Nov 17, 2015

ಮಾತು ಬೇಕಾಗಿಲ್ಲ

ಕು.ಸ.ಮಧುಸೂದನ್
ಮೌನವಾಗಿದ್ದ ಬುದ್ದ
ಮಾತಾಡಲಿಲ್ಲ
ನಾಲ್ಕು ಮನೆಗಳ ಬಗ್ಗೆ
ಎರಡು ದಾರಿಗಳ ಬಗ್ಗೆ
ಕಾಯುತ್ತಾ ಕೂತಿದ್ದರು ಶಿಷ್ಯರು
ಮಳೆಗೆ ಕಾದಿದ್ದ ಇಳೆಯ ಹಾಗೆ
ಮುಗುಳ್ನಕ್ಕ
ಬುದ್ದ
ಎದ್ದ
ಅರ್ಥವಾಯಿತೇ?
ಎಲ್ಲರಿಗೂ
ಎಂದ
ಎಲ್ಲ ಅಡಗಿರುವುದಿಲ್ಲಿ
ಹೂವು ಅರಳುವ ಗಳಿಗೆಯಲ್ಲಿ
ಎಲ್ಲವೂ ಚಣಮಾತ್ರ ಎನ್ನುವ ಸತ್ಯದಲ್ಲಿ
ಹೇಳಬೇಕಾದ್ದನ್ನು
ಹೇಳದೆಯೇ ಹೇಳಿದ
ಅರ್ಥ ಮಾಡಿಸಿದ.

No comments:

Post a Comment