Jun 15, 2016

ನಕ್ಷತ್ರದ ಧೂಳು

rohit vemula
15/06/2016
ಭಾರತದಲ್ಲಿ ತಳಸಮುದಾಯಗಳಿಂದ ಬಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಹಂತದವರಗೆ ತಲುಪುವುದೇ ಒಂದು ಸಾಹಸ. ಬದುಕಿನ ಸಂಕಷ್ಟಗಳ ಜೊತೆಯಲ್ಲಿ ಸಮಾಜ ಮತ್ತು ಶಿಕ್ಷಣ ವ್ಯವಸ್ಥೆಗಳು ಅಡಿಗಡಿಗೂ ಅವರನ್ನು ಜಗ್ಗುತ್ತಿರುತ್ತವೆ. ಆದರೆ ಎಲ್ಲಾ ಅಡೆತಡೆಗಳ ನಡುವೆಯೂ ಅದಮ್ಯ ಉತ್ಸಾಹ ಮತ್ತು ಕನಸುಗಳಿಂದ ಇಂತಹ ವಿದ್ಯಾರ್ಥಿಗಳು ಅಲ್ಲಿಗೆ ಪ್ರವೇಶಿಸುತ್ತಾರೆ. ಆದರೆ, ನಮ್ಮ ಜಾತಿ ಪೂರ್ವಗ್ರಹಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಟ್ಟವಾಗಿರುವುದರಿಂದ ಅಲ್ಲಿ ಇಂತಹ ವಿದ್ಯಾರ್ಥಿಗಳನ್ನು ಸಂದಿಗ್ಧತೆಗೆ ತಳ್ಳಿಬಿಡುತ್ತವೆ.

ಈ ಸಂಗತಿಯನ್ನು ನಕ್ಷತ್ರದ ಧೂಳು ನಾಟಕ ಪ್ರತಿಫಲಿಸುತ್ತದೆ. ಇತ್ತೀಚೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಬದುಕಿನ ಕಥೆಯನ್ನಿಟ್ಟುಕೊಂಡು ಈ ನಾಟಕ ರಚಿಸಲಾಗಿದೆ. ರೋಹಿತನ ಅದಮ್ಯ ಕನಸುಗಳು, ಸಾಮಾಜಿಕ ತುಡಿತಗಳನ್ನು ನಾಟಕ ಪ್ರತಿಫಲಿಸುತ್ತದೆ. ರೋಹಿತ್‌ನ ಬದುಕಿನಲ್ಲಿ ಸಮಾಜ, ಸಿದ್ಧಾಂತ, ಶಿಕ್ಷಣವ್ಯವಸ್ಥೆ ಮತ್ತು ರಾಜಕೀಯಗಳು ವಹಿಸಿದ ಪಾತ್ರಗಳನ್ನು ಇಲ್ಲಿ ತೆರೆದಿಡಲಾಗಿದೆ. ರೋಹಿತ್ ಬದುಕಿ‌ನ ಹೋರಾಟ, ಚಿಂತನೆ ಹಾಗೂ ಆಶಯಗಳನ್ನು ಅರಿಯುವ ಪ್ರಯತ್ನವನ್ನು ಈ ನಾಟಕದ ಮೂಲಕ ಮಾಡಲಾಗಿದೆ.

ಒಂದು ಸಮಾಜವಾಗಿ, ಒಂದು ವ್ಯವಸ್ಥೆಯಾಗಿ ರೋಹಿತ್ ನಂತಹ, ಕನಸುಗಣ್ಣಿನ, ಉತ್ಸಾಹಿ, ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಇಲ್ಲದಂತೆ ಮಾಡುವ ಬಗ್ಗೆ, ಕಳೆದುಕೊಂಡು ಬಿಡುವ ಬಗ್ಗೆ ನಮ್ಮನ್ನು ಚಿಂತಿಸಲು, ಮರುಚಿಂತಿಸಲು ಈ ನಾಟಕ ಪ್ರೇರೇಪಿಸುತ್ತದೆ.

No comments:

Post a Comment