Jun 23, 2015

ಒಂದು ಪುನರ್ವಸತಿಯ ಕಥೆ....

ನಾಗರಾಜ್ ಹೆತ್ತೂರ್
ಬಹುಶಃ ಇಂತಹ ಕೆಲಸಗಳಿಗಿಂತ ಖುಷಿ ಕೊಡುವ ಕೆಲಸಗಳು ಬೇರೊಂದಿಲ್ಲ. 
ಮದ್ಯಾಹ್ನ ಮನೆಯಿಂದ ಹೊರಟವನು ನಮ್ಮ ಹಾಸನದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಶೋತ್ತಮ್ ಅವರಿಗೆ ಕರೆ ಮಾಡಿದೆ. ಹೊಸ ಬಸ್ ನಿಲ್ದಾಣದ ಹತ್ತಿರ ಬನ್ನಿ ಎಂದರು. ಅವರು ಅಲ್ಲಿಗೆ ಹೋಗುವಷ್ಟರಲ್ಲಿ ನಾನು ಸೇರಿಕೊಂಡೆ . ಕಳೆದ 8 ತಿಂಗಳಿಂದ ಅಲ್ಲೊಬ್ಬ ರಸ್ತೆ ಬದಿ ಬಿದ್ದುಕೊಂಡಿದ್ದ. ಅದು ಯಾವ ಮಟ್ಟಕ್ಕೆ ಎಂದರೆ ಆತ ಬದುಕಿರುವುದೇ ಹೆಚ್ಚು. ಅವನನ್ನು ಗಮನಿಸಿದ್ದವರು ಹುಚ್ಚನಿರಬಹುದೆಂದು ಕೊಂಡಿದ್ದರು. ಕೆಲವರು ಒಂದಷ್ಟು ಅನ್ನ ರೂಪಾಯಿ ದುಡ್ಡು ಕೊಟ್ಟು ಹೋಗುತ್ತಿದ್ದರು. ಇದನ್ನು ಗಮನಿಸಿದ್ದ ರವಿ ಕುಮಾರ್ ಎಂಬುವರು ಮೊನ್ನೆ ಹೋಗಿ ಮಾತನಾಡಿಸಿದಾಗ ಆತ ಹುಚ್ಚನಲ್ಲ ಎಂದು ಗೊತ್ತಾಗಿದೆ. ತಕ್ಷಣವೇ ಪತ್ರಕರ್ತ ಗೆಳೆಯ ಗಿರೀಶ್ ಗೆ ತಿಳಿಸಿದ್ದಾರೆ. ಗಿರೀಶ್ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಶೋತ್ತಮ್ ಅವರಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಪೃವೃತ್ತರಾದ ಪುರುಶೋತ್ತಮ್ ಇವರತ್ತು ಅವನಿಗೆ ಪುನರ್ ವಸತಿ ಕಲ್ಪಿಸುವ ಕೆಲಸಕ್ಕೆ ಮುಂದಾದರು. 
ಆತನ ಹೆಸರು ಸುರೇಶ್ , ಹಾಸನದವನು. ಒಂದು ಕಾಲಕ್ಕೆ ಸಾಕಷ್ಟು ಆಸ್ತಿ ಹೊಂದಿದ್ದವನು. ಮಕ್ಕಳಿಂದ ಅಲಕ್ಷ್ಯಕ್ಕೆ ಒಳಗಾದವನು ಮಕ್ಕಳೇ ಬೀದಿ ಪಾಲು ಮಾಡಿದರೆಂದು ಹೇಳುತ್ತಾನೆ. ಚೆನ್ನಾಗಿಯೇ ಮಾತನಾಡುವ ಆತನನ್ನು ಅಲ್ಲಿಂದ ಎಬ್ಬಿಸುವಷ್ಟರಲ್ಲಿ ಸಾಹಸವೇ ನಡೆಯಿತು. 
ಹಾಸನದ ಸ್ಕೌಡ್ಸ್ ಮತ್ತು ಗೌಡ್ಸ್ ನ ಗೆಳೆಯರು ಮತ್ತು ಸ್ಥಳೀಯರ ಸಹಕಾರದಿಂದ ಆತನನ್ನು ಎಬ್ಬಿಸಿ ಸೋಪು ಹಾಕಿ ತೊಳೆದು ಬಿಸಿ ನೀರು ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕಿದಾಗ ನಿಜಕ್ಕೂ ನಾವೇ ನಂಬದಷ್ಟು ಬದಲಾಗಿ ಹೋದ. ಮಳೆಯ ನಡುವೆಯೂ ಆ ಕ್ಷಣಕ್ಕೆ ಆತನನ್ನು ಮನುಷ್ಯನನ್ನಾಗಿ ಮಾಡಲು ಯಶಸ್ವಿಯಾದೆವು. 
ಆತನಿಗೆ ಬ್ರೆಡ್ಡು ಟೀ ಕೊಟ್ಟಾಗಲಂತೂ ಆತನ ಕಣ್ಣು ನೋಡಬೇಕಿತ್ತು. ನಂತರ ಸಮಾಜ ಕಲ್ಯಾಣ ಇಲಾಖೆಯ ಸಹಕಾರದಿಂದ ಆತನನ್ನು ತುಮಕೂರಿನ ಪುನರ್ ವಸತಿ ಕೆಂದ್ರಕ್ಕೆ ಕಳಿಸಲಾಯಿತು. ಹಾಸನ ಜಿಲ್ಲೆಯಲ್ಲಿ ತಮ್ಮ ಕೆಲಸದ ಮೂಲಕ ಹೆಸರು ಮಾಡಿರುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ಸಹೋದ್ಯೋಗಿಗಳು, ಸಿಬ್ಬಂದಿವರ್ಗ ಈ ಅಮೂಲ್ಯ ಕೆಲಸ ಮಾಡುವ ಮೂಲಕ ಜನತೆಯ ಪ್ರಶಂಸೆಗೆ ಒಳಗಾದರು.... ಇಂತಹ ಕಾರ್ಯಗಳು ಎಲ್ಲೆಡೆ ನಡೆಯಲಿ...... 

ಪುರುಶೋತ್ತಮ್, ಗಿರೀಶ್ ಮತ್ತು ರವಿ ಕುಮಾರ್ ಅವರ ಕಾರ್ಯಕ್ಕೆ ಒಂದು ಹ್ಯಾಟ್ಸ್ ಆಫ್ ಹೇಳೋಣ
(ಇಂತಹವರು ನಿಮ್ಮ ಕಣ್ಣೆದುರೂ ಇರಬಹುದು ಅಲಕ್ಷ್ಯ ವಹಿಸದಿರಿ)
(ನಾಗರಾಜ್ ಹೆತ್ತೂರರ ಫೇಸ್ ಬುಕ್ ಪುಟದಿಂದ)

1 comment:

  1. ಒಳ್ಳೆಯ ಕೆಲ್ಸಕ್ಕೆ ಅಭಿನಂದನೆಗಳು

    ReplyDelete