Dec 31, 2016

ಅಂಗಾಧಿಪತಿ

ಸವಿತ ಎಸ್ ಪಿ
ಬಾಲ್ಯದಿಂದಲೂ....
ನಿನ್ನ ಹುಟ್ಟಿನ ಬಗ್ಗೆ ಅಪರಿಮಿತ ಸಂತಾಪ...
ನಿನ್ನ‌ ಶ್ರದ್ಧೆ,ಗುರುಭಕ್ತಿಯ ಪ್ರಕೋಪ....
ಅಜರಾಮರ ಸ್ನೇಹದ ಬಗ್ಗೆ ಒಲುಮೆ
ನಿಸ್ವಾರ್ಥ ತ್ಯಾಗದ ಬಗ್ಗೆ ಹೆಮ್ಮೆ...
ಮುಂತಾಗಿ....
ಬೆಳೆಸಿಕೊಂಡ‌ ನನ್ನ ಯೋಚನಾಲಹರಿಯ 
ದಿಕ್ಕು ಬದಲಾಗಿದೆ....
ದುಷ್ಟರ‌ ಜೊತೆ‌ ಸೇರಿ ಅನ್ಯಾಯಕ್ಕೆ...
ಅಧರ್ಮಕ್ಕೆ.... 
ಪರೋಕ್ಷವಾಗಿಯಾದರೂ
‌ಕೈ ಜೋಡಿಸಿದೆಯಲ್ಲ.....
ಒಂದು ಹೆಣ್ಣಿನ ಮಾನಾಪಹರಣದ 
ಸಮಯದಲೂ ನೀ ಕೈಕಟ್ಟಿ ಕುಳಿತೆಯಲ್ಲ...
ಧರ್ಮದ ಬೆಳಕಲಿ ನೀ ನಡೆದಿದ್ದರೆ.....
ದುಷ್ಟರ ಕೂಟದಲಿ ಗುರುತಿಸಿಕೊಳ್ಳುವ
ದುರಾದೃಷ್ಟ ನಿನಗೆ ಒದಗುತ್ತಿರಲಿಲ್ಲ...
ಅಲ್ಲವೇ ದಾನಶೂರವೀರ‌ಕರ್ಣ...

3 comments: