ಹೇಳುತ್ತಿದ್ದುದು ಅಣ್ಣಯ್ಯ ಮತ್ತು ಅಮೃತಾರ ಕಿವಿಗೆ ಬದ್ದಿತ್ತು. ರಜೆ ಬಂದ ಕೂಡಲೇ ಅಣ್ಣಯ್ಯ ಮತ್ತು ಅಮೃತಾ “ಅಮ್ಮ ಅಜ್ಜಮನೆಗೋಗದು ಯಾವಾಗ?” ಎಂದು ಗೋಗರೆಯಲಾರಂಭಿಸಿದರು. ಆದರೆ ಅಮ್ಮ “ಅಪ್ಪನ ಕೇಳ್ಬೇಕಷ್ಟೆ” ಎನ್ನುತ್ತಿದ್ದಳು. ಅಜ್ಜಿಯನ್ನು ಬಿಟ್ಟು ಅಮ್ಮನಿಗೆ ತಕ್ಷಣ ಹೊರಡಲಾಗುತ್ತಿರಲಿಲ್ಲ. ಅಮ್ಮ ಇಲ್ಲದಿದ್ದಾಗ ಒಬ್ಬರೇ ಮನೆಕೆಲಸಗಳನ್ನು ಮಾಡಲು ಅಜ್ಜಿಗೆ ಆಗುತ್ತಿರಲಿಲ್ಲ. ಅಪ್ಪ ಯಾವಾಗಲೂ ಹೊರಗಡೆ ದುಡಿಯಲು ಹೋಗುತ್ತಿದ್ದರು. ಹಾಗಾಗಿ ಅಪ್ಪ ಒಪ್ಪಿದ ಮೇಲೆಯೇ ಅವರೆಲ್ಲರೂ ಹೊರಡುವುದು. ಅಣ್ಣಯ್ಯ ಅಪ್ಪ ಮನೆಯಲ್ಲಿಲ್ಲದಾಗ ಅಮ್ಮನೊಂದಿಗೆ ಹಟ ಮಾಡುತ್ತಿದ್ದ. ಆದರೆ ಅಮೃತಾಳಿಗಾಗಲೀ ಅಣ್ಣಯ್ಯನಿಗಾಗಲೀ ಅಪ್ಪನಲ್ಲಿ ಕೇಳಲು ಧೈರ್ಯವಿರಲಿಲ್ಲ.

ನವೆಂ 14, 2017

ಮತಾಂದರುಗಳನ್ನು ಇಲ್ಲಿಗೆ ಕರೆತನ್ನಿ

ಕು.ಸ.ಮಧುಸೂದನರಂಗೇನಹಳ್ಳಿ
ಒಮ್ಮೆಯಾದರು ಅಲ್ಲಿಗೆ ನಮ್ಮ ಎಲ್ಲ ಧರ್ಮಗಳ ಮತಾಂದರನ್ನು ಕರೆದುಕೊಂಡು ಹೋಗಬೇಕು ಅನಿಸುತ್ತಿದೆ.

ಅದು ಅಷ್ಟೇನೂ ಪ್ರಸಿದ್ದವಲ್ಲದ, ರಾಜ್ಯದ ಭೂಪಟದಲ್ಲಿ ಅಧಿಕೃತವಾಗಿ ಗುರುತಿಸಿಕೊಳ್ಳದ ಪುಟ್ಟ ಊರು! ಹೆಸರು ಹಣೆಗೆರೆ ಕಟ್ಟೆ-ನೀವು ಶಿವಮೊಗ್ಗದಿಂದ ಆಯನೂರಿಗೆ ಹೋಗಿ ಅಲ್ಲಿಂದ ಎಡಕ್ಕೆ ತಿರುಗಿ ಕಾಡಿನೊಳಗೆ ಇಪ್ಪತ್ತು ಕಿಲೊಮೀಟರ್ ಪ್ರಯಾಣ ಮಾಡಿದರೆ ಆ ಊರುಸಿಗುತ್ತದೆ. ಊರಪ್ರವೇಶದಿಂದಲೇ ರಸ್ತೆಯ ಬಲ ಬದಿಯಲ್ಲಿ ಹೂವು, ಹಣ್ಣು,ಕಾಯಿ,

ನವೆಂ 3, 2017

ಗೂಗಲ್ ಮ್ಯಾಪಿಗೆ ಕನ್ನಡದ ಹೆಸರುಗಳನ್ನು ಸೇರಿಸುವ ಬಗೆ || How to add kannada name...









ಪುರುಸೊತ್ತಾದಾಗಲೆಲ್ಲ ಗೂಗಲ್ ಮ್ಯಾಪಿನಲ್ಲಿ ಕನ್ನಡದ ಹೆಸರುಗಳನ್ನು ಸೇರಿಸುತ್ತಾ ಹೋಗಿ. 

ಕನ್ನಡದ ಹೆಸರುಗಳನ್ನು ಮೊಬೈಲಿನಲ್ಲಿ ಸೇರಿಸಲು ಸುಲಭ ವಿಧಾನವನ್ನರಿಯಲು ಈ ವೀಡಿಯೋ ನೋಡಿ 

ಅಕ್ಟೋ 30, 2017

ಸುಡುಗಾಡು ಕವಿತೆಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮರಣಪತ್ರವನ್ನೂ ಕೇಳುತ್ತಿಲ್ಲ
ಸುದೀರ್ಘ ಸಂಜೆಗಳ ಉದ್ದುದ್ದ ನೆರಳುಗಳು
ಅಂಗಳದ ತುಂಬಾ ಹರಡಿಕೊಂಡವು
ಎಲ್ಲಿಂದಲೋ ಸುಟ್ಟವಾಸನೆಯ ಘಮಲು
ಮಧುಬಟ್ಟಲಿಗೆ ಕಾತರಿಸುತಿಹ ಕೆಂಡದ ತುಟಿಗಳು