Dec 6, 2016

ಮನದ ಮಾತು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಸಭ್ಯಸ್ಥನಾದವನು ಎಲ್ಲರಿಗು ಪ್ರಿಯವಾಗುತ್ತಾನೆ
ಮುಗುಳ್ನಗುವ ಮುಖಕೆ ಮೆತ್ತಿಕೊಂಡು
ಸಿಹಿಯಾದ ನುಡಿಗಟ್ಟುಗಳ ಉರು ಹೊಡೆದು ಉದುರಿಸುವ 
ಅವನ ತುಟಿಗಳ ಚಲನೆಗೆ
ಜನ ಮರುಳಾಗುತ್ತಾರೆ.
ಕುಷ್ಠ ಹತ್ತಿದ ಮುದುಕನನ್ನು
ಹರಿದ ಬಟ್ಟೆಯ ಬಿಕ್ಷುಕನನ್ನು
ಕಜ್ಜಿ ಹತ್ತಿದ ನಾಯಿಯಂತೆ ನೋಡುವ ಜನ
ಸುಂದರವಾದುದನ್ನು
ಕೋಮಲವಾದುದನ್ನು
ಮಾತ್ರ ಇಷ್ಟ ಪಡುತ್ತಾರೆ.
ವೇದನೆಯೆಂದರೆ:
ಅಧಿಕಾರಸ್ಥರ ಮನದ ಮಾತುಗಳನ್ನು ಆಲಿಸುವ ಜನರೆಂದೂ
ಅಕ್ಕಪಕ್ಕದವರ ವೇದನೆಗಳನ್ನು ಕೇಳಿಸಿಕೊಳ್ಳಲಾರರು. 

No comments:

Post a Comment