Apr 18, 2017

ಖೋಡಿ ಮನ

ಸವಿತ ಎಸ್ ಪಿ
ನಿನ್ನ ಕಿರುನಗೆಯ ಸುಳಿಯಿಂದ ಹೊರ ಬಂದು
ಎಲ್ಲ ಭಾವಗಳ ಬಚ್ಚಿಟ್ಟು ನಾನು ನೀನು ದ್ವೀಪಗಳಂತೆ, 
ಅಪರಿಚಿತರಂತೆ ಸೋಗು ಹಾಕಿ ಬದುಕುವುದೊಂದು 
ಸಂಘರ್ಷವಲ್ಲದೇ ಮತ್ತೇನೋ ಹುಡುಗಾ...!
ಮರೆವು ಒಂದು ವರವಾಗಿಬಿಡಲಿ 
ನಿನ್ನ ನೆನಪ ನೆನಪು ಮನಕೆ ಬಾರದಿರಲಿ 
ಎಂದು ಅನುಕ್ಷಣವೂ ಹಂಬಲಿಸಿ 
ನಿನ್ನ ನೆನಪು ನನ್ನ ವಾಸ್ತವದೊಂದಿಗೆ ನಾ ಗುದ್ದಾಡುತಿರುವುದು 
ಸಂಘರ್ಷವಲ್ಲದೆ ಮತ್ತೇನೋ ಚೆಲುವಾ...!

ಈ ಭಾವ ಭಾವನೆಗಳ ಕದನದಲಿ 
ನಿನ್ನ ನೆನಪುಗಳು ಬಂದು ಚಿತ್ತವ ಮುತ್ತಿಕ್ಕಲಿ 
ನಿನ್ನ ಮರೆಯುವ ಕ್ಷಣವೇ ನನಗೆ ಸಾವು ಬರಲಿ 
ನನ್ನ ನೋಯಿಸುವ ನಿನ್ನ ನೆನಪುಗಳೇ ಗೆಲ್ಲಲಿ ಎನುತಿದೆ 
ಈ ಖೋಡಿ ಮನದ ಸಂಘರ್ಷ ಗೆಳೆಯಾ...!

No comments:

Post a Comment