Mar 8, 2016

ದೇಶಭಕ್ತಿಯ ನೆಪದಲ್ಲಿ!

ಕು.ಸ.ಮಧುಸೂದನ
08/03/2016
ಅವತ್ತಿನಿಂದ ಇವತ್ತಿನೀ ಕ್ಷಣದವರೆಗೂ
ಹೊಡೆದಾಡುತ್ತಲೇ ಇದ್ದೇವೆ:
ಮೊದಮೊದಲು ಭರ್ಜಿಗಳ ಬಳಸಿ
ಆಮೇಲೆ ಕತ್ತಿ ಕೋವಿಗಳ
ಆಮೇಲಾಮೇಲೆ ರಾಕೆಟ್ಟು ಬಾಂಬುಗಳ!
ಈಗಂತೂ
ಅದೂ ಇದೂ ಅಂತೇನೂ ಇಲ್ಲ:
ಕೈಗಳಿಗೆ ಸಿಕ್ಕದ್ದನ್ನೆಲ್ಲ ಆಯುಧ ಮಾಡಿಕೊಳ್ಳುವ ಕಲೆ
ಕರಗತ ಮಾಡಿಕೊಂಡಿದ್ದೇವೆ!
ಕಂಪ್ಯೂಟರಿನ ಚಿಪ್ಪಿನಿಂದ ಹಿಡಿದೆ
ಮೊಬೈಲಿನ ಸಂದೇಶದವರೆಗೂ
ಎಲ್ಲವನೂ ಉಪಯೋಗಿಸಿ ಬಡಿದಾಡುತ್ತಿದ್ದೇವೆ
ಯಾರೇ ಕೇಳಿದರೂ ಯಾಕೆಂದು
ಕೊಡುತ್ತೇವೆ ಇಬ್ಬರೂ ಒಂದೇ ಉತ್ತರ:
ಇದರಲ್ಲೇನು ಇಲ್ಲ ಸ್ವಹಿತಾಸಕ್ತಿ
ಕಾಪಾಡಬೇಕಿದೆ ರಾಷ್ಟ್ರದ ಹಿತಾಸಕ್ತಿ!

No comments:

Post a Comment