Jul 14, 2018

ಕೊರಳಮಾಲೆ

ಶೈಲಾ ಶ್ರೀನಿವಾಸ್

ಎದೆಯ ಭಾವ ನುಡಿದೆ ನೀನೇ 

ಅಂದು ನನ್ನ ಶ್ಯಾಮನೇ......!

ಜಡದ ಒಳಗೂ ನುಡಿವ ವೀಣೆ

ಅಹುದೇ ನನ್ನ ಜೀವವೇ....?



ಮನದ ಮುಗಿಲಲಂದು ನಕ್ಕೆ

ಹರಿಸಿ ಹಾಲು ಹುಣ್ಣಿಮೆ....!!

ಒಡೆದ ಚೂರು ಚುಕ್ಕಿಯಾಗಿ 

ಹೊಳೆಯುವೆ ಇಂದು ಕಣ್ಣಿಗೆ..?



ನಿನ್ನ ಒಲುಮೆಯ ಕರೆಗೆ

ಕರಗಿ ಹರಿದಳಂದು ಯಮುನೆ..

ಮೂಕ ಧೇನು ಬಳಸಿ ನೀನು...!

ಮರೆತೆಯೇನು ನಿನ್ನನೇ.....?



ಮುಳ್ಳ ಮೊನೆಯ ಬಾಳು ನನದು

ನೋವ ಮರೆಸಿ ನಗಿಸಿದೆಯಾ...?

ಹೂವ ಮನಕೆ ಜೇನ ಸುರಿಸಿ

ಬಳಸಿ ಒಲವ ತೆಕ್ಕೆಯಾದೆಯಾ?



ಕಾಡ ಕುಸುಮವಾಗಿ ನಾನು

ಏಳು ಜನುಮಕೂ ಕಾಯುವೆ

ಅರಳಿ ನಗುವ ಆತ್ಮ ಸುಮದೊಳು

ಮಾಲೆಯಾಗಿ ಮರಳುವೇ...

No comments:

Post a Comment