ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಗೆರಿಲ್ಲಾ ಯುದ್ಧವು ಅಳವಡಿಸಿಕೊಂಡ ಮತ್ತೊಂದು ಕ್ರಮವೆಂದರೆ ಶತ್ರು ಪಾಳಯದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು. 1833ರ ಮಾರ್ಚಿ ತಿಂಗಳಿನಲ್ಲಿ, ಬರ್ರಿನ ಸಿಪಾಯಿ ನದೀಮ್ ಖಾನ್, ಬ್ರಿಟೀಷ್ ಅಧಿಕಾರಿ ಮೇಜರ್ ಜೇಮ್ಸ್ ಮೇಲೆ ಬೆಂಕಿಪುರದಲ್ಲಿ (ಇವತ್ತಿನ ಭದ್ರಾವತಿ) ಅಂತಹುದೊಂದು ದಾಳಿಯನ್ನು ಆಯೋಜಿಸಿದ. ಮಾರ್ಚಿ 25ರ ರಾತ್ರಿ ಜೇಮ್ಸ್ ತನ್ನ ಟೆಂಟಿಗೆ ವಾಪಸ್ಸಾಗುವ ಸಮಯದಲ್ಲಿ, ಬಂಧನಕ್ಕೊಳಗಾಗುವ ಮುನ್ನ ನದೀಮ್ ಖಾನ್ ತನ್ನ ಖಡ್ಗದಿಂದ ಅವನ ತೋಳ ಮೇಲೆ, ತಲೆಯ ಮೇಲೆ ದಾಳಿ ನಡೆಸಿದ, ತದನಂತರ ನದೀಮ್ ಖಾನನನ್ನು ನೇಣಿಗೇರಿಸಲಾಯಿತು. (166)