tag:blogger.com,1999:blog-2184149327937279188.post1509860101511210002..comments2023-08-16T12:58:18.821+05:30Comments on ಹಿಂಗ್ಯಾಕೆ?: ಪ್ರಭುತ್ವದ ಅಸಹಿಷ್ಣುತೆ!Ashok K Rhttp://www.blogger.com/profile/03223206800684997836noreply@blogger.comBlogger1125tag:blogger.com,1999:blog-2184149327937279188.post-91979525802408739442015-12-23T09:22:49.105+05:302015-12-23T09:22:49.105+05:30ಶಾರುಕ್ ಖಾನ್ ಅಸಹಿಷ್ಣುತೆಯ ಬಗ್ಗೆ ಹೇಳಿಕೆ ನೀಡಿದ್ದನ್ನು ನ...ಶಾರುಕ್ ಖಾನ್ ಅಸಹಿಷ್ಣುತೆಯ ಬಗ್ಗೆ ಹೇಳಿಕೆ ನೀಡಿದ್ದನ್ನು ನೆಪವಾಗಿ ಇಟ್ಟುಕೊಂಡು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶಾರುಕ್ ಖಾನ್ ಅಭಿನಯದ 'ದಿಲ್ವಾಲೇ' ಚಿತ್ರದ ಪ್ರದರ್ಶನವನ್ನು ಇನ್ನು ಮುಂದೆ ನಡೆಸಬಾರದೆಂದು ಚಿತ್ರಮಂದಿರದ ವ್ಯವಸ್ಥಾಪಕರಿಗೆ ಬೆದರಿಕೆ ಹಾಕಿ ಬಲಾತ್ಕಾರದಿಂದ ನಿಲ್ಲಿಸಿದ ಘಟನೆ ನಡೆದಿದೆ. ಚಿತ್ರ ಮಂದಿರವನ್ನು ಲೇಸಿಗೆ ಪಡೆದವರು ಓರ್ವ ಹಿಂದೂವೇ ಆದರೂ ಇವರು ಈ ರೀತಿ ಹಿಂದೂಗಳಿಗೆಯೇ ತೊಂದರೆ ಕೊಡುತ್ತಾರೆ. ಚಿತ್ರ ಪ್ರದರ್ಶನ ರದ್ದಿನಿಂದ ಅದನ್ನು ಲೇಸಿಗೆ ಪಡೆದ ಹಿಂದೂ ಬಾಂಧವರಿಗೆ ಒಂದು ಲಕ್ಷ ರೂಪಾಯಿ ನಷ್ಟ ಆಗಿದೆ ಎಂದು ಅವರು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ. ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಈ ಗೂಂಡಾಗಿರಿಯನ್ನು ಇವುಗಳ ಪೋಷಕರಾದ ಬಿಜೆಪಿಯವುರು ಖಂಡಿಸಿಲ್ಲ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬುದಕ್ಕೆ ಇವರು ತಮ್ಮ ದರ್ಪ ಹಾಗೂ ಅಹಂಕಾರಗಳಿಂದ ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. ಆಳುವ ಪಕ್ಷದ ವಿರುದ್ಧ ಯಾರೂ ಮಾತನಾಡಬಾರದು, ಟೀಕಿಸಬಾರದು ಎಂಬ ಈ ನಿಲುವು ಸರ್ವಾಧಿಕಾರದ ನಿಲುವಾಗಿದ್ದು ಇಂಥ ಅಸಹನೆಯ ವಿರುದ್ಧ ನಿರಂತರ ಜಾಗೃತಿ ಇಂದಿನ ಅಗತ್ಯ. ಇಲ್ಲದಿದ್ದರೆ ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಪಾಳೇಗಾರಿಕೆ ಹಾಗೂ ದಬ್ಬಾಳಿಕೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಕಣ್ಣು ಮುಚ್ಚುವ ಸಂಭವವಿದೆ. anand prasadhttps://www.blogger.com/profile/09623502548493814304noreply@blogger.com