tag:blogger.com,1999:blog-2184149327937279188.post6697903711921895598..comments2023-08-16T12:58:18.821+05:30Comments on ಹಿಂಗ್ಯಾಕೆ?: ಉತ್ತರಪ್ರದೇಶ: ಮಾಯಾವತಿ ಮತ್ತು ಮುಸ್ಲಿಂ ಸಮುದಾಯ!Ashok K Rhttp://www.blogger.com/profile/03223206800684997836noreply@blogger.comBlogger1125tag:blogger.com,1999:blog-2184149327937279188.post-8508412334510947032016-07-01T16:39:23.256+05:302016-07-01T16:39:23.256+05:30ಉತ್ತರ ಪ್ರದೇಶದಲ್ಲಿ ಮಾಯಾವತಿಯ ಸಮೀಕರಣವು ಗೆಲುವು ಸಾಧಿಸುವ...ಉತ್ತರ ಪ್ರದೇಶದಲ್ಲಿ ಮಾಯಾವತಿಯ ಸಮೀಕರಣವು ಗೆಲುವು ಸಾಧಿಸುವ ಸಂಭವ ಹೆಚ್ಚಾಗಿದೆ. ಇದಕ್ಕೆ ಪ್ರಧಾನ ಕಾರಣ ಬಿಜೆಪಿಯು ಕೇಂದ್ರದಲ್ಲಿ ಭಾರೀ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದರೂ ಅದನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಗಿಂತ ಇಂದು ನಿರುದ್ಯೋಗ ದೇಶದಲ್ಲಿ ಹೆಚ್ಚುತ್ತಿರುವುದು ಎದ್ದು ಕಾಣುವ ಸತ್ಯ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಇಂಜಿನಿಯರ್ ಶಿಕ್ಷಣ ಪಡೆದರೂ ಇಂದು ದೇಶದಲ್ಲಿ ಲಕ್ಷಾಂತರ ಇಂಜಿನಿಯರುಗಳಿಗೆ ಕೆಲಸವಿಲ್ಲದ ಸ್ಥಿತಿ ನಿರ್ಮಾಣವಾಗಿ ಆ ಶಿಕ್ಷಣ ಪಡೆದವರು ಹೊಟ್ಟೆಪಾಡಿಗೆ ಸಿಕ್ಕಿದ ಯಾವುದೇ ಕೆಲಸ ಮಾಡುವ ಅನಿವಾರ್ಯತೆಗೆ ಬಿದ್ದಿದ್ದಾರೆ. ಇದು ನರೇಂದ್ರ ಮೋದಿಯವರ "ಅಚ್ಚೇ ದಿನ್" ಆಶ್ವಾಸನೆಗೆ ವಿರುದ್ಧವಾಗಿದೆ. ಇದರಿಂದ ಯುವ ಜನಾಂಗ ಭ್ರಮನಿರಸನಗೊಳ್ಳುತ್ತಿದ್ದಾರೆ. 'ಡಿಜಿಟಲ್ ಇಂಡಿಯಾ' ಎಂಬ ಮೋದಿಯವರ ಘೋಷಣೆ ಹಳ್ಳ ಹಿಡಿದಿದೆ. ಹಳ್ಳಿಗಳಿಗೆ ಕನಿಷ್ಠ ಒಂದು ೩ಜಿ ಸಂಪರ್ಕ ಒದಗಿಸುವ ಕೆಲಸ ಕೂಡ ಆಗಿಲ್ಲ. ಲಕ್ಷಾಂತರ ರೂಪಾಯಿಗಳಿಗೆ ತರಂಗಾಂತರ ಹರಾಜು ಹಾಕಿ ಸರಕಾರ ಹಣ ಮಾಡುವ ಕೆಲಸದಲ್ಲಿ ತೊಡಗಿದೆಯೇ ಹೊರತು ಆ ಹಣದ ಒಂದು ಪಾಲನ್ನು ಬಿಎಸ್ಸೆನ್ನೆಲ್ ಸಂಸ್ಥೆಗೆ ಒದಗಿಸಿ ದೇಶಾದ್ಯಂತ ೩ಜಿ ಸಂಪರ್ಕ ಒದಗಿಸುವ ಕೆಲಸ ಮಾಡಬಹುದಾಗಿತ್ತಾದ್ದರೂ ಅಂಥ ದೂರದೃಷ್ಟಿ ಮೋದಿ ಸರ್ಕಾರಕ್ಕೆ ಇಲ್ಲ. ಬರೀ ಡಿಜಿಟಲ್ ಇಂಡಿಯಾ ಎಂದು ಸರ್ಕಾರ ಡೋಲು ಬಾರಿಸುತ್ತಲೇ ಕಾಲಹರಣ ಮಾಡುತ್ತಿದೆ. <br /><br />ದೇಶದಲ್ಲಿ ಬೆಲೆಯೇರಿಕೆ ಬಿಸಿ ಜನಸಾಮಾನ್ಯರ ಜೀವನ ದುರ್ಬರ ಮಾಡುತ್ತಿದೆ. ಕೇಂದ್ರ ಸರ್ಕಾರ ತನ್ನ ನೌಕರರ ಸಂಬಳ ಏರಿಸಿದರೂ ಜನಸಾಮಾನ್ಯರ ಸಂಬಳ ಯಾರು ಏರಿಸುತ್ತಾರೆ? ಖಾಸಗಿ ಸಂಸ್ಥೆಗಳಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ಇಂದು ದೇಶಾದ್ಯಂತ ಕೋಟ್ಯಂತರ ಮಂದಿ ದುಡಿಯುತ್ತಿದ್ದಾರೆ. ಇವರ ಸಂಬಳ ಯಾರು ಏರಿಸುತ್ತಾರೆ? ಇವರಿಗೆ ಯಾವ 'ಪೇ ಕಮಿಷನ್ ' ಕೂಡ ಇಲ್ಲ. ಕೋಟ್ಯಂತರ ರೈತರು ಬೆಳೆಗಳಿಗೆ ಸಮರ್ಪಕ ಬೆಲೆಯಿಲ್ಲದೆ ಸೊರಗುತ್ತಿದ್ದಾರೆ. ಇವರ ಬೆಳೆಗಳಿಗೆ ಬೆಲೆ ಏರಿಸುವ 'ಪೇ ಕಮಿಷನ್' ಇಲ್ಲ. ಇಂಥ ಜನರ ಸಮಸ್ಯೆಗಳಿಗೆ ಮೋದಿ ಸರ್ಕಾರದ ಬಳಿ ಉತ್ತರ ಇಲ್ಲ. ಇದರಿಂದಾಗಿ ಜನ ಭ್ರಮನಿರಸನಗೊಂಡು ಬಿಜೆಪಿಯಿಂದ ದೂರ ಸರಿಯುವ ಸಂಭವ ಅಧಿಕವಾಗಿದೆ. ತಮ್ಮ ಸಿಟ್ಟನ್ನು ಬೇರೆ ಪಕ್ಷವನ್ನು ಆರಿಸುವ ಮೂಲಕ ತೋರಿಸುವ ಸಂಭವ ಅಧಿಕ. anand prasadhttps://www.blogger.com/profile/09623502548493814304noreply@blogger.com