Aug 28, 2016

ಧಾರವಾಡದಲ್ಲಿ ಬಂದೂಕಿನೆದುರು ರಾಷ್ಟ್ರೀಯ ಜನದನಿ ಜಾಥಾ

ಡಾ. ಕಲಬುರ್ಗಿ ಪಾನ್ಸರೆ ದಾಭೋಲ್ಕರ್ ಹತ್ಯಾವಿರೋಧಿ ಹೋರಾಟ ಸಮಿತಿ ಧಾರವಾಡ

ಡಾ. ಕಲಬುರ್ಗಿ ಪನ್ಸಾರೆ ದಾಭೋಲ್ಕರ್ ಹತ್ಯೆ ವಿರೋಧಿಸಿ
ಮತ್ತು ಸರಕಾರದ ತನಿಖಾ ವಿಳಂಭ ನೀತಿಯನ್ನು ಖಂಡಿಸಿ
ಕೋಮುವಾದಿ ಮತ್ತು ಪ್ಯಾಸಿಸ್ಟ್ ಶಕ್ತಿಗಳಿಗೆ ಉತ್ತರ ಹೇಳುವ

ಬಂದೂಕಿನೆದುರು ರಾಷ್ಟ್ರೀಯ ಜನದನಿ ಜಾಥಾ
ಹಾಗೂ
ಅಭಿವ್ಯಕ್ತಿ ಪರ ರಾಷ್ಟ್ರೀಯ ಸಮಾವೇಶ

೨೦೧೬ ಆಗಸ್ಟ್ ೩೦ ಧಾರವಾಡದಲ್ಲಿ

ಜಾಥಾ
ಕಲ್ಯಾಣನಗರದ ಡಾ. ಎಂ. ಎಂ. ಕಲಬುರ್ಗಿ ಅವರ ಮನೆ ಸೌಜನ್ಯದ ಆವರಣದಿಂದ ಮುಂಜಾನೆ ೧೦ ಗಂಟೆಗೆ ಆರಂಭ
ಸಮಾವೇಶ
ಟೌನ ಹಾಲ್ ಮೈದಾನ (ಆರ್ ಎಲ್ ಎಸ್ ಕಾಲೇಜ ಮೈದಾನ) ಮಧ್ಯಾಹ್ನ ೧೨ ಗಂಟೆಗೆ

ಪ್ರಖರ ಚಿಂತನೆಗೆ ಹೆಸರಾದ ಡಾ. ಎಂ.ಎಂ. ಕಲಬುರ್ಗಿ ಅವರು ಸಾಂಸ್ಕೃತಿಕರಂಗದಲ್ಲಿ ಎಷ್ಟೇ ಪ್ರತಿರೋಧ ಹುಟ್ಟಿಕೊಂಡರೂ ಅವರು ನಂಬಿಕೊಂಡ ಸತ್ಯವನ್ನು ಪ್ರತಿಪಾದಿಸುತ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧರಾದವರು. ಆರೋಗ್ಯವಂತ ಸಮಾಜಕ್ಕೆ ಮಾರಕವಾದ ಗೊಡ್ಡು ಸಂಪ್ರದಾಯ, ಮೂಢನಂಬಿಕೆ, ಧರ್ಮಾಂಧತೆ, ಕೋಮುವಾದ, ಮನುವಾದ ಮುಂತಾದವು ಅವರು ವಿರೋಧಿಸುವ ವಿಚಾರಗಳಾಗಿದ್ದವು. ಅಂಥ ಪ್ರಖರ ಚಿಂತನೆಯ ನಾಡು ಹೆಮ್ಮೆ ಪಡುವ ಸಂಶೋಧಕರು ಅಪ್ಪಟ ಬಸವ ಅನುಯಾಯಿಗಳೂ ಆಗಿದ್ದ ೭೭ ವರ್ಷದ ಎಂ. ಎಂ. ಕಲಬುರ್ಗಿಯವರನ್ನು ಧಾರವಾಡದಲ್ಲಿ ೨೦೧೫, ಆಗಸ್ಟ್ ೩೦ರಂದು ಗುಂಡಿಟ್ಟು ಕೊಲ್ಲಲಾಯಿತು. ಇದು ಕಲಬುರ್ಗಿಯವರ ಕೊಲೆ ಮಾತ್ರವಾಗಿರದೆ ಅದು ಮಾನವೀಯತೆ, ಪ್ರಜಾಪ್ರಭುತ್ವ, ಬಸವ ವಾದ, ನಾಗರಿಕತೆ, ವೈಚಾರಿಕತೆಯ ಕೊಲೆಯೂ ಆಗಿದೆ. ಅವರನ್ನು ಕೊಂದ ಕ್ರಿಯೆ ಸ್ಪಷ್ಟವಾಗಿ ಕರ್ನಾಟಕದಲ್ಲಿ ಮತೀಯ ಭಯೋತ್ಪಾದನೆ ಹುಟ್ಟಿಕೊಂಡಿರುವದಕ್ಕೆ ಪುರಾವೆಯಾಗಿದೆ. ಇದು ಸಾಂಸ್ಕೃತಿಕ ಭಯೋತ್ಪಾದನೆಯೂ ಆಗಿದೆ. ಅದು ವೈಚಾರಿಕ ಭಿನ್ನಾಭಿಪ್ರಾಯವನ್ನು ಸಹಿಸದ ಮನಸ್ಥಿತಿಗಳು ಅದನ್ನು ಹಿಂಸೆಯಿಂದ ಎದುರಿಸಲು ಮುಂದಾಗಿರುವದರ ನಿಖರ ಸೂಚನೆಯಾಗಿದೆ. ಇದು ಕನ್ನಡ ಸಾಂಸ್ಕೃತಿಕ ಲೋಕದ ಆತಂಕಕಾರಿ ಬೆಳವಣಿಗೆಗೆ.

ಹಿಂದೂ-ಲಿಂಗಾಯತ-ವೀರಶೈವ ಧರ್ಮ ಕುರಿತು ಕೆಲವು ಅಪ್ರಿಯ ವಾದಗಳ ಕಟ್ಟಾ ಪ್ರತಿಪಾದಕರಾಗಿದ್ದ; ಕನ್ನಡ ನುಡಿಯ, ಜನ ಬದುಕಿನ ದೇಸೀ ಆಕರಗಳನ್ನು ಹುಡುಕಿ, ಅರ್ಥೈಸಿ, ವಿಶ್ಲೇಷಣೆಗೆ ಒಡ್ಡುತ್ತಿದ್ದ ಸತ್ಯನಿಷ್ಠ ಸಂಶೋಧಕನ ಬದುಕನ್ನು ಅನುಚಿತ ರೀತಿಯಲ್ಲಿ ಕೊನೆಗೊಳಿಸಲಾಯಿತು. ಗುರುವೇ ಎಂದು ಒಳಬಂದವರೇ ಗುಂಡು ಹಾಕಿ ಹೋದರು. ಪ್ರಜ್ಞಾವಂತ ಜನ ದಿಗ್ಭ್ರಮೆಗೊಂಡರು, ಅವರನ್ನು ನೆನಪಿಸಿಕೊಂಡರು, ದುಃಖಗೊಂಡರು, ಆಕ್ರೋಶಗೊಂಡರು. ಹತ್ಯೆಯನ್ನು ದೇಶಾದ್ಯಂತ ಸಾಹಿತಿ-ಚಿಂತಕರು ಖಂಡಿಸಿ ಹಲವರು ತಮ್ಮ ಪ್ರಶಸ್ತಿ, ಪಾರಿತೋಷಕಗಳನ್ನು ಹಿಂತಿರುಗಿಸಿದರು.

ಕಲಬುರ್ಗಿ ಅವರ ಹತ್ಯೆ ವಿಚಾರ ವಿರೋಧಿಗಳ ಕೃತ್ಯ. ಆದರೆ ವಿಚಾರಕ್ಕೆ ವಿಚಾರ ಉತ್ತರವಾಗಬೇಕೇ ವಿನಹ ಹತ್ಯೆಯಲ್ಲ. ವಿಚಾರದ ಮೂಲಕ ಪ್ರತ್ಯುತ್ತರ ನೀಡಲಾರದ ಹೀನ ಮನಸುಗಳು ಕಲ್ಬುರ್ಗಿಯವರಂತೆಯೇ ಹಲವಾರು ಶ್ರೇಷ್ಠ ಚಿಂತಕರನ್ನು ಹತ್ಯೆ ಮಾಡಿದವು. ಮಹಾರಾಷ್ಟ್ರದ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಹೋರಾಟಗಾರ ಡಾ. ನರೇಂದ್ರ ದಾಭೋಲ್ಕರ್,ಕೊಲ್ಲಾಪುರದ ಹೋರಾಟಗಾರ ಗೋವಿಂದ ಪಾನ್ಸರೆ ಅವರೂ ಕಲ್ಬುರ್ಗಿಯವರಿಗಿಂತ ಮೊದಲು ಅದೇರೀತಿ ಹತ್ಯೆಗೊಳಗಾಗಿದ್ದರು. ಆದರೆ ದಾಭೋಲ್ಕರ್ -ಪಾನ್ಸರೆ-ಕಲ್ಬುರ್ಗಿ ಅವರ ಹತ್ಯೆ ಸಂಭವಿಸಿ ವರ್ಷಗಟ್ಟಲೆ ಕಳೆದರೂ ಕೊಲೆಗಾರರ ಸುಳುಹು ದೊರೆತಿಲ್ಲ ಎನ್ನುವುದು ಹಂತಕ ವ್ಯವಸ್ಥೆಯ ಬೇರುಗಳು ಎಷ್ಟು ಆಳದ ತನಕ ಇಳಿದಿವೆ ಎನ್ನಲು ಸಾಕ್ಷಿಯಾಗಿವೆ.

ಇವತ್ತು ಎಲ್ಲೆಡೆ ಹಿಂಸೆಯನ್ನು ವೈಭವೀಕರಿಸುವ, ಒಪ್ಪಿಕೊಳ್ಳುವ ಉನ್ಮಾದದ ಮನಸ್ಥಿತಿ ಸೃಷ್ಟಿಸಲಾಗುತ್ತಿದೆ. ಪರಸ್ಪರರನ್ನು ಸಹಿಸಿಕೊಳ್ಳುವುದು ಅಪರೂಪದ ಮೌಲ್ಯವಾಗತೊಡಗಿದೆ. ಧರ್ಮ, ದೇವರು, ಜಾತಿ, ದೇಶ, ಭಾಷೆ ಕುರಿತ ಸಣ್ಣ ವಿಮರ್ಶೆಯೂ ತೀವ್ರ ಪ್ರತಿಕ್ರಿಯೆಗೆ ಕಾರಣವಾಗುತ್ತಿದೆ. ಅದಕ್ಕೆ ಪ್ರಸಕ್ತ ರಾಜಕೀಯ ಮತ್ತು ಮಾರುಕಟ್ಟೆ ವ್ಯವಸ್ಥೆಗಳು ಸೇರಿ ಹುಟ್ಟುಹಾಕಿರುವ ಹುಸಿ ಧಾರ್ಮಿಕತೆಯ ವಾತಾವರಣ ಕಾರಣವಾಗಿದೆ.

ಈಗ ದೇಶವು ಫ್ಯಾಸಿಸ್ಟರ ಕೈಯಲ್ಲಿ ಸಿಕ್ಕು ಒದ್ದಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಒಂದೆಡೆ ಕೋಮುವಾದದ ದಳ್ಳುರಿ ಇನ್ನೊಂದೆಡೆ ಭಯೋತ್ಪಾದನೆಯ ಕಿಚ್ಚು ಇವುಗಳ ನಡುವೆ ಜನಸಾಮಾನ್ಯರು ನಲುಗಿ ಹೋಗುತ್ತಿದ್ದಾರೆ. ಇತ್ತೀಚೆಗೆ ಸಂಸ್ಕೃತಿ ಧರ್ಮದ ನೆಪದಲ್ಲಿ ಗೋರಕ್ಷರೆನಿಸಿಕೊಂಡಿರುವ ನರಭಕ್ಷಕರು ದಲಿತರು, ಅಲ್ಪಸಂಖ್ಯಾತರು ಮಹಿಳೆಯರು ಮತ್ತು ದುಡಿಯವ ಜನರ ಮೇಲೆ ರಣಹದ್ದಿನಂತೆ ಎರಗುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇವರ ಗೂಂಡಾಗಿರಿ ದಿನದಿನಕ್ಕೆ ಹೆಚ್ಚಾಗುತ್ತಿದೆ. ಈವರೆಗೆ ಕೋಮುವಾದಿಗಳು ತೆರೆಮರೆಯಲ್ಲಿ ತಮ್ಮ ರಾಕ್ಷಸಿತನ ಮೆರೆಯುತ್ತಿದ್ದರು. ಆದರೆ ಈಗ ಖುಲ್ಲಂಖುಲ್ಲಾ ಎಲ್ಲೆಂದರಲ್ಲಿ ಜನಸಾಮಾನ್ಯರ ಮೇಲೆ ಎರಗು ಬೀಳುತ್ತಿದ್ದಾರೆ. ಕಾರಣ ಆಳುವ ಸರಕಾರವು ಕೋಮುವಾದಿಗಳ ಕೈಗೊಂಬೆಯಾಗಿದೆ. ಅಷ್ಟೆ ಅಲ್ಲ ಉಗ್ರ ಕೋಮುವಾದಿಗಳೇ ಪ್ರಭುತ್ವದ ಚುಕ್ಕಾಣಿ ಹಿಡಿದಿದ್ದಾರೆ.

ಹೀಗಾಗಿಯೇ ದೇಶದಾದ್ಯಂತ ಸಮಾನತೆ ಸಾರುವ ಬುದ್ದಿಜೀವಿ, ಕಲಾವಿದರು, ಸಮಾಜಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು ಕೊಲ್ಲಲಾಗುತ್ತಿದೆ. ಕೋಮುವಾದಿಗಳ ಕುತಂತ್ರಕ್ಕೆ ಬಲಿಯಾದ ಹುತಾತ್ಮರ ಸಂಖ್ಯೆ ಬೆಳೆಯುತ್ತಲೇ ಇದೆ. ಮಹಾತ್ಮಾ ಗಾಂಧಿಯಿಂದ ಹಿಡಿದು ನರೇಂದ್ರ ದಾಬೋಲ್ಕರ್, ಗೋವಿಂದ ಪಾನ್ಸಾರೆ ಮತ್ತು ಎಂ.ಎಂ.ಕಲಬುರ್ಗಿ ಇವರನ್ನು ಕೊಂದ ಘೋಡ್ಸೆಗಳು ಎಲ್ಲೆಲ್ಲಿಯೂ ರಾಜಾರೋಷವಾಗಿಯೇ ತಲೆಯೆತ್ತಿದ್ದಾರೆ.

ಇಷ್ಟೆಲ್ಲ ನಡೆದರೂ ಕರ್ನಾಟಕ ಸರಕಾರವು ಕಲಬುರ್ಗಿ ಹಂತಕರನ್ನು ಇನ್ನುವರೆಗೆ ಬಂಧಿಸಿಲ್ಲ. ಇದು ಖಂಡನಾರ್ಹ. 

ಈಗಾಗಲೇ ಸರಕಾರಕ್ಕೆ ಕಲಬುರ್ಗಿ ಹಂತಕರ ಸುಳಿವು ಸಿಕ್ಕ ಅಂದಾಜು ಇದೆ. ಅದಾಗ್ಯೂ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರ್ವಥಾ ಖಂಡನೀಯ.

ಹಾಗಾದರೆ ಕರ್ನಾಟಕ ಸರಕಾರವು ತನಗರಿವಿಲ್ಲದೆ ಕೋಮುವಾದಿಗಳ ಕುತಂತ್ರಕ್ಕೆ ಬಲಿಯಾಗುತ್ತಿದೆಯೇ? ಅಥವ ಕೇಂದ್ರದಲ್ಲಿರುವ ಕೋಮುವಾದಿ ಸರಕಾರದ ಹಿಟ್ಲರಿಜಂಗೆ ಭಯ ಬೀಳುತ್ತಿದೆಯೇ? ಎಂಬ ಪ್ರಶ್ನೆಗಳು ಕನ್ನಡಿಗರನ್ನು ಕಾಡುತ್ತಿವೆ. ಈ ದಿಸೆಯಲ್ಲಿ ಬರಲಿರುವ ಆಗಸ್ಟ್ ಮೂವ್ವತ್ತಕ್ಕೆ ಕಲಬುರ್ಗಿಯವರ ಹತ್ಯೆಯಾಗಿ ಬರೋಬ್ಬರಿ ಒಂದು ವರ್ಷ ಗತಿಸುತ್ತದೆ. ಒಂದು ವರ್ಷದ ಅವಧಿ ಸಣ್ಣದೇನಲ್ಲ. ಕನ್ನಡಿಗರ ಸಹನೆಗೂ ಒಂದು ಮಿತಿ ಇದೆ. ಈಗ ನಮ್ಮ ಮಿತಿಯ ಕಟ್ಟೆ ಒಡೆದಿದೆ. ಇನ್ನು ಕನ್ನಡ ನಾಡು ಒಳಗೊಂಡಂತೆ ದೇಶವನ್ನು ಫ್ಯಾಸಿಸಮ್ಮಿನಿಂದ ಮುಕ್ತಗೊಳಿಸಲೇಬೇಕಾಗಿದೆ.

ಆದ್ದರಿಂದ ದಿನಾಂಕ ೩೦.೮.೨೦೧೬ರಂದು ಮುಂಜಾನೆ ಹತ್ತು ಗಂಟೆಗೆ ಧಾರವಾಡದ ಎಂ.ಎಂ.ಕಲಬುರ್ಗಿಯವರ ಮನೆಯಿಂದ ರಾಷ್ಟ್ರಮಟ್ಟದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಆರ್ ಎಲ್ ಎಸ್ ಕಾಲೇಜ್ ಗ್ರೌಂಡಿನಲ್ಲಿ ೧೨ ಗಂಟೆಗೆ ’ಅಭಿವ್ಯಕ್ತಿ ಪರ ರಾಷ್ಟ್ರೀಯ ಸಮಾವೇಶ’ ನಡೆಯಲಿದೆ. ಪ್ರತಿಭಟನಾ ಮೆರವಣಿಗೆ ಮತ್ತು ಸಮಾವೇಶದಲ್ಲಿ ದೇಶದಾದ್ಯಂತ ಹೋರಾಟಗಾರಿರು, ವಿಚಾರವಾದಿಗಳು, ಸಾಹಿತಿಗಳು, ವಿಜ್ಞಾನಿಗಳೂ, ಕಲಾವಿದರು, ಚಲನಚಿತ್ರ ನಿರ್ದೇಶಕರು,ನಿರ್ಮಾಪಕರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಮತ್ತ ಸಮಾಜದ ಎಲ್ಲ ಸ್ತರದ ವಿವೇಕವಂತರು ಭಾಗವಹಿಸುತ್ತಿದ್ದಾರೆ. ೮೧ಕ್ಕೂ ಹೆಚ್ಚು ಸಂಘಟನೆಗಳು ಪಾಲ್ಗೊಳ್ಳುತ್ತಿವೆ. ನೀವೂ ಬನ್ನಿ ನಿಮ್ಮ ಸಂಘಟನೆಗಳ ಜೊತೆಗೆ

ಪಾಲ್ಗೊಳ್ಳುವ ಸಂಘಟನೆಗಳು:

೧) ಕರ್ನಾಟಕ ಸ್ವಾಭಿಮಾನಿ ವೇದಿಕೆ ಬೆಂಗಳೂರು
೨) ರಾಜ್ಯ ರೈತ ಸಂಘ ಕರ್ನಾಟಕ
೩) ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು
೪) ಜನವಾದಿ ಮಹಿಳಾ ಸಂಘಟನೆ ಕರ್ನಾಟಕ
೫) ಲಡಾಯಿ ಪ್ರಕಾಶನ ಗದಗ
೬) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಗದಗ
೭) ಪಂಪಕವಿ ಸಾಹಿತ್ಯ ವೇದಿಕೆ ಅಣ್ಣಿಗೇರಿ
೮) ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ
೯) ಚಿಂತನ ಉತ್ತರ ಕನ್ನಡ
೧೦) ಸಮಾನತೆಗಾಗಿ ಜನಾಂದೋಲನ ಕರ್ನಾಟಕ
೧೧) ಕರ್ನಾಟಕ ಕೋಮು ಸೌಹಾರ್ಧ ವೇದಿಕೆ
೧೨) ಅಭಿಮತ ಮಂಗಳೂರು
೧೩) ಸಮುದಾಯ ಕರ್ನಾಟಕ
೧೪) ದಲಿತ ಸಂಘರ್ಷ ಸಮಿತಿ ಕರ್ನಾಟಕ
೧೫) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಗೌರಿಬಿದನೂರು
೧೬) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಗುಲಬುರ್ಗಾ
೧೭) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಶಿವಮೊಗ್ಗ
೧೮) ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಕರ್ನಾಟಕ
೧೯) ಕರ್ನಾಟಕ ಜನಶಕ್ತಿ
೨೦) ಎ ಐ ಎಸ್ ಎಫ್ ಕರ್ನಾಟಕ
೨೧) ಎಸ್ ಎಪ್ ಐ ಕರ್ನಾಟಕ
೨೨) ಐಸಾ ಕರ್ನಾಟಕ
೨೩) ಕೆ ಎಸ್ ಎಪ್ ಕರ್ನಾಟಕ
೨೪) ಎ ಐ ಡಿ ಎಸ್ ಓ ಕರ್ನಾಟಕ
೨೫) ಬಿ ವಿ ಎಸ್ ಕರ್ನಾಟಕ
೨೬) ಹೊಸತು ಪತ್ರಿಕೆ ಬೆಂಗಳೂರು
೨೭) ಜನಶಕ್ತಿ ಪತ್ರಿಕೆ ಬೆಂಗಳೂರು
೨೮) ಕೆಂಬಾವುಟ ಪತ್ರಿಕೆ ಬೆಂಗಳೂರು
೨೯) ಸಾಕೇತ ಪತ್ರಿಕೆ ಬೆಂಗಳೂರು
೩೦) ಅಗ್ನಿ ಪತ್ರಿಕೆ ಬೆಂಗಳೂರು
೩೧) ಅವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಧಾರವಾಡ
೩೨) ಏ ಐ ಡಿ ವೈ ಓ ಕರ್ನಾಟಕ
೩೩) ದಕ್ಷಿಣಾಯನ 
೩೪) ಇಪ್ಟಾ ಕರ್ನಾಟಕ
೩೫) ಸಹಮತ ಫಿಲ್ಮ್ ಸೊಸೈಟಿ ಮಂಗಳೂರು 
೩೬) ಪಿಯುಸಿಎಲ್ ಕರ್ನಾಟಕ
೩೭) ಅಭಿನವ ಪ್ರಕಾಶನ ಬೆಂಗಳೂರು
೩೮) ಝೆನ್ ಟೀಮ್ ತುಮಕೂರು
೩೯) ಸಹಯಾನ ಕೆರೆಕೋಣ
೪೦) ಮಾನವ ಬಂಧುತ್ವ ವೇದಿಕೆ ಕರ್ನಾಟಕ
೪೧) ಭಾರತೀಯ ಮಹಿಳಾ ಒಕ್ಕೂಟ ಕರ್ನಾಟಕ
೪೨) ವಿಮಾ ನೌಕರರ ಸಂಘ ಧಾರವಾಡ
೪೩) ಉತ್ತರ ಕರ್ನಾಟಕ ಲೇಖಕಿಯರ ಸಂಘ ಧಾರವಾಡ
೪೪) ಬಸವ ಕೇಂದ್ರ ಧಾರವಾಡ
೪೫) ಕರ್ನಾಟಕ ವಿದಾವರ್ಧಕ ಸಂಘ ಧಾರವಾಡ
೪೬) ಇಂಗ್ಲೀಷ ಅದ್ಯಾಪಕರ ಸಂಘ ಕವಿವಿ ಧಾರವಾಡ
೪೭) ಡಿವೈಎಫ್‌ಐ ಕರ್ನಾಟಕ
೪೮) ಎ ವೈ ಡಿ ಎಫ್ ಐ ಕರ್ನಾಟಕ
೪೯) ಗ್ರಾಮೀಣ ಕೂಲಿಕಾರರ ಸಂಘ ಧಾರವಾಡ
೫೦) ಸಾಧನಾ ಧಾರವಾಡ
೫೧) ಚಿಲಿಪಿಲಿ ಪ್ರಕಾಶನ ಧಾರವಾಡ
೫೨) ಕವಿ ಪ್ರಕಾಶನ ಕವಲಕ್ಕಿ
೫೩) ಕರ್ನಾಟಕ ಜನ ಸಾಹಿತ್ಯ ಸಂಘಟನೆ ಧಾರವಾಡ
೫೪) ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ
೫೫) ಕ.ಸಾ.ಪ. ಜಿಲ್ಲಾ ಘಟಕ, ಹಾವೇರಿ
೫೬) ಕ.ಸಾ.ಪ. ಜಿಲ್ಲಾ ಘಟಕ, ಗದಗ
೫೭) ಕ.ಸಾ.ಪ. ಜಿಲ್ಲಾ ಘಟಕ, ಬೆಳಗಾವಿ
೫೮) ಕ.ಸಾ.ಪ. ಜಿಲ್ಲಾ ಘಟಕ, ವಿಜಯಪುರ
೫೯) ಕ.ಸಾ.ಪ. ಜಿಲ್ಲಾ ಘಟಕ, ಬಾಗಲಕೋಟೆ
೬೦) ಕ.ಸಾ.ಪ. ಜಿಲ್ಲಾ ಘಟಕ, ಧಾರವಾಡ
೬೧) ಕ.ಸಾ.ಪ. ಜಿಲ್ಲಾ ಘಟಕ, ಕಲಬುರ್ಗಿ
೬೨) ಕ.ಸಾ.ಪ. ಜಿಲ್ಲಾ ಘಟಕ, ಕೊಪ್ಪಳ
೬೩) ಕ.ಸಾ.ಪ. ಜಿಲ್ಲಾ ಘಟಕ, ಬಳ್ಳಾರಿ
೬೪) ಕ.ಸಾ.ಪ. ಜಿಲ್ಲಾ ಘಟಕ, ರಾಯಚೂರ
೬೫) ಕ.ಸಾ.ಪ. ಜಿಲ್ಲಾ ಘಟಕ, ಯಾದಗೀರ
೬೬) ಕರ್ನಾಟಕ ಥಿಂಕರ‍್ಸ್ ಪೋರಂ ಧಾರವಾಡ
೬೭) ಬಸವದಳ ಧಾರವಾಡ
೬೮) ಹೈಕೋರ್ಟ್ ವಕೀಲರ ಸಂಘ ಧಾರವಾಡ
೬೯) ಜಿಲ್ಲಾ ವಕೀಲರ ಸಂಘ ಧಾರವಾಡ
೬೯) ಎಸ್ಸಿ ಎಎಸ್ಟಿ ಸಂಶೋಧನಾ ಸಂಘಟನೆ ಕವಿವ್ರಿ ಧಾರವಾಡ
೭೦) ಸ್ವರಾಜ್ಯ ಅಭಿಯಾನ ಧಾರವಾಡ
೭೧) ಜನ ಸಂಗ್ರಾಮ ಪರಿಷತ್ ಕರ್ನಾಟಕ
೭೨) ಸಮಾಜ ಪರಿವರ್ತನಾ ಸಂಸ್ಥೆ ಕರ್ನಾಟಕ
೭೩) ಅಖಿಲ ಭಾರತ ಸಂಸ್ಕೃತಿಕ ಮಂಚ ಕರ್ನಾಟಕ
೭೪) ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ ಕರ್ನಾಟಕ 
೭೫) ಆಲ್ ಇಂಡಿಯಾ ಲಾಯರ‍್ಸ್ ಯುನಿಯನ್ ಕರ್ನಾಟಕ 
೭೬) ಕನ್ನಡ ಪರ ಸಂಘಟನೆಗಳ ಕೂಟ ಬೆಂಗಳೂರು
೭೭) ಅಖಿಲ ಭಾರತ ವಿಚಾರವಾದಿಗಳ ಸಂಘ ಬೆಂಗಳೂರು
೭೮) ಕರ್ನಾಟಕ ರಣಧೀರ ಪಡೆ ಬೆಂಗಳೂರು
೭೯) ದಲಿತ ಹಕ್ಕುಗಳ ಸಮಿತಿ ಕರ್ನಾಟಕ
೮೦) ಅರುಣೋದಯ ಕಲಾ ತಂಡ ಕೊತಬಾಳ
೮೧) ದಲಿತ ಸಂಘಟನೆಗಳ ಒಕ್ಕೂಟ ಕರ್ನಾಟಕ

(ಅಪೂರ್ಣ)
ನಿಮ್ಮ ಸಂಘಟನೆಗಳನ್ನೂ ಸೇರಿಸಿ. ನಿಮ್ಮ ಭಾಗವಹಿಸುವಿಕೆಯನ್ನು ನಮ್ಮ ಗಮನಕ್ಕೆ ತನ್ನಿ

No comments:

Post a Comment